ಜನಧ್ವನಿ

ರಸಗೊಬ್ಬರ ಮಾರಾಟರನ ಸಲಹೆ ಕೇಳಿ ಔಷಧಿ ಸಿಂಪರಣೆ ಬೆಳೆ ನಷ್ಟ- ರೈತರನಿಗೆ ಜಿಎಸ್ ಟಿ ಬಿಲ್ ಬದಲು ಎಸ್ಟಿಮೇಟ್ ಬಿಲ್ ….?

ಚಳ್ಳಕೆರೆ ಜನಧ್ವನಿ ವಾರ್ತೆ ಜು.25 ಟೊಮ್ಯೊಟೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ. ಜಮೀನಲ್ಲಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್.ಮಹದೇವಪುರ ಗ್ರಾಮದ ರೈತ ಮಹಮದ್ ಜಾಫರ್ ತಮ್ಮ ಎರಡು ಎಕರೆ ಜಮೀನಿನಲ್ಲಿ 12 ಸಾವಿರ ಟೊಮೋಟ ಸಸಿಗಳನ್ನು ನಾಟಿ ಮಾಡಿದ್ದು ಬೆಳೆ ಚನ್ನಾಗಿ ಬಂದಿತ್ತು ಟೊಮೆಟೋ ಸಸಿ ಅತಿ ಬೇಗ ಬೆಳವಣಿಗೆಗಾಗಿ ಚಳ್ಳಕೆರೆ ನಗರದ ಶ್ರೀ ಕರಿ ಬಸವೇಶ್ವರ ಫರ್ಟಿಲೈಜರ್ ಮಾಲಕರು ರಂಗೋಲಿ ಔಷಧಿಯನ್ನು ಸಿಂಪರಣೆ ಮಾಡು ಸಸಿ ಬೇಗನೆ ಬೆಳೆಯುತ್ತದೆ ಎಂದು ಸಲಹೆ ನೀಡಿದ ಮೇರೆಗೆ ಜು.3 ರಂದು ಮರುದಿನ ಟೊಮ್ಯೊಟೆ ಬೆಳೆಗೆ ಔಷಧಿ ಸಿಂಪರಣೆ ಮಾಡಿದ್ದಾರೆ.
ಔಷಧಿ ಸಿಂಪರಣೆ ಮಾಡಿದ ಎರಡು ದಿನಗಳ ನಂತರ ನೋಡಿದರೆ ಟೊಮ್ಯಾಟೊ ಬೆಳೆ ಸುಟ್ಟಂತಾಗಿ ಶೇಕಡ 90 ಬೆಳೆ ನಾಶವಾಗಿರುವುದು ಕಂಡು ಬಂದಿದೆ. ಅಂಗಡಿ ಮಾಲಿಕರನ್ನು ವಿಚಾರಿಸಿದರೆ ನಿರ್ಲಕ್ಷದ ಉತ್ತರ ನೀಡುತ್ತಾರೆ.


ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದ್ದು ಅತಿ ಹೆಚ್ಚು ಇಳುವರಿ ಹಾಗೂ ಕೈ ತುಂಬಾ ಲಾಭದ ನೀರೀಕ್ಷೆಯಲ್ಲಿದ್ದ ರೈತನಿಗೆ ರಸಾಯನಿಕ ಔಷಧಿ ಮಾರಾಟಗಾರಲ ಸಲಹೆ ಕೇಳಿ ಔಷಧಿ ಸಿಂಪರಣೆ ಮಾಡಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು. ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಔಷಧಿ ವಿತರಕನ ಮೇಲೆ ಸೂಕ್ತ ಕ್ರಮವಹಿಸಿ ಬೆಳೆ ನಷ್ಟ ಪರಿಹಾರಕೊಡಿಸುವಂತೆ ರೈತ ತೋಟಗಾರಿಕೆ ಇಲಾಖೆಗೆ ದೂರು ನೀಡಿದ್ದಾರೆ.
ಸರಗೊಬ್ಬರ ಕಾಯ್ದೆ ಉಲ್ಲಂಘಟನೆ.


ರೈತ ಖರೀದಿಸಿ ಔಷಧಿಗೆ ಜಿಎಸ್ ಟಿ ಬಿಲ್ ಬದಲು ಎಸ್ಟಿಮೇಟ್ ಬಿಲ್ ನೀಡಿರುವುದು
ಕಳಪೆ ಗೊಬ್ಬರ, ಬಿತ್ತನೆ ಬೀಜ ಹಾಗೂ ರಾಸಾಯನಿಕ ಔಷಧಿ ನಕಲಿ , ಕಳಪೆ ಮಾರಾಟ ತಡೆಯಲು ಕಡ್ಡಾಯವಾಗಿ ರೈತರಿಗೆ ಖರೀದಿಸಿದ ಬಿಲ್ ನೀಡಬೇಕು, ವಿತರಕರ ಸಹಿ ಹಾಕಬೇಕು ಆಧಾರ್ ಆಧಾರಿತ ಪಿಒಎಸ್ ಯಂತ್ರಗಳ ಮೂಲಕ ಕಡ್ಡಾಯವಾಗಿ ಹೆಬ್ಬೆಟ್ಟು ಪಡೆದು, ಬಿಲ್ ನೀಡಬೇಕು ಎಂಬ ನಿಯವಿದ್ದರೂ ಸಹ ರೈತರು ಖರೀದಿಸಿ ಗೊಬ್ಬರ ಹಾಗೂ ಔಷಧಿ ಖರೀದಿ ಮಾಡಿದ ಜಿಎಸ್ ಟಿ ಬಿಲ್ ನೀಡುವ ಬಲದು ಎಸ್ಟಿಮೇಟ್ ಬಿಲ್ ನೀಡಿ ಕೈತೊಳೆದುಕೊಳ್ಳುತ್ತಾರೆ.
ರೈತರು ಖರೀದಿಸಿ ಗೊಬ್ಬರ ಹಾಗೂ ಔಷಧಿಯಲ್ಲಿ ಲೋಪ ಕಾಣದೆ ಇದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ ಒಂದು ವೇಳೆ ಬಿತ್ತನೆ ಬೀಜ , ಗೊಬ್ಬರ ಔಷಧಿ ಸಿಂಪರಣೆ ಮಾಡಿದಾಗ ಬೆಳೆ ನಷ್ಟವಾದಗ ಮಾತ್ರ ರಯತರಿಗೆ ಸಮಸ್ಯೆಯಾಗುತ್ತದೆ ಅದೇ ರೀತಿ ನಾಯಕನಹಟ್ಟಿ ಹೋಬಳಿಯ ಎನ್.ಮಹದೇವಪುರ ಗ್ರಾಮದ ರೈತ ಮಹಮದ್ ಜಾಪರ ಬಹಳ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಅಂಗಡಿಯವರೇ ಜಿಎಸ್ ಟಿ ಬಿಲ್ ನೀಡದೆ ಎಸ್ಟಿಮೆಟ್ ಬಿಲ್ ನೀಡಿದ್ದು ಔಷಧಿ ಸಿಂಪರಣೆ ಮಾಡಿ ಲಕ್ಷಾಂತರ ರೂ ಮೌಲ್ಯದ ಬೆಳೆ ಕಳೆದು ಕೊಂಡು ತೋಟಗಾರಿಗೆ ಇಲಾಖೆಗೆ ದೂರು ಕೊಡಲು ಹೋದಾಗ ಜಿಎಸ್ ಟಿ ಬಿಲ್ ನೀಡದೆ ಇರುವುದು ಬೆಳೆಕಿಗೆ ಬಂದಿದೆ.
ರಸಗೊಬ್ಬರ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರ ನಿಯಮ ಉಲ್ಲಂಘನೆ ಕಂಡು ಬಂದಿದ್ದು ಈಗಾ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಜರುಗಿಸುವರು ಕಾದು ನೋಡ ಬೇಕಿದೆ.

ಆಂಧ್ರಗಡಿಗ್ರಾಮಗಳ ಶಾಲೆಗೆ ಹೋಗುವ ಶಿಕ್ಷಕರುಗೆ ವಿದ್ಯಾರ್ಥಿಗಳೆಗೆ ಸಾರಿಗೆ ಬಸ್ ನಿಲ್ದಾಣದಿಂದ8.40 ಬಸ್ ಬಿಡುವಂತೆ ಗಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

‌‌‌
ಚಳ್ಳಕೆರೆ ಜು.25 ಗಡಿ ಗ್ರಾಮಗಳ ಶಾಲೆಗೆ ತಲುಪುವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿ ನಿಗಧಿತ ಸಮಕ್ಕೆ ಸಾರಿಗೆ ಬಸ್ ಬಿಡುವಂತೆ ಗಡಿಗ್ರಾಮಸ್ಥರು ಆಗ್ರಹಿಸಿದ್ದಾರೆ. ನಗರದ ಸಾರಿಗೆ ಬಸ್ ನಿಲ್ದಾಣದಿಂದ ಓಬಳಾಪುರ ಬಾದಿಹಳ್ಳಿ ಬಸಾಪುರ ಮಾರ್ಗದ ಸಾರಿಗೆ ಬಸ್ ಬೆಳಗ್ಗೆ 8.45 ಕ್ಕೆ ಬಿಡಬೇಕಾದ ಬಸ್ 9.10 ಕ್ಕೆ ಬಿಡುವುದರಿಂದ ನಗರದಿಂದ ಸುಮಾರು 45 ಕಿ.ಮೀ ದೂರದ ಗಡಿ ಗ್ರಾಮಗಳ ಶಾಲೆಗಳಿಗೆ ಹೋಗುವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗಳಿಗೆ ತಲುಪಲು ವಿಳಂಬವಾಗುತ್ತಿದ್ದು ಪ್ರತಿ ನಿತ್ಯ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆಬ8.45 ಕ್ಕೆ ಬಸ್ ಬಿಟ್ಟರೆ 10 ಗಂಟೆಗೆ ಶಾಲೆಗಳಿಗೆ ತಪುಪಲು ಸಹಕಾರಿಯಾಗುತ್ತದೆ ಎಂದು ಗಡಿ ಗ್ರಾಮಗಳಿಗೆ ಹೋಗುವ ಶಿಕ್ಷಕರು.ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾರಿಗೆ ವ್ಯವಸ್ಥಾಪರಿಗೆ ಗಮನಸೆಳೆದರೂ ವಿಳಂಬವಾಗಿ ಬಸ್ ಬಿಡಲಾಗುತ್ತಿದೆ. ಹಳ್ಳಿಗಳಿಗೆ ಬಸ್ ಬಿಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳ ಗಮನ ಸೆಳೆದರೆ ಶಾಸಕರ ಶಿಪಾರಸ್ ಪತ್ರ ಕೊಡಿಸಿ ಎನ್ನುತ್ತಾರೆ. ಆದರೆ ಸಂಜೆ.3.40 ರ ಸಮಯದಲ್ಲಿ ಬಸಾಪುರ ಗ್ರಾಮಕ್ಕೆ ಬಸ್ ಇಲ್ಲದಿದ್ದರೂ ಸಹ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರ ಸಂಬಂಧಿ ಶಿಕ್ಷಕಿಯೊಬ್ಬರು ಬಸಾಪುರ ಗ್ರಾಮಕ್ಕೆ ಹೋಗಿ ಕರೆತರಲಾಗುತ್ತಿದೆ ಇದಕ್ಕೆ ಯಾರು ಶಿಪರಾಸ್ ಪತ್ರ ಪಡೆದು ಬಸಾಪುರ ಗ್ರಾಮಕ್ಕೆ ಬಿಟ್ಟಿದ್ದಾರೆ ಎಂದು ಗ್ರಾಮಾರ ಆರೋಪವಾಗಿದೆ. ಈ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾ ಸಾರಿ

ಇಲಾಖೆ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಯಾರೂ ಸಾರ್ ಬಸಾಪುರದಲ್ಲಿ ನಿಮ್ಮ ಸಂಬಂದಿ ಶಿಕ್ಷರೊಬ್ಬರಿಗೆ ಬಸ್ ಬಿಟ್ಟಿದ್ದೀರಂತೆ ಪ್ರಯಾಣಿಕರು ಕೇಳಿದರೆ ಶಾಸಕರ ಪತ್ರ ಕೊಡಿಸಿ ಎನ್ನುತ್ತೀರಂತೆ ಆಗಾದರೆ ಶಿಕ್ಷಕರೊಬ್ಬರನ್ನು ಕರೆತರಲು ಬಸಾಪುರ ಗ್ರಾಮಕ್ಕೆ ಬಸ್ ಕಳಿಸುತ್ತೀರಂತೆ ಎಂದು ಕೇಳಿದಾಗ. ಡಿಪೋ ಮ್ಯಾನೇಜರ್ ಉತ್ತರಿಸಿ ಇಲ್ಲಾ ಸಾರ್ ನಮ್ಮ ಸಂಬಂಧಿಕರು ಯಾರೂ ಇಲ್ಲ ಯಾರೋ ಡಿವಿಜನ್ ಕಚೇರಿಗೆ ಪೋನ್ ಮಾಡಿದ್ದರಂತೆ ಅದಕ್ಕೆ ಬಸಾಪುರಕ್ಕೆ ಕಳಿಸಲಾಗುತ್ತಿದೆ ವರತು ನಮ್ಮ ಸಂಬಧಿಕರಿಲ್ಲ ಎಂದು ಉತ್ತರಿಸಿದರು. ಈಗಲಾದರೂ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ನಗರದಿಂದ ಪ್ರತಿನಿತ್ಯ ಬೆಳಗ್ಗೆ 9.10ರ ಬದಲಾಗಿ 8.40ಕ್ಕೆ ಬಸ್ ನಿಲ್ದಾಣ ಬಿಡುವ ವ್ಯವಸ್ಥೆ ಮಾಡುವರೇ ಕಾದು ನೋಡ ಬೇಕಿದೆ

.

ವಿದ್ಯುತ್ ಅವಘಡಕ್ಕೆ ಆಹ್ವಾನ ನೀಡುವಂತಿರುವ ಶಿಥಿಲವಾದ ವಿದ್ಯುತ್ ಕಂಬ.

ಚಳ್ಳಕೆರೆ:
ವಿದ್ಯುತ್ ಕಂಬ ಒಂದು ಸಂಪೂರ್ಣವಾಗಿ ಶಿಥಲಗೊಂಡಿದ್ದು ವಿದ್ಯುತ್ ಅವಘಡಕ್ಕೆ ಕೈ ಬೀಸಿ ಕರೆಯುವಂತಾಗಿದೆ.
ಚಳ್ಳಕೆರೆ ನಗರದ ಗಾಂಧಿನಗರ ಮಹಾತ್ಮ ಗಾಂಧಿ ಶಾಲೆ ಸಮೀಪ ವಕೀಲ ಎನ್.ತಿಪ್ಪೇಸ್ವಾಮಿ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಕಂಬ ಸಂಪೂರ್ಣ ಶಿಥಿಲಗೊಂಡಿದ್ದು ಮಳೆ ಗಾಳಿಗೆ ಯಾವುದೇ ಸಂದರ್ಭದಲ್ಲಿ ಬೀಳುವಂತಾಗಿದ್ದು ಈ ರಸ್ತೆಯಲ್ಲಿ ಮೂರು ಶಾಲೆಗಳ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಅಲ್ಲದೆ ಇಲ್ಲಿ ವಾಹನಗಳ ಸಂಚಾರವು ಸಹ ಇರುತ್ತದೆ ಅಕ್ಕ ಪಕ್ಕದ ಮನೆಗಳು ಜನರು ವಾಸ ಮಾಡುತ್ತಿದ್ದು ವಿದ್ಯುತ್ ಕಂಬ ಬುಡದಿಂದ ಅರ್ಧದವರೆಗೆ ಸಂಪೂರ್ಣ ಬಿರುಕು ಬಿಟ್ಟಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಗಾಳಿಗೆ ಗಾಂಧಿನಗರದ ವೆಂಕಟೇಶ್ವರ ದೇವಸ್ಥಾನ ಮುಂಭಾಗದಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದು ವೆಂಕಟೇಶ ಎನ್ನುವವರ ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿತ್ತು.


ಸದ್ಯ ಈ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಯಾವುದೇ ಅಪಾಯ ವಾಗಿರಲಿಲ್ಲ
ಸಂಪೂರ್ಣ ಸಿಳಿ ಹೋಗಿರುವ ಈ ವಿದ್ಯುತ್ ಕಂಬ ಅಪಾಯ ತಂದೊಡ್ಡುವ ಮುನ್ನವೇ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬವನ್ನು ತೆಗೆದು ಬದಲಿ ವಿದ್ಯುತ್ ಕಂಬವನ್ನು ಹಾಕಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷತೆ ವಹಿಸಿದ್ದಾರೆ ಎಂದು ಚಳ್ಳಕೆರೆ ವಕೀಲರಾದ ಎನ್. ತಿಪ್ಪೇಸ್ವಾಮಿ, ಆರೂಪಿಸಿದ್ದಾರೆ..

ಶವಗಾರಕ್ಕೆ ಬೇಕಿದೆ ಶಸ್ತ್ರ ಚಿಕಿತ್ಸೆ -ಶಿಥಲೀಕರಣ ಘಟಕ


ಚಳ್ಳಕೆರೆ ಜು.24 ನಗರದ ಸಾರ್ವಜನಿಕ‌ಆಸ್ಪತ್ರೆ ಆವರಣದಲ್ಲಿರುವ ಶವಗಾರಕ್ಕೆ ಬೇಕಿದೆ ಶಸ್ತ್ರ ಚಿಕಿತ್ಸೆ. ಹೌದು ಇದು ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಸಾರ್ಚಜನಿಕ ಆಸ್ಪತ್ರೆ ಆವರಣದಲ್ಲಿರುವ ಶವಗಾರ ಬಹಳ ಹಳೆಯದಾಗಿದ್ದು ಸುತ್ತ ಮುತ್ತಲಿನ ಪರಿಸರ ತ್ಯಾಜ್ಯ ಹಾಗೂ ಗಿಡಗೆಂಟೆಗಳಿಂದ ಕೂಡಿದ್ದು ಶವ ಮರಣೋತ್ತರ ಪರಿಕ್ಷೆ ಮಾಡುವಾಗ ಕೈಗಳಿಗೆ ಹಾಕಿಕೊಂಡ ಯ್ಯಾಂಡ್ ಗ್ಲೌಜ್ ಸಹ ಶವಗಾರದ ಮುಂದೆ ಹಾಕಲಾಗಿದೆ. ಆಸ್ಪತ್ರೆಯ ತ್ಯಾಜ್ಯವನ್ನು ಅಲ್ಲಲ್ಲಿ ಸುರಿದು ಬೆಂಕಿ ಹಚ್ಚಿ ಸುಡಲಾಗಿದೆ. ತ್ಯಾಜ್ಯದಿಂದ ಜಾನುವಾರುಗಳು ಜೀವ ಕಳೆದುಕೊಳ್ಳುವಂತಾಗಿದೆ.

{“remix_data”:[],”remix_entry_point”:”challenges”,”source_tags”:[“local”],”source_ids”:{},”source_ids_track”:{},”origin”:”unknown”,”total_draw_time”:2,”total_draw_actions”:5,”layers_used”:2,”brushes_used”:0,”photos_added”:0,”total_editor_actions”:{},”tools_used”:{“brushes”:1,”draw”:2,”shape_mask”:1,”addons”:2},”is_sticker”:false,”edited_since_last_sticker_save”:true,”containsFTESticker”:false,”used_sources”:{“version”:1,”sources”:[{“id”:”371299160012900″,”type”:”premium”}]}}


ಶವಾಗಾರಕ್ಕೆ ಬೇಕಿದೆ ಕಾಯಕಲ್ಪ.‌‌‌ ಚಳ್ಳಕೆರೆ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಮೃತಪಡುವವರ ಸಂಖ್ಯೆ ಜತೆಗೆ ಕೊಲೆ. ಆತ್ಮಹತ್ಯೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಟ್ಟ ಶವಗಳನ್ನು ಶವಗಾರಕ್ಕೆ ಸಾಗಿಸ ಬೇಕಾಗುತ್ತದೆ. ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ಕೊಪ್ಪಳ.ರಾಯಚೂರು.ಬಳ್ಳಾರಿ ಸೇರಿದಂತೆ ನೂರರಾರು ಕಿ.ಮೀ ದೂರದ ಪ್ರಯಾಣಿಕರೇ ಹೆಚ್ಚು ಮೃತಪಡುತ್ತಿದ್ದು ಒಮ್ಮೆ ಎರಡು ಮೂರು. ಐದು ಜನಕ್ಕೂ ಮೇಲ್ಪಟ್ಟು ಮೃತಪಟ್ಟ ಪ್ರಕರಣಗಳಿವೆ. ಈಗಿರುವ ಶವಗಾರದಲ್ಲಿ 3 ರಿಂದ 4 ಶವ ಶೇಕರಣೆ ಮಾಡಲು ಸ್ಥಳವಿದೆ. ಅಪಘಾತದಲ್ಲಿ ದೂರದ ನಗರದವರು ಮೃತಪಟ್ಟಾಗ ಸಂಬಂಧಿಗಳು ಬರುಲು ವಿಳಂಭ ಕೆಲವು ಸಮಸ್ಯೆಯಿಂದ ಶವ ಮರಣೋತ್ತರ ವಿಳಂಬ ವಾಗುವ ಸಾಧ್ಯತೆ ಇದ್ದು ಶವಗಳನ್ನು ಎರಡು ದಿನ ಶೇಖರಣೆ ಮಾಡಿದರೆ ಕೊಳೆಯುವ ಸಾಧ್ಯತೆ ಇದ್ದು ಸಾರ್ವಜನಿಕ‌ ಆಸ್ಪತ್ರೆಯ ಶವಗಾರ ಶವಗಳ ಶೇಖರಣೆ ಸಾಮರ್ಥ್ಯ ಹೆಚ್ಚಿಸ ಬೇಕು ಹಾಗೂ ಶವಗಾರಕ್ಕೆ ಶೀತಲೀಕರಣ ಘಟಕ ಅಳವಡಿಸಬೇಕಿದೆ. ಶವಾಗಾರದಲ್ಲಿ ಕಡಿಮೆ ಸಾಮರ್ಥ್ಯ ಇರುವುದರಿಂದ ಶವಗಳಿಗೂ ಸರಿಯಾದ ಮುಕ್ತಿ ಸಿಗದಂತಾಗಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಶವಗಾರದ ವಿಸ್ತರಣೆ ಹಾಗೂ ಶಿಥಲೀಕರ ಘಟಕ ಅಳವಡಿಸುವರೇ ಕಾದು ನೋಡ ಬೇಕಿದೆ.

ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದ ಘನತ್ಯಾಜ್ಯ ಘಟಕ ಕಾಮಗಾರಿ- ಮನೆಮನೆಗೆ ಹೋಗಿ ಸಂಗ್ರಹಿಸ ಬೇಕಾದ ಸ್ವಚ್ಚವಾಹಿತಿ ಮರದ ಕೆಳಗೆ ವಿಶ್ರಾಂತಿ…!.


ಚಳ್ಳಕೆರೆ ಜನಧ್ವನಿ ವಾರ್ತೆ ಜು.23 ರಸ್ತೆಗಿಳಿಯದೆ ವಿಶ್ರಾಂತಿಗೆ ಜಾರಿದ ‘ಸ್ವಚ್ಛ ವಾಹಿನಿ ವಾಹನ ಹಳ್ಳ ಹಿಡಿದ ಸ್ವಚ್ಚ ಭಾರತ ಯೋಜನೆ.
ಹೌದು ಇದು ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾರಂಭಿಸಿದ ‘ಘನ ತ್ಯಾಜ್ಯ ನಿರ್ವಹಣೆ’ಯು ಅಂಕಿ ಸಂಖ್ಯೆಗೆ ಮಾತ್ರ ಸೀಮಿತವಾಗಿದೆ ಎಂಬುದನಕ್ಕೆ ಇದು ತಾಜ ಸಾಕ್ಷಿಯಾಗಿದೆ.

ಸುಮಾರು ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಕಾಮಾರಿ
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಯಿಂದ ಹಸಿಕಸ, ಒಣಕಸ ಸಂಗ್ರಹಿಸ ಸಂಗ್ರಹಿಸಲು ಎರಡು ಬಕೆಟ್ ನೀಡುವ ಬದಲು ಒಂದು ಬಕೆಟ್ ನೀಡಿ ಕೈತೊರೆದುಕೊಂಡರೆ. ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಕಾಮಾರಿ ಸುಮಾರು ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಇರುವ ಕಾರಣ ಕಸ ವಿಲೇವಾರಿ ಮಾಡುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದರಿಂದ . ಮನೆ ಮನೆಗೆ ಹೋಗಿ ಕಸ ಸಂಗ್ರಹಣೆಗಾಗಿ ಖರೀದಿಸ ಬೇಕಾದ ಸ್ವಚ್ಚವಾಹಿನಿ ಬಿಸಿಲು ಮಳೆ ಎನ್ನದೆ ತೋಟದ ಮರದಕೆಳೆಗೆ ನಿಂತಲ್ಲೇ ಕೆಟ್ಟು ಧೂಳು ಮುಕ್ಕುವಂತಾಗಿದೆ.
‘ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡುವ ವಾಹನ ಬಂದು ವರ್ಷಗಳೇ ಕಳೆದಿವೆ ಬಂದು ಹೊಸದರಲ್ಲಿ ಕೆಲವೇದಿನಗಳುಸಂಚರಿಸಿದ್ದು ಬಿಟ್ಟರೆ ಅದು ನಿಂತಲ್ಲೇ ತುಕ್ಕು ಹಿಡಿಯುವ ಹಂತಕ್ಕೆ ತಲುಪಿದೆ.
ಸ್ವಚ್ಚಭಾರತ್ ಮಿಷನ್ ಯೋಜನೆಯಡಿಯಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ
ಖರೀದಿಸಲಾದ ವಾಹನ ಹಾಗೂ ಘನತ್ಯಾಜ್ಯ ಘಟಕ ಕಟ್ಟಡ ಪೂರ್ಣಗೊಳ್ಳದೆ ಇರುವುದು ಸರ್ಕಾರದ ಹಣ ಪೋಲಾಗುತ್ತಿದೆ’ ಎಂಬುದು ಸಾರ್ಜನಕರಿಂದ ಕೇಳಿ ಬರುತ್ತಿವೆ.
ಹಸಿ, ಒಣ ಕಸ ಹಾಕಲು ಬಕೆಟ್ ಕೊಡಲಾಗಿದೆ. ಮನೆಗಳಿಂದ ಕಸ ಸಂಗ್ರಹಣೆ ಮಾಡಲು ವಾಹನ ಮಾತ್ರ ತಿರುಗಾಡುತ್ತಿಲ್ಲ. ಹಾಗಾಗಿ, ಜನರು ಬಕೆಟ್ಗಳಲ್ಲಿ ಕಸ ಹಾಕುವ ಬದಲು ಬಿಟ್ಟು ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.


ಮನೆ ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡ ಬೇಕಾದ ವಾಹನ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು.
ಕಸದ ವಾಹನ ಬಾರದೆ ಇರುವುದು ಹಾಗೂ ಜಾಗೃತಿ ಕೊರತೆಯಿಂದ ಕಸವನ್ನು ಮನೆ ಅಕ್ಕಪಕ್ಕ ಚರಂಡಿಯಲ್ಲಿ ಎಸೆಯುವುದು ಅನಿರ್ವಾಯವಾಗಿದೆ
ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ ಎದುರಿಸುವಂತಾಗಿದೆ.

ಇದು ಕೇವಲ ಗೋಪನಹಳ್ಳಿ ಗ್ರಾಪಂ ಕಚೇರಿಯ ಕಥೆಯಲ್ಲಿ ಬಹುತೇ ಗ್ರಾಪಂ ಕಚೇರಿಗಳಲ್ಲಿ ಘನತ್ಯಾಜ್ಯ ವಿಲೆವಾರಿ ಘಟಕಗಳ ಹಾಗೂ ಸ್ವಚ್ಚವಾಹಿನಿಗಳ ಕಥೆಯಾಗಿದೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಘಟನತ್ಯಾಜ್ಯ ಘಟಕದ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ನಿಂತಲ್ಲೆ ನಿಂದ ಸ್ವಚ್ಚವಾಹಿನಿ ಯನ್ನು ಮನೆ ಮೆನೆ ಸಂಚರಿಸಿ ಕಸ ಸಂಗ್ರಹಣೆ ಮಾಡುವಂತೆ ಮಾಡುವರೇ ಕಾದು ನೋಡ ಬೇಕಿದೆ.

ಮಳೆಗಾಲಕ್ಕೆ ಮತ್ತೆ ಮರುಕಳಿಸಿದ”ಡಾಗ್ ಸರ್ಕಲ್” ರಸ್ತೆ ಸಮಸ್ಯೆ -ಎಸ್ ವಿ ರಂಗನಾಥ್


ಹಿರಿಯೂರು ಟೌನ್ ವೇದಾವತಿ ನಗರದ 3 ನೇ ವಾರ್ಡ್” ಡಾಗ್ ಸರ್ಕಲ್” ರಸ್ತೆ ಸಮಸ್ಯೆ ಮಳೆಗಾಲಕ್ಕೆ ಮತ್ತೆ ಮರುಕಳಿಸಿದೆ ಎಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ
ಎಸ್ ವಿ ರಂಗನಾಥ್ ತಿಳಿಸಿದ್ದಾರೆ.
ಚಂದ್ರಾ ಲೇ ಔಟ್ ಮತ್ತು ಶಿವಶಂಕರಪ್ಪ ಲೇ ಔಟ್ ಗಳ ಮದ್ಯದಲ್ಲಿ 40 ಅಡಿಗಳ ರಸ್ತೆ, ನಗರ ಯೋಜನೆ ಅನುಮೋದಿತ ನಕ್ಷೆಯಲ್ಲಿ ಇದ್ದಾಗ್ಯೂ ಕೇವಲ 18 ರಿಂದ 20 ಅಡಿಗಳ ರಸ್ತೆ ಚಾಲ್ತಿ ಇದ್ದು ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಂತಾಗಿದೆ,ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಜಾರಿ ಬೀಳುವಂತೆ ಆಗಿದೆ. ಕಾರುಗಳು ಎದುರಿಗೆ ಬಂದರೆ ಎದುರುದಾರ ವಾಹನಗಳಿಗೆ ಜಾಗವೆ ಇಲ್ಲ.
ತಗ್ಗು ಗುಂಡಿ ಮುಚ್ಚಿ ರಸ್ತೆ ಸಮತಟ್ಟು ಮಾಡುವಂತೆ ಪೌರಾಯುಕ್ತರು ನಾಲ್ಕೈದು ಬಾರಿ ಆರೋಗ್ಯ ನಿರೀಕ್ಷಕರಿಗೆ ಹೇಳಿದ್ದಾರೆ. ಆದಾಗ್ಯೂ ಅವರು ರಸ್ತೆ ಸಮತಟ್ಟು ಮಾಡದೆ ತಾತ್ಸಾರ ಮಾಡಿದ್ದಾರೆ.ತಗ್ಗು ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಆಶ್ರಯತಾಣವಾಗಿ ಮಲೇರಿಯ,ಚಿಕೂನ್ ಗುನ್ಯಾ,ಡೆಂಗ್ಯೂ ರೋಗ ಹರಡುವ ಸಾಧ್ಯತೆ ಇರುತ್ತದೆ. ಹೆಸರಿಗೆ ಮಾತ್ರ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಈ ಭಾಗದ ನಾಗರೀಕರಿಗೆ ಓಡಾಡಲು ಸಮರ್ಪಕವಾಗಿ ರಸ್ತೆ ಇರುವುದಿಲ್ಲ.
ಪ್ರಯುಕ್ತ ನಗರಸಭೆ ಪೌರಾಯುಕ್ತರು ಡಾಗ್ ಸರ್ಕಲ್ ರಸ್ತೆ ಮದ್ಯದಲ್ಲಿರುವ ತಗ್ಗು ಗುಂಡಿಗಳನ್ನು ಮುಚ್ಚಿಸಿ,ಹೊಸದಾಗಿ ನಾಲ್ಕೈದು ಬೀದಿ ದೀಪ ಹಾಕಿಸಿಕೊಡಬೇಕೆಂದು ಎಸ್ ವಿ ರಂಗನಾಥ್ ಮನವಿ ಮಾಡಿದ್ದಾರೆ.

ಉದ್ಘಾಟನೆ ಕಾಣದ ಶೌಚಾಲಯ ಕಚೇರಿ ಗೋಡೆಗೆ ಮೂತ್ರ ವಿಸರ್ಜನೆ ಹೈಟೆಕ್ ಮಿನಿವಿಧಾನ ಸೌಧ ಆವರಣ….


‌‌‌‌ [ ಚಳ್ಳಕೆರೆ ಜು19. ಸರ್ಕಾರಿ ಕಚೇರಿ ಎಂದರೆ ಪ್ರತಿನಿತ್ಯ ನೂರಾರು ಜನರು ತಮ್ಮ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಮುಂಜಾನೆಯೇ ಬಂದವರು ಸಂಜೆವರೆಗೂ ಕಾಯುತ್ತ ಅತ್ತ-ಇತ್ತ ಅಲೆದು ಕೊನೆಗೆ ಹಾಗೋ, ಹೀಗೋ ಕೆಲಸವನ್ನು ಮುಗಿಸಿಕೊಂಡು ತಮ್ಮ ಮನೆಗೆ ಹೊರಡುತ್ತಾರೆ, ಆದರೆ ಇದರ ಮಧ್ಯೆ ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದರೆ ಅವರನ್ನು ದೇವರೇ ಕಾಪಾಡಬೇಕು.
[[caption id="attachment_29535" align="aligncenter" width="1920"] {“remix_data”:[],”remix_entry_point”:”challenges”,”source_tags”:[“local”],”source_ids”:{},”source_ids_track”:{},”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“brushes”:1,”shape_mask”:1,”addons”:1},”is_sticker”:false,”edited_since_last_sticker_save”:true,”containsFTESticker”:false}


ಹೌದು ಇದು ಜನಧ್ವನಿ ಡಿಜಿಟಲ್ ಮೀಡಿಯಾ ಹೇಳ್ತಾ ಇರೋದು ಯಾವುದೋ ಕುಗ್ರಾಮದ ಕಥೆಯಲ್ಲ, ಚಳ್ಳಕೆರೆ ನಗರದ ಹೃದಯ ಭಾಗದಲ್ಲಿರುವ ಹೈಟೆಕ್ ಮಿನಿ ವಿಧಾನಸೌಧ ದಂತೆ ಸುಂದರವಾಗಿ ಕಾಣುವ ತಾಲೂಕು ಕಚೇರಿಯ ಆವರಣದಲ್ಲಿನ ಸಾರ್ವಜನಿಕ‌ ಶೌಚಾಲದ ಅವ್ಯವಸ್ಥೆ ಬಗ್ಗೆ . ತಾಲೂಕು ಕಚೇರಿ ಆವರದಲ್ಲಿ ಸಾರ್ವಜನಿಕ‌ತೆರಿಗೆ ಹಣದಲ್ಲಿ ಹಳೆ ಸರ್ವೆ ಇಲಾಖೆ ಕಚೇರಿ ಹಿಂಭಾಗ ಶೌಚಾಲಯ ನಿರ್ಮಿಸಿ ಸುಮಾರು ವರ್ಷಕಳೆದರೂ ಉದ್ಘಾಟನೆಯಾಗದೆ ಹಳೆ ತಾಲೂಕು ಕಚೇರಿ ಕಟ್ಟಡ ಹಾಗೂ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಹಿಂಭಾಗದಲ್ಲಿ ಮಲಮೂರ್ತ ವಿಸರ್ಜನೆ ಮಾಡುವುದರಿಂದ ಇದಕ್ಕೆ ಹೊಂದಿಕೊಂಡು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಇರುವುದರಿಂದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಸಾಂಕ್ರಮಿಕ ರೋಗ ಬೀತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ.

ಹಳೆ ತಾಲೂಕು ಕಚೇರಿ ಪಕ್ಕದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗಳ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಯಾಗದೆ ಇರುವುದು ಮಲ‌ಮೂರ್ತ ವಿಸರ್ಜನೆ ಹಾಗೂ ಅನೈತಿಕ ಚಟುವಟಿಕೆ ತಾಣಗಳಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಳೆ ತಾಲೂಕು ಕಚೇರಿ ಕಟ್ಟಡ ದುರಸ್ಥಿ. ವಾಣಿಜ್ಯ ಮಳಿಗೆ ಹಾಗೂ ಹೈಟೆಕ್ ಶೌಚಾಯ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಭಾಗ್ಯ ಕಾಣದೆ ಉದ್ಘಾಟನೆಗೂ ಮುನ್ನವೇ ಸಾರ್ವಜನಿಕರು ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದರಿಂದ ಕಟ್ಟಡ ಗೋಡೆಗಳು ಶಿಥಿಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ದಂಡಾಧಿಕಾರಿಗಳ ಕಚೇರಿ ಆವರಣದ ಅವ್ಯವಸ್ಥೆಯ ಬಗ್ಗೆ. ಪ್ರತಿನಿತ್ಯ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ವೃದ್ಧರು ಕೂಡ ಈ ಕಚೇರಿಗಳಿಗೆ ಬರುತ್ತಾರೆ. ಆದರೆ ಇಲ್ಲೊಂದು ಶೌಚಾಲಯದ ವ್ಯವಸ್ಥೆ ಇಲ್ಲದೆ ನಿತ್ಯ ನರಕ ಯಾತನೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಗಳೇನೋ ಮನೆಗೊಂದು ಶೌಚಾಲಯ ಇರಬೇಕು ಎಂದು ಲಕ್ಷಾಂತರ ಖರ್ಚು ಮಾಡುತ್ತಿದೆ. ಜಿಲ್ಲಾಡಳಿದ ಜಾಗೃತಿ ಮೂಡಿಸುತ್ತಿದೆ, ಆದರೆ ಸರಕಾರಿ ಕಚೇರಿ ಆವರಣದಲ್ಲಿಯೇ ಇರುವ ಶೌಚಾಲಯವನ್ನೇ ವ್ಯವಸ್ಥಿತವಾಗಿ ಇಟ್ಟುಕೊಳ್ಳದೆ ಇರುವುದು ವಿಪರ್ಯಾಸವಾಗಿದೆ.

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (6, 0);
aec_lux: 105.020874;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 34;

ಬಿಲ್ ವಿಳಂಬ. ಹೈಟೆಕ್ ಶೌಚಾಲಯ ಹಾಗೂ ಹಳೆ ತಾಲೂಕು ಕಚೇರಿ ದುರಸ್ಥಿಗೆ ಸುಮಾರು ಸುಮಾರು 75 ಲಕ್ಷ ರೂ ಮಂಜುರಾತಿಯಾಗಿದ್ದು ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು ಬಣ್ಣ ಹಾಗೂ ಕಾಂಪೌಂಡ್ ಗೋಡೆ ಕಾಮಗಾರಿ ಮಾತ್ರ ಬಾಕಿ ಇದ್ದು ಗುತ್ತಿಗೆ ದಾರರಿಗೆ 25 ಲಕ್ಷರೂ ಮಾತ್ರ ಪಾವತಿಯಾಗಿದ್ದು ಇನ್ನು 50 ಲಕ್ಷ ರೂ ಬಾಕಿ ಇದ್ದು ಕಾಮಗಾರಿ ಮಾಡಿ ಸುಮಾರು ವರ್ಷಕಳೆದರೂ ಬಿಲ್ ಪಾವತಿಯಾಗದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದು ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಲು ಕಾರಣವಾಗಿದೆ‌ ಎಂಬುದು ಸಾರ್ವಜನಿಕ ವಲಯದಿಂದ ಗುಸು ಗುಸು ಮಾತುಗಳು ಕೇಳಿ ಬರುತ್ತಿದ್ದು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ಬಾಕಿ ಬಿಲ್ ನೀಡಿ‌ ಶೌಚಾಲಯ.ವಾಣಿಜ್ಯ ಮಳಿಗೆ ಹಾಗೂ ಹಳೆ ತಾಲೂಕು ಕಚೇರಿ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಕಚೇರಿಗಳನ್ನು ಸ್ಥಳಾಂತರಿಸುವರೇ ಕಾದು ನೋಡ ಬೇಕಿದೆ.

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (6, 2);
aec_lux: 137.1264;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 37;

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (-1, -1);
aec_lux: 123.033676;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 34;

ಪಡಿತರ ಅಕ್ಕಿ ನೀಡದೆ ವಂಚನೆ ಮಾಡುತ್ತಿರುವ ಕಾರ್ಯದರ್ಶಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪಡಿತರದಾರರು ಆಗ್ರಹ…


ಚಳ್ಳಕೆರೆ ಜನಧ್ವನಿ ವಾರ್ತೆ ಜು.18 ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿ ನೀಡುತ್ತಿದ್ದು ಇದನ್ನೇ ಬಂಡವಳ ಮಾಡಿಕೊಂಡ ಕೆಲವರು ಬಡವರಿಗೆ ಅಕ್ಕಿ ನೀಡದೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಚಿಕ್ಕ ಮದುರೆ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಬಡವರಿಗೆ ಅಕ್ಕಿ ನೀಡದೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಧುರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಮುಂದೆ ಗ್ರಾಮಸ್ಥರು ರಾತ್ರಿ ಹಗಲು ಎನ್ನದೇ ನಿದ್ದೆಗೆಟ್ಟು ಕೂಲಿ ನಾಲಿ ಬಿಟ್ಟು ಮತ್ತುಮಕ್ಕಳು ಶಾಲೆ ಬಿಟ್ಟು ಅನ್ನಭಾಗ್ಯ ಅಕ್ಕಿಗಾಗಿ ಕಾದು ಕುಳಿತು ಸುಸ್ತಾಗುತ್ತಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದದಲ್ಲಿ ಸುಮಾರು 300 ಪಡಿತರ ಕಾರ್ಡ್ ಹೊಂದಿದ್ದು ಅರ್ದ ಜನರಿಗೆ ಕೊಟ್ಟರೆ ಇನ್ನ ಅರ್ದ ಜನರಿಗೆ ಬಿಳಿ ಚೀಟಿಯಲ್ಲಿ ಬರೆದು ಕೊಡುತ್ತಾರೆ ಮುಂದಿನ ದಿಂಗಳು ಬಿಳಿ ಚೀಟಿಯವರಿಗೆ ಕೊಟ್ಟರೆ ಉಳಿದವರಿಗೆ ಕೊಡುವುದಿಲ್ಲ ಈಗೆ ತಿಂಗಳು ಬಿಟ್ಟು ತಿಂಗಳು ಕೊಡುತ್ತಾರೆ ಈ ತಿಂಗಳು ಇನ್ನು ಅರ್ದ ಕಾರ್ಡ್ ದಾರರಿದ್ದರೂ ಅಕ್ಕಿ ಖಾಲಿಯಾಗಿದೆ ಪಡಿತರ ವಿತರಣೆಗೆ ಕಾರ್ಯದರ್ಶಿ ನೀಲಪ್ಪನ ಬದಲು ಮಗನನ್ನು ಕಳಿಸುತ್ತಾರೆ ಪಡಿತರ ಅಕ್ಕಿ ಸರಿಯಾಗಿ ವಿತರಣೆ ಮಾಡುತ್ತಿಲ್ಲ .ಪ್ರತಿ ದಿನ ನಾವು ಕೂಲಿ ಮಾಡಿದಾಗ ಮಾತ್ರ ನಮ್ಮ ಮನೆತನ ನಡೆಸಲು ಸಾಧ್ಯ, ಕೂಲಿ ಕೆಲಸಕ್ಕೆ ಹೋಗದೆ ಪಡಿತರ
ಅಕ್ಕಿಗಾಗಿ ಕಾದು ಕುಳಿತು ಇತ್ತ ಕೂಲಿಯೂ ಇಲ್ಲ ಅಕ್ಕಿಯೂ ಇಲ್ಲ ಎಂಬಂತಾಗಿದೆ.
ಇಲ್ಲಿ ಬಹುತೇಕ ಬಡವರು ಕೂಲಿ ಕಾರ್ಮಿಕರಿದ್ದು ಎಬ್ಬೆಟ್ಟು ಪಡೆದರೂ ಪಡಿತರ ಅಕ್ಕಿ ನೀಡದೆ ಅಲೆದಾಡಿಸುತ್ತಿದ್ದು ಮಹಿಳೆಯರು ಕೂಲಿ ನಾಲಿ ಬಿಟ್ಟು ಪಡಿತರ ಅಕ್ಕಿ ಪಡೆಯಲು ನ್ಯಾಯ ಬೆಲೆ ಅಂಗಡಿ ಮುಂದೆ ಬೆಳ್ಳಬೆಳಗ್ಗೆ ಕಾಯುತ್ತಿರುವುದು ಹೊಸದೇನಲ್ಲಿ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದುಗಂಗಮ್ಮ, ಸಿದ್ದಮ್ಮ, ಸರಸ್ಪತಿ, ರಾಧಮ್ಮ,ನಾಗವೇಣಿ,ಮಂಜುನಾಥ,ರತ್ನಮ್ಮ, ಮಮತ, ಗೌರಣ್ಣ,ರುದ್ರಮ್ಮ, ತಿಪ್ಪೀರಮ್ಮ, ದ್ಯಾಮಕ್ಕ ಇತರರು ಅಗ್ರಹಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪಡಿತರದಾರರಿಗೆ ಅನ್ನ ಭಾಗ್ಯ ಅಕ್ಕಿಯನ್ನು ತಲುಪಿಸುವರೇ ಕಾದು ನೋಡ ಬೇಕಿದೆ.

ಸಮಯಕ್ಕೆ ಬಾರದ ಪಶು ವೈದ್ಯಾಧಿಕಾರಿಗಳು ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಟ


ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ರೈತರು ತಮ್ಮ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ ‌.

ಪಶು ಚಿಕಿತ್ಸಾ ಕೇಂದ್ರದ ಮುಂಭಾಗದಲ್ಲಿ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಬರುವ ಸಮಯ ಬೆಳಗ್ಗೆ 9:00 ರಿಂದ 1:00 ವರೆಗೆ ಹಾಗೂ ಮಧ್ಯಾಹ್ನ ಊಟದ ನಂತರ ಮೂರರಿಂದ ಐದರವರೆಗೆ ಕರ್ತವ್ಯ ನಿರ್ವಹಿಸುವಂತೆ ನಾಮಫಲಕ ಹಾಕಿದ್ದರೂ ಸಹ ಸಮಯ 12 ಗಂಟೆಯಾದರೂ ವೈದ್ಯಾಧಿಕಾರಿಗಳು ಬಾರದೆ ಇರುವುದರಿಂದ ಹಲವು ರೈತರು ತಾವು ಸಾಕುವ ಪ್ರಾಣಿಗಳಾದ ಹಸು, ಧನ, ಎಮ್ಮೆ, ಕುರಿ, ಮೇಕೆ, ಇನ್ನು ಮುಂತಾದ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಪಶು ಆಸ್ಪತ್ರೆಗೆ ಬಂದರೆ ಆಸ್ಪತ್ರೆಯೂ ಬೀಗ ಹಾಕಿರುವುದು ಕಂಡು ಬಂದಿದೆ. ಹಲವು ದಿನಗಳಿಂದ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ರೈತರ ಮಣಿಕಂಠ ಎಸ್, ಮಲ್ಲಿಕಾರ್ಜುನ್, ನಾಗರಾಜು, ಪ್ರದೀಪ್, ವೆಂಕಟೇಶ್, ಮೂರ್ತಿ ,ಆತ್ಮಲಿಂಗ, ಮಂಜುನಾಥ ,ಇನ್ನು ಮುಂತಾದ ರೈತರು ಆರೋಪಿಸಿದ್ದಾರೆ.

ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪಶು ವೈದ್ಯಾಧಿಕಾರಿಯೂ ಸಮಯಕ್ಕೆ ಸರಿಯಾಗಿ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಖಾಸಗಿ ಬಸ್ ಗಳ ತಪಾಸಣೆಗೆ ನಮ್ಮದು ತಕಾರಾರಿಲ್ಲ ಇದು ಶಾಲೆಗೆ ಹೋಗುವ ಸಮಯ ವಿರ್ಥಿಗಳಿಗೆ ಶಾಲೆಗೆ ಹೋಗಲು ವಿಳಂಬವಾಗುತ್ತಿದೆ …..

ಚಳ್ಳಕೆರೆ ಜು.13 ನಮ್ಮದು ಬಸ್ ತಪಾಸಣೆ ಮಾಡಲು ಅಡ್ಡಿಯಿಲ್ಲ‌ಆದರೆ ಶನಿವಾರ ಮಾರ್ನಿಂಗ್ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ವಿಳಂಬ ವಾಗುತ್ತಿದೆ ಬೇಗ ಬಿಡಿ ಸಾರ್ ಸಾರ್ವಜನಿಕರಿಂದ ಮನವಿ ಮಾಡಿಕೊಂಡ ದೃಶ್ಯವಿದು.

ಹೌದು ಇದು ಚಳ್ಳಕೆರೆ ನಗರದ ಪಾವಗಡ ರಸ್ತೆಯ ಸುಮಾರು ಮೂರು ಕಿ.ಮೀ ದೂರದಲ್ಲಿ ಚಿತ್ರದುರ್ಗ ಆರ್ ಟಿ ಓ ಅಧಿಕಾರಿಗಳು ರಸ್ತಡ ಬದಿಯಲ್ಲಿ ಬೆಳಗ್ಗೆ7-30 ರ ಸಮದಲ್ಲಿ ಖಾಸಗಿ ಬಸ್ ಗಳನ್ನು ನಿಲ್ಲಿಸಿ ತಪಾಸಣೆ ಮಾಡುವಾಗಿ ವಿವಿಧ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸಿ ತಪಾಸಣೆ ವಿಳಂಬದಿಂದ ತರಗತಿಗೆ ಹೋಗಲು ನಗರದ ಬಸ್ ನಿಲ್ದಾಣದಿಂದ ಇಳಿದು ಶಾಲೆಗಳಿಗಡ ಹೋಗಲಯ ವಿಳಂಬವಾಗುತ್ತದೆ ತಡವಾದರೆ ಶಾಲೆಗೆ ಬಿಟ್ಟುಕೊಳ್ಳುವಿದ್ದಲ್ಲ ಎಂದು ವಿದ್ಯಾರ್ಥಿಗಳು ಗೊಣಗಿಕೊಳ್ಳುತ್ತಿರುವುದನ್ನು ಅರಿತ ಪ್ರಯಾಣಿಕರೊಬ್ಬರು ಆರ್ ಟಿ ಓ ಬಳಿ ಹೋಗಿ ಸಾರ್ ಇವತ್ತು ಮಾರ್ನಿಂಗ್ ಸ್ಕೂಲ್ ಇದೆ ಎಂಟು ಗಂಟೆ ಒಡೆಯುತ್ತಾರೆ ದಯವಿಟ್ಟು ಈ ಸಮಯ ಬಿಡಿ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಂಡರೆ ಆರ್ ಟಿ ಓ ವಾಹನ ಚಾಲಕ ಮಾತನಾಡಿ ನಾವಿಸರಕಾರಿ ಕೆಲಸ ಮಾಡಲು ಬಂದಿದ್ದೇವೆ ಇದಕ್ಕೆ ಸಮಯವಿಲ್ಲ ವಿದ್ಯಾರ್ಥಿಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಲಿ‌ ಎಂದು ಉತ್ತರ ನೀಡುತ್ತಾರೆ ಮತ್ತೆ ಆರ್ ಟಿ ಓ ತಪಾಸಣೆ ಮಾಡಿ ಕಳಿಸುತ್ತಾರೆ ಆರ್ ಟಿ ಓ ಬೆಳ್ಳಂ ಬೆಳಗ್ಗೆ ರಸ್ತೆಗಿಳಿದು ಖಾಸಗಿ ಬಸ್ ಗಳ ತಪಾಸಣೆಯಿಂದ ವಿದ್ಯಾರ್ಥಿಗಳಿಗೆ ಶಾಲೆಗಳಿಗೆತಲುಪಲು ಅರ್ಧ ಗಂಟೆ ವಿಳಂಬವಾಗಿದೆ ಇನ್ನು ಮುಂದೆಯದರೂ ವಿದ್ಯಾರ್ಥಿಗಳಿಗಾದರು ಕರುಣೆ ತೋರಿಸಿ ಶಾಲೆಗಳಿಗೆ ಹೋಗುವ ಸಮಯ ಬಿಟ್ಟು ಬೇರೆ ಸಮಯದಲ್ಲಿ ವಾಹನ ತಪಾಸಣೆ ಮಾಡುವಂತೆ‌ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy content of this page