ದಾವಣಗೆರೆ; ಡಿ. 7 : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯಡಿ ಪರವಾನಗಿ ಪಡೆಯದೇ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಮೆಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಯಿತು.
ಗುರುವಾರ ಮಹಾನಗರ ಪಾಲಿಕೆಯ ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಪರವಾನಗಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ವಲಯ 1 ರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಪರವಾನಗಿ ಹೊಂದಿದ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಈಗಾಗಗಲೇ ನಿರ್ದಿಷ್ಠ ಸಮಯ ನೀಡಲಾಗಿದೆ. ಕೆಲವು ಮಾಲೀಕರು ಆಯಾ ವಾರ್ಡ್ನ ಆರೋಗ್ಯ ನಿರೀಕ್ಷಕರ ಹತ್ತಿರ ಅರ್ಜಿ ನಮೂನೆಗಳನ್ನು ನೀಡಿದ್ದು, ಅದರಂತೆ ಉಳಿದ ಮಾಲೀಕರು ಪರವಾನಗಿ ಪಡೆಯದೆ ಇರುವುದರಿಂದ ದಾಳಿ ಕೈಗೊಂಡು ದಂಡ ವಿಧಿಸಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಪರವಾನಗಿ ಹೊಂದಿದ ತಂಬಾಕು ಮಾರಾಟಗಾರರು ಕಡ್ಡಾಯವಾಗಿ ಪರವಾನಗಿಯನ್ನು ಪಡೆಯುವಂತೆ ತಂಡ ಸೂಚಿಸಿತು.
ತಂಡವು ತಂಬಾಕು ಪರವಾನಗಿ ನಿಯಮದಂತೆ 4 ಪ್ರಕರಣಗಳನ್ನು ದಾಖಲಿಸಿ ರೂ.2000 ಹಾಗೂ ಕೋಟ್ಪಾ-2003 ರ ಕಾಯ್ದೆಯಡಿ 6 ಪ್ರಕರಣಗಳನ್ನು ದಾಖಲಿಸಿ ರೂ.600 ಒಟ್ಟು 10 ಪ್ರಕರಣಗಳನ್ನು ದಾಖಲಿಸಿ ರೂ.2600 ದಂಡ ವಿಧಿಸಲಾಯಿತು.
ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕÀ ಪ್ರಕಾಶ, ರಮೇಶ ಚಿನ್ನಿಕಟ್ಟೆ, ಮಹಾಂತೇಶ ಕೆ, ಆರ್. ವಿನಾಯಕ ಕೋಳೂರು, ತನ್ವಿರ್, ಸಂತೋಷ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ ಕಲಹಾಳ, ಸಮಾಜ ಕಾರ್ಯಕರ್ತರಾದ ದೇವರಾಜ ಕೆ.ಪಿ ಉಪಸ್ಥಿತರಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments