ಚಳ್ಳಕೆರೆ ಡಿ.8. ತಾಲೂಕಿನ ಗೋಪನಹಳ್ಳಿ ಗ್ರಾಮದ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ 4-11-2022 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಒಂದು ವರ್ಷ ತುಂಬುವುದರೊಳಗೆ ತಾಯಿ ಇಬ್ಬರು ಮಕ್ಕಳೊಂದಿಗೆ ಆತ್ಯಹತ್ಯೆ ಮಾಡಿಕೊಂಡ ಮತ್ತೊಂದು ಘಟನೆ ನಡೆದಿದೆ.
ಯಲಗಟ್ಟೆ ಗ್ರಾಮದ ಉಪ್ಪಾರ ಸಮುದಾಯದ ಲತಾ (25) ಹಾಗೂ ಪ್ರಣಿತ (5) ಜ್ಞಾನೇಶ್ (18ತಿಂಗಳು) ಎಂಬುವವರು ಆತ್ಮಹತ್ಯೆ ಗೆ ಶರಾಣಾಗಿದ್ದಾರೆ.
ಮೃತೆ ಪತಿ ತಿಪ್ಪೇಸ್ವಾಮಿ ಎಂದಿನಂತೆ ಹೊಲಕ್ಕೆ ಹೋಗಿದ್ದಾನೆ ಸುಮಾರು 11 ಗಂಟೆಯಾದರೂ ಪತ್ನಿ ಇನ್ನು ಊಟ ತರಲಿಲ್ಲ ಎಂದು ಮನೆಗೆ ಬಂದಿದ್ದಾನೆ ಬಂದು ನೋಡಿದಾಗ ಪತ್ನಿ ನೇಣಿಗೆ ಶರಣಾದರೆ .ಮಗಳು ಬಚ್ಚಲು ಮನೆಯ. ಪಾತ್ರೆಯಲ್ಲಿ ಶವ ಪತ್ತೆಯಾಗಿರುವುದನ್ನು ಕಂಡು ಅಕ್ಕ ಪಕ್ಕದವರಿಗೆ ಮಾಹಿತಿ ನೀಡಿದ್ದಾನೆ ಚಳ್ಳಕೆರೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಪಿಐ ಆರ್.ಎಪ್.ದೇಸಾಯಿ.ಪಿಎಸ್ಐ ಕೆ.ಸತೀಶ್ ನಾಯ್ಕ್ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತಾಯಿ ಹಾಗೂ ಇಬ್ಬರ ಕಂದಮ್ಮಗಳ ಸಾವು ಪೋಲಿಸ್ ತನಿಖೆ ನಂತರವೇ ಮೂರು ಜನರ ಸಾವಿನ ನಿಖರ ಮಾಹಿತಿ ತಿಳಿಯಲಿದೆ. ತಾಯಿ ಹಾಗೂ ಇಬ್ಬರ ಮಕ್ಕಳ ಶವಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಮೃತ ದೇಹಗಳನ್ನು ನೋಡಲು ಕುಟುಂಬಸ್ಥರು ಹಾಗೂ ಸಾರ್ವಜನಿಜರು ಸೇರಿದ್ದರು.
0 Comments