ಜಾತ್ರೆ.ಉತ್ಸವ. ಆಚರಣೆಯಿಂದ ಶಾಂತಿ ನೆಮ್ನದಿ ದೊರೆಯುತ್ತದೆ ಶಾಸಕ ಟಿ.ರಘುಮೂರ್ತಿ

by | 16/12/22 | ಸಾಂಸ್ಕೃತಿಕ

ಚಳ್ಳಕೆರೆ ಜಾತ್ರೆ ಉತ್ಸವಗಳು ಧರ್ಮ, ಧಾರ್ಮಿಕತೆಯನ್ನು ಒಂದು ಮಾಡುತ್ತದೆ. ಸಮಾಜದಲ್ಲಿ ಎಲ್ಲಾ ಜಾತಿ-ಧರ್ಮ, ಜನಾಂಗದವರು ಒಟ್ಟಿಗೆ ಸೇರಿ ಆಚರಿಸುವುದರಿಂದ ಶಾಂತಿ. ನೆಮ್ಮದಿ ದೊರೆಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಚಳ್ಳಕೆರೆ ತಾಲೂಕಿನ ನಗರಗೆರೆ ಗ್ರಾಮದಲ್ಲಿ ನಡೆದ ಶ್ರೀ ಮೈಲಾರಲಿಂಗೇಶ್ವರ ದೇವರ ದೋಣಿ ಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಮಾತನಾಡಿದರು. ನಾವೆಲ್ಲರೂ ಎಷ್ಟೆ ಆಧುನಿಕತೆಗೆ ಹೊಂದಿಕೊಂಡರೂ ನಮ್ಮ ಹಳೆ ಪರಂಪರೆ, ರೀತಿ-ನೀತಿ, ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರಸ್ವಾಮಿ ಸದಸ್ಯರುಗಳಾದ ರಮೇಶ್ ಹಿದಾಯತುಲ್ಲ ಮಂಜುನಾಥ ಮುಖಂಡರುಗಳಾದ ಲಕ್ಷ್ಮಿಪುರ ರಾಜಣ್ಣ ನಿಂಗಣ್ಣ ರಂಗನಾಥ್ ಮಂಜಣ್ಣ ಬಾಬು ಮುಖಂಡರು ಕಾರ್ಯಕರ್ತರ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. .

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *