ಹಿರಿಯೂರು:
ಯಾವುದೇ ಧಾರ್ಮಿಕತೆಯನ್ನು ಬಿಂಬಿಸುವ ದೇವಾಲಯಗಳು, ಮಂದಿರಗಳು ಮತ್ತು ಸಮುದಾಯ ಭವನಗಳು ಈ ದೇಶದ ಭವ್ಯ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಪರಿಚಯಿಸುವ ಕೇಂದ್ರಗಳಾಗಬೇಕು ಎಂಬುದಾಗಿ ಆದಿಚುಂಚನಗಿರಿ ಮಠದ ಶ್ರೀಸೌಮ್ಯನಾಥಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿ ಯೋಗಿನಾರಾಯಣ ತಾಲೂಕು ಬಲಿಜ ಸಂಘ ನಿರ್ಮಿಸಿರುವ ದೇಗುಲ-ಬಲಿಜ ಶ್ರೇಯ ಭವನ ಲೋಕಾರ್ಪಣೆ ಸಮಾರಂಭದ ದಿವ್ಯಸಾನ್ನಿಧ್ಯವನ್ನು ವಹಿಸಿ, ಅವರು ಮಾತನಾಡಿದರು.
ಈ ದೇಶದ ಬಲಿಜ ಸಮುದಾಯ ಅತ್ಯಂತ ಶ್ರಮಿಕ ಸಮುದಾಯವಾಗಿದ್ದು, ಈ ಸಮುದಾಯದ ಜನರು ಉತ್ತಮ ಸಂಸ್ಕಾರ, ಭವ್ಯ ಪರಂಪರೆ, ಸೇವಾ ಮನೋಭಾವ, ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ಸಮಾಜದ ಪ್ರಗತಿ ಜೊತೆ ಮಾನವೀಯಮೌಲ್ಯ ಬೆಳವಣಿಗೆಗೆ ಒತ್ತು ನೀಡಬೇಕು ಎಂದರಲ್ಲದೆ,
ಈ ಬಲಿಜ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದುವರೆಯಲು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಅಕ್ಷರ ಜ್ಞಾನದ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ಸರಿಯಾದ ಮಾರ್ಗ ಅನುಸರಿಸುತ್ತಾರೆ ಎಂಬುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ, ಪ್ರೀತಿ ವಿಶ್ವಾಸ, ನಂಬಿಕೆ, ಸಮಾಜಮುಖಿ ಚಿಂತನೆ ಸೇವಾಮನೋಭಾವಕ್ಕೆ ಮತ್ತೊಂದು ಹೆಸರೇ ಬಲಿಜ ಸಮಾಜ, ಈ ಸಮಾಜ ತಾಲೂಕಿನಲ್ಲಿ ದೊಡ್ಡಸಮುದಾಯಗಳ ಜೊತೆ ಅವಿನಾಭಾವ ಸಂಬಂಧ ಹೊಂದುವ ಮೂಲಕ ಸೌಹಾರ್ದತೆಯ ಬದುಕು ಕಟ್ಟಿಕೊಂಡಿದ್ದು, ಶ್ರಮಸಂಘಟನೆಯಿಂದ ಬಲಿಜ ಶ್ರೇಯಭವನ ನಿರ್ಮಿಸಿರುವುದು ಮಾದರಿ ಕಾರ್ಯ ಎಂಬುದಾಗಿ ಹೇಳಿದರು.
ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಮಾತನಾಡಿ, ಯೋಗಿನಾರಾಯಣ ಸ್ವಾಮಿಯವರನ್ನು ಯಾವುದೇ ಒಂದು ಜಾತಿಜನಾಂಗಕ್ಕೆ ಸೀಮಿತವಾದವರಲ್ಲ, ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗಾಗಿ ಶ್ರಮಿಸಿದ ಮಹಾನ್ ಚೇತನ ಎಂಬುದಾಗಿ ಹೇಳಿದರು.
ಗೌರಿಗದ್ದೆ ಶ್ರೀವಿನಯಗುರೂಜಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಆ ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ಬೆಳೆಸಲು ಅವಿರತವಾಗಿ ಶ್ರಮಿಸುತ್ತಿರುವ ಶಿಕ್ಷಣಪ್ರೇಮಿ ನಾ.ತಿಪ್ಪೇಸ್ವಾಮಿ ಅವರ ಸಮಾಜಮುಖಿ ಚಿಂತನೆ ಮಾದರಿಯಾಗಿದೆ. ಸಮಾಜದ ಕೆಲಸದ ಜೊತೆ ಸಮುದಾಯದ ಶ್ರೇಯೋಭಿವೃದ್ಧಿಗೆ ಸಂಕಲ್ಪ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯನಿರ್ವಾಹಕ ನಾ.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದ ಪ್ರಮುಖ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ ಸಮಾಜದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಆದಿಚುಂಚನಗಿರಿಮಠ, ಆರೋಗ್ಯ,ಶಿಕ್ಷಣ, ಪರಿಸರ ಕಾಳಜಿ, ಪರಂಪರೆ ಮಕ್ಕಳಲ್ಲಿ ಸಂಸ್ಕಾರ ಜ್ಞಾನ ಬೆಳೆಸಿ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
ಇದೇ ಸಂದರ್ಭದಲ್ಲಿ ಲಕ್ಷ್ಮಿವೆಂಕಟೇಶ್ವರ, ಮಹಾಗಣಪತಿ ಹಾಗೂ ಯೋಗಿನಾರಾಯಣಸ್ವಾಮಿ ದೇವರಬಿಂಬ ಪ್ರತಿಷ್ಟಾಪನಾ ಮಹೋತ್ಸವ ಹಾಗೂ ಹೋಮ-ಹವನ, ಬಿಂಬ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಸಂಸದ ಜನಾರ್ದನಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜ್, ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್, ಡಾ.ವೇಣುಗೋಪಾಲ್, ಬಲಿಜ ಸಂಘದ ಜಿಲ್ಲಾಧ್ಯಕ್ಷ ಎಂ.ಎ ಸೇತೂರಾಂ, ತಾಲೂಕಾಧ್ಯಕ್ಷ ಎನ್.ತಿಮ್ಮಾಶ್ರೇಷ್ಠಿ, ಚಿದಾನಂದ್, ವಿ.ಸೂರ್ಯನಾರಾಯಣ, ಎಚ್.ವಿ.ವೆಂಕಟೇಶ್, ಎಂ.ಬಿ.ನರೇಂದ್ರಬಾಬು, ಅಶೋಕ್, ಬಿ.ಎನ್.ಪ್ರಕಾಶ್, ಎಂ.ಜಯಣ್ಣ, ಆನಂದ ಶ್ರೇಷ್ಠಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments