ಚಳ್ಳಕೆರೆ ಫೆ.23 ದಿನಾಂಕ 12.03.2023ನೇ ಭಾನುವಾರ ದಂದು ನಗರದಲ್ಲಿ ನಡೆಯುವ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಾಡಿನ ಜಾನಪದ ಹಾಗೂ ಬುಡಕಟ್ಟು ಸಮುದಾಯದ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಜಾನಪದ ವಿದ್ವಾಂಸ ಡಾ. ಕಲಮರಹಳ್ಳಿ ಮಲ್ಲಿಕಾರ್ಜುನರವರನ್ನು ಚಳ್ಳಕೆರೆ ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಘೋಷಿಸಿದರು.
ಸಮ್ಮೇಳನದ ಪ್ರಯುಕ್ತ ಈಗಾಗಲೆ ೨-೩ ಬಾರಿ ಕರ್ಯಕಾರಿ ಸಮಿತಿ ಸಭೆ ನಡೆಸಲಾಗಿದೆ. ಪ್ರಚಾರ ಸಮಿತಿ, ಸ್ವಾಗತ, ಹಣಕಾಸು, ಕರ್ಯಕ್ರಮ ನಿರ್ವಹಣೆ, ಆಹಾರ, ವೇದಿಕೆ ಹೀಗೆ ವಿವಿಧ ಸಮಿತಿ ರಚನೆಯ ಮೂಲಕ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಹಕಾರ ಹಾಗೂ ಆರ್ಥಿಕ ನೆರವು ನೀಡುವಂತೆ ಸಂಘ-ಸAಸ್ಥೆ, ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಖ್ಯಾತ ಕಥೆಗಾರ ತಿಪ್ಪಣ್ಣ ಬಿ.ಮರಿಕುಂಟೆ, ಸಮ್ಮೇಳನದ ನೆನಪಿಗೆ ತಾಲ್ಲೂಕು ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ, ಕೃಷಿ ಹಾಗೂ ರಾಜಕೀಯ ಅಂಶಗಳನ್ನೊಳಗೊAಡ ಸ್ಮರಣ ಸಂಚಿಕೆ ಪುಸ್ತಕವನ್ನು ತಪ್ಪದೆ ಹೊರತರಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷರಲ್ಲಿ ಮನವಿ ಮಾಡಿದರು.
ತಾಲೂಕು ಸಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಪ್ರಾಚಾರ್ಯ. ಸಾಹಿತಿ ಡಾ ಕಲಮರಹಳ್ಳಿ ಮಲ್ಲಿಕಾರ್ಜುನ
ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ, ಸೂಕ್ತವಾದ ವ್ಯಕ್ತಿಯನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಕಸಾಪದ ಕೆಲಸ ಶ್ಲಾಘನೀಯವಾದುದು.
ಭಾಷಣದ ಪ್ರತಿ ಸಂಕ್ಷಿಪ್ತವಾಗಿರಬೇಕು. ಸಮ್ಮೇಳನದ ಅಧ್ಯಕ್ಷರ ಭಾಷಣಕ್ಕೆ ಯಾವುದೇ ರೀತಿಯ ಕಡಿವಾಣ ಹಾಕಬಾರದು.
ತಾಲ್ಲೂಕಿನ ಮೌಖಿಕ-ಶಿಷ್ಟ ಪರಂಪರೆಯ ಸಾಹಿತ್ಯ, ಮಹಿಳಾ ಚಿಂತನೆ, ಕೃಷಿ ಕ್ಷೇತ್ರದ ಬದಲಾವಣೆ ದೂರದೃಷ್ಟಿ ಚಿಂತನೆಯ ಗಂಭೀರ ಗೋಷ್ಠಿಗಳು ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಮ್ಮೇಳನದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ದಯಾನಂದ, ಗೌರವ ಸಂಚಾಲಕ ಯು.ಎಸ್.ವಿಷ್ಣುಮೂರ್ತಿರಾವ್, ಕಸಾಪ ತಾಲ್ಲೂಕು ಘಟಕದ ಪ್ರಧಾನ ಕರ್ಯದರ್ಶಿ ಉಪ್ಪಾರಹಟ್ಟಿ ಚಿತ್ತಯ್ಯ, ನಿರ್ದೇಶಕ ಡಾ.ಜಿ.ವಿ.ರಾಜಣ್ಣ, ಶಿವಲಿಂಗಪ್ಪ ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ, ರನ್ಸಿಪಾಲ್ ಆನಂದ್ ಹೋಬಳಿ ಘಟಕದ ನಿರ್ದೇಶಕ ಮೃತ್ಯಂಜಯ ಇದ್ದರು. ಇನ್ನೂ ಅನೇಕ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು
0 Comments