ಚಳ್ಳಕೆರೆ .
ಶ್ರೀಹರಿಹರಸುತ ಸೇವಾ ಸಮಿತಿಯ ಶ್ರೀ ಅಯ್ಯಪ್ಪ ಸ್ವಾಮಿ ಯಸನ್ನಿಧಿಯಲ್ಲಿ 48 ದಿನಗಳ ಕಾಲ ವ್ರತವನ್ನು ಕೈಗೊಂಡ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಮಹಾ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದ ನಂತರ ಶಬರಿಮಲೆ ಅಯಯ್ಯಪ್ಪ ಸನ್ನಿಧಿ ಯಲ್ಲಿ ಮಕರ ಜ್ಯೋತಿ ದರ್ಶನ ಪಡೆಯಲು ಪ್ರಯಾಣ ಬೆಳೆಸಿದರು.
ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ, ಪುಣ್ಯಪ್ರದವಾದ ಹದಿನೆಂಟು ಮೆಟ್ಟಿಲುಗಳಿಗೆ ಶ್ರೇಷ್ಠ ಪಡಿ ಪೂಜೆ ನಡೆಸಲಾಯಿತು. ವಿಶೇಷವಾಗಿ ಸ್ವಾಮಿಯ ಮೂರ್ತಿಗೆ ಅಭಿಷೇಕ, ಭಸ್ಮ, ಹಾಲು, ಜೇನು, ಪಂಚಾಮೃತ, ಸೀಯಾಳ ನೀರು, ಶ್ರೀಗಂಧ, ಚಂದನ, ಪನ್ನೀರು, ಸೇರಿದಂತೆ ವಿವಿಧ ಪದಾರ್ಥಗಳಿಂದ ಅಭಿಷೇಕ ನೆರವೇರಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಭಕ್ತರು ಮಾಲಾಧಾರಿಗಳಿಂದ ತುಪ್ಪದ ಕಾಯಿಗಳನ್ನು ತುಂಬಿಸಿದರು, ನಂತರ ಸನ್ನಿಧಿಯಲ್ಲಿ ಇರುಮುಡಿಕಟ್ಟಿ ಪೂಜೆ ಸಲ್ಲಿಸಿ. ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆಗಳನ್ನು ಹಾಡುತ್ತಾ ಸನ್ನಿಧಿಯಿಂದ ಶ್ರೀ ಶಕ್ತಿ ಆಂಜನೇಯ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಬರಿಮಲೆ ಯಾತ್ರೆಗೆ ತೆರಳಿದರು. ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಮಹಾ ಪೂಜೆ, ಧಾರ್ಮಿಕ ಕಾರ್ಯಕ್ರಮ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯದರ್ಶನಕ್ಕೆ ಮಾಲಾಧಾರಿಗಳ ಯಾತ್ರೆ ತೆರಳಿತು.
![](https://janadhwani.in/wp-content/uploads/2024/01/IMG-20240110-WA00781-scaled.jpg)
ಶಬರಿಮಲೆ ಯಾತ್ರೆಗೆ ತೆರಳುವ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಗೆ ನೆರೆದಂತಹ ನೂರಾರು ಭಕ್ತಾದಿಗಳು ನಮಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಹರಿಹರಸುತ ಸೇವಾ ಸಮಿತಿ ಸದಸ್ಯ ಕೀರ್ತಿ ಪ್ರಸಾದ್ ಶುಭಕೋರಿ ನಾಡಿನ ಸಮಸ್ತ ಅಯ್ಯಪ್ಪ ಮಾಲಾದಾರಿಗಳಿಗೆ ಹಾಗೂ ಭಕ್ತರಿಗೆ ಮಕರ ಸಂಕ್ರಾಂತಿ ಹಾಗೂ ಮಕರ ಜ್ಯೋತಿಯ ಆರ್ಥಿಕ ಶುಭಾಶಯ ಹೇಳಿದರು ಅಯ್ಯಪ್ಪ ಮಾಲಾದಾರಿಗಳು ಶಬರಿಮಲೆ ಯಾತ್ರೆ ಶುಭವಾಗಲಿ ಎಂದು ಹಾರೈಸಿದರು.
0 Comments