ಜನಧ್ವನಿ

ಕಾಲೇಜಿಗೆ ಚಕ್ಕರ್ ವಿಸ್ಮಯ ಪಾರ್ಕ್ ಗೆ ಹಾಜರ್-ಡಿವೈಎಸ್ಪಿ ರಾಜಣ್ಣ ಎಂಟ್ರಿ ಚದುರಿದ ವಿದ್ಯಾರ್ಥಿಗಳು.

ಚಳ್ಳಕೆರೆ ಡಿ.7. ಕಾಲೇಜಿಗೆ ಚಕ್ಕರ್ ಹಾಕಿ ನಗರದ ಕೆಲ ವಿದ್ಯಾರ್ಥಿಗಳು ಪಾರ್ಕಿನಲ್ಲಿ ಕುಳಿತು ಹರಟೆ ಹಾಗೂಅಸಭ್ಯವಾಗಿ ವರ್ತಿಸುತ್ತಿದ್ದ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ಡಿವೈಎಸ್ಪಿ ಕಚೇರಿ ಸಮೀಪವೇ ವಿಸ್ಮಯ ಪಾರ್ಕ್ ಇದ್ದು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹುಟ್ಟು ಹಬ್ಬು ಆಚರಣೆ . ಪ್ರೀತಿ.ಪ್ರೇಮದ ಗುಂಗಿನಲ್ಲಿ ಅಸಭ್ಯವಾಗಿ ಲಿಫ್ ಲಾಕ್ ಇಂತಹ ಅಸಭ್ಯ ವರ್ತನೆಯ ಘಟನೆಗಳನ್ನು ವಿಸ್ಮಯ ಪಾರ್ಕ್ ಹೊಂದಿಕೊಂಡು ಸಂಸಾರಿಕ ಕುಟುಂಬಸ್ಥರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸಾರ್ವಜನಿಕರೇ ಪಾರ್ಕ್ ಬೀಗ ಜಡಿದ ಪ್ರಸಂಗಗಳು ನಡೆದಿವೆ. ಪೋಷಕರು ಕೂಲಿ ನಾಲಿ.ಸಾಲ ಸೂಲ ಮಾಡಿ ನಮ್ಮ ಮಕ್ಕಳು ಓದಿ ವಿದ್ಯೆ ಕಲಿತು ಬುದ್ದಿವಂತರಾಗಲಿ ಎಂದು ಶಾಲಾ ಕಾಲೇಜಿಗೆ ಕಳಿಸುತ್ತಾರೆ ಆದರೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಚಕ್ಕರ್ ಹೊಡೆದು ಪಾರ್ಕ್ ನಲ್ಲಿ ಹರಟೆ ಹೊಡೆಯುವುದನ್ನು ಡಿವೈಎಸ್ಪಿ ರಾಜಣ್ಣಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಪಾರ್ಕಿಗೆ ಬಂದು ಹರಟೆ ಹೊಡೆಯುತ್ತಿದ್ದ ವಿದ್ದಾರ್ಥಿಗಳಿಗೆ ಬುದ್ದಿ ಹೇಳಿ ಕಾಲೇಜಿಗೆ ಹೋಗುವಂತೆ ಕಿವಿಮಾತು ಹೇಳಿ ಕಳಿಸಿದ್ದಾರೆ. ಕಾಲೇಜು ಯುವಕ- ಯುವತಿಯರು ಪಾರ್ಕಿನ ಒಳಗೆ ಕೂತು ಪ್ರಪಂಚವನ್ನೇ ಮರೆತಿರುತ್ತಾರೆ. ಪಾರ್ಕಿನಲ್ಲಿ ಬಹುತೇಕ ಪಿಯುಸಿ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದು, ಕ್ಲಾಸಿಗೆ ಚಕ್ಕರ್ ಹಾಕಿ ಪಾರ್ಕ್ ಪೊದೆಗಳಲ್ಲಿ ಕೂತಿರುತ್ತಾರೆ. ಎಂಬ ದೂರುಗಳು ಕಾಲೇಜ್ ಉಪನ್ಯಾಸಕರಿಂದಲೂ ಆರೋಪಗಳು ಕೇಳಿ ಬಂದಿವೆ. ಶಾಲಾ ಕಾಲೇಜು ಪ್ರಾರಂಭ ಹಾಗೂ ಬಿಡುವಾಗ ಪೋಲಿಸ್ ಗಸ್ತು ಹಾಕುವಂತೆ ಸಾರ್ವ ಜನಿಕರು ಆಗ್ರಹಿಸಿದ್ದಾರೆ.

ಸಾಂಕ್ರಮಿಕ ರೋಗ ಭೀತಿಯಲ್ಲಿ ಪರಶುರಾಂಪುರ ದೊಡ್ಡ ಗೊಲ್ಲರಹಟ್ಟಿ ನಿವಾಸಿಗಳು…

ಚಳ್ಳಕೆರೆ ಜನಧ್ವನಿ ವಾರ್ತೆ ಡಿ.6 ಚರಂಡಿಗಳು ಸ್ವಚ್ಚತೆಯಿಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲಿ ನಿಂತು ಸಾಂಕ್ರಮಿಕ ರೋಗ ಬೀತಿಯಲ್ಲಿ ಬುಡಕಟ್ಟು ಜನರು ಜೀವನ ಸಾಗಿಸುವಂತಾಗಿದೆ.


ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರದ ಕೂಗಳತೆಯ ದೂರದಲ್ಲಿರುವ ದೊಡ್ಡ ಗೊಲ್ಲರಹಟ್ಟಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು ಒಂದು ವರ್ಷದಿಂದಲೂ ಚರಂಡಿ ಸ್ವಚ್ಚತೆಯಿಲ್ಲದೆ ತ್ಯಾಜ್ಯ ನೀರು ರಸ್ತೆ ಮೇಲೆ ನಿಂತು ಸೊಳ್ಳೆಗ ಉತ್ಪತ್ತಿ ಕೇಂದ್ರವಾಗಿದ್ದು ಸಾಂಕ್ರಮಿಕ ರೋಗ ಭೀತಿಯಲ್ಲಿ ಇಲ್ಲಿನ ಜನರು ನಿತ್ಯ ಜೀವನ ಸಾಗಿಸುವಂತಾಗಿದೆ.

ಕೊಳಚೆ ನೀರಿನ ಸಮೀಪವೆ ಅಂಗನವಾಡಿ ಕೇಂದ್ರವಿದ್ದು ಮಕ್ಕಳು ದಿನ ನಿತ್ಯ ಅಂಗನವಾಡಿ ಕೇಂದ್ರಕ್ಕೆ ಹೋಗುವಾಗ ಕೊಳಚೆ ನೀರು ತುಳಿದುಕೊಂಡು ದಾಟಿ ಕೊಂಡು ಹೋಗ ಬೇಕಾದ ಅನಿವಾರ್ಯತೆ.ಅಂಗನವಾಡಿ ಕೇಂದ್ರಕ್ಕೆ ಗರ್ಭಿಣಿ.ಬಾಣಂತಿಯರೂ ಸಹ ಪೌಷ್ಠಿಕ ಆಹಾರ ಪಡೆಯಲು ಹೋಗುತ್ತಾರೆ.

ಆರೋಗ್ಯ ಇಲಾಖೆ ನೀರು ನಿಲ್ಲಂತೆ ನೋಡಿಕೊಳ್ಳು ಕಾಲರ.ಮಲೇರಿಯಾ.ಡೆಂಗ್ಯೋ ಜ್ವರ ಬರುತ್ತದೆ ನಿಮ್ಮ ಸುತ್ತ ಮುತ್ತ ಸ್ವಚ್ಚತೆ ಕಾಪಾಡಿ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹಣ ಹೊಳೆ ಹರಿಸುತ್ತದೆ ಆದರೆ ಇತ್ತ ಗ್ರಾಮಗಳ ಸ್ವಚ್ಚತೆ ಇಲ್ಲದೆ ಸಾಂಕ್ರಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.

ದೊಡ್ಡ ಗೊಲ್ಲರಹಟ್ಟಿಯ. ನಿವಾಸಿಗಳ ಆರೋಪವೆಂದರೆ ಗ್ರಾಮಪಂಚಾಯಿತಿ ಸದಸ್ಯರು ವಾಸ ಮಾಡುವ ಬಡಾವಣೆಗಳ ರಸ್ತೆಗಳು ಚರಂಡಿಗಳು ಸ್ವಚ್ಚವಾಗಿದ್ದರೆ ಸಾಕೇ ಇತರೆ ರಸ್ತೆ ಚರಂಡಿಗಳು ಸ್ವಚ್ಚತೆ ಬೇಡವೆ? ಎಂಬ ಪ್ರಶ್ನೆಗಳು ಕೇಳಿದ್ದಾರ ಈ ರಸ್ತೆಗಳ ಮೂಲಕ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಓಡಾಡಿದರೂ ಸಹ ರಸ್ತೆ ಮೇಲೆ ನಿಂತಿರುವ ಕೊಳಚೆ ನೀರು ನೋಡಿಯೂ ನೋಡದಂತೆ ಜಾಣ ಕುರುಡರಾಗಿದ್ದಾರೆ ಈಗಾಗಲೆ ಸಾಕಷ್ಟು ಬಾರಿ ಸದಸ್ಯರ ಅಧಿಕಾರಿಗಳ ಗಮಗ ಹರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ದೊಡ್ಡ ಗೊಲ್ಲರಹಟ್ಟಿಯ ನಿವಾಸಿಗಳೂ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ಸ್ವಚ್ಚತೆಗೆ ಮುಂದಾಗುವರಡೆ ಕಾದು ನೋಡ ಬೇಕಿದೆ.

ಜಾಜೂರು ಉಪ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿ ಶಾಸಕ ಟಿ.ರಘುಮೂರ್ತಿ


ಬೆಳಗಾವಿ ಸುವರ್ಣವಿಧಾನಸೌಧ ಡಿ.06: ಚಳ್ಳಕೆರೆ ತಾಲ್ಲೂಕು ಪರುಶುರಾಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಜಾಜೂರು ಉಪ ಪೊಲೀಸ್ ಠಾಣೆಯನ್ನು ಮೇಲದ್ದರ್ಜೆಗೇರಿಸುವ ಕುರಿತಂತೆ ಶಾಸಕ ಟಿ.ರಘಮೂರ್ತಿ ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪ್ರಶ್ನಿಸಿದ್ದಾರೆ.

ಜಾಜೂರು ಆಂದ್ರ ಪ್ರದೇಶ ಗಡಿಭಾಗದಲ್ಲಿದೆ. ಇಲ್ಲಿ ಅನೇಕ ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಅಪಘಾತ ಹಾಗೂ ಕಳ್ಳತನ ಪ್ರಮಾಣ ಹೆಚ್ಚಾಗುತ್ತಿದೆ. ಉಪಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರೆತೆ ಇದೆ. ಇದನ್ನು ಸರಿಪಡಿಸಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಚುಕ್ಕೆ ಗುರುತಲ್ಲದ ಪ್ರಶ್ನೆ ಸಂಖ್ಯೆ 77ರಲ್ಲಿ ಶಾಸಕ ಟಿ.ರಘುಮೂರ್ತಿ ಕೇಳಿದ್ದಾರೆ.

ಜಾಜೂರು ಉಪಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ವಾರ್ಷಿಕವಾಗಿ ಸರಾಸರಿ 32 ಅಪಘಾತ ಮತ್ತು 126 ಅಪರಾಧ ಪ್ರಕರಣಗಳು ದಾಖಲಾಗಿವೆ. ಸದ್ಯ ಅಪಘಾತ ಹಾಗೂ ಕಳ್ಳತನ ತಡೆಗಟ್ಟಲು ಪರುಶುರಾಂಪುರ ಠಾಣೆಯಿಂದ ಅಗತ್ಯ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ಲಿಖಿತವಾಗಿ ಉತ್ತರಿಸಿದ್ದಾರೆ.

*ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ: ಸಚಿವ ಡಿ.ಸುಧಾಕರ್*



ಬೆಳಗಾವಿ ಸುವರ್ಣ ಸೌಧ ಡಿ.6: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತ್ವರಿತ ಗತಿಯಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗವನ್ನು ಆರಂಭಿಸುವ ಚಿಂತನೆ ಇದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸದಸ್ಯ ಡಾ.ತಳವಾರ್ ಸಾಬಣ್ಣ ಅವರು ನಿಯಮ 72ರಡಿ ಕೋರಿದ್ದ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ 2013-14 ನೇ ಸಾಲಿನಿಂದ 2022-23ನೇ ಸಾಲಿನವರೆಗೆ 11878.33 ಕೋಟಿ ರೂ ಅನುದಾನ ನಿಗಧಿಪಡಿಸಿದ್ದು, 10228.8 ಕೋಟಿ ರೂ ಅನುದಾನ ಮಂಡಳಿಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 8333.37 ಕೋಟಿ ರೂ ಅನುದಾನ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಅವಧಿಯಲ್ಲಿ 29,246 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, 24,996 ಕಾಮಗಾರಿಗಳು ಪೂರ್ಣಗೊಂಡಿವೆ. 3186 ಕಾಮಗಾರಿಗಳು ಪ್ರಗತಿಯಲ್ಲಿದ್ದು, 1064 ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

2023-24ನೇ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಕ್ರಿಯಾಯೋಜನೆ ರೂಪಿಸಲು ರಾಜ್ಯಪಾಲರು ಅನುಮೋದನೆ ನೀಡಿದ್ದು, ಮಂಡಳಿಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಮಂಡಳಿಯಿಂದ ಅನುಮೋದನೆಗೊಂಡ ಕಾಮಗಾರಿಗಳನ್ನು ವಿವಿಧ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕಾಮಗಾರಿಗಳನ್ನು 3ನೇ ತಪಾಸಣಾ ತಂಡದಿಂದ, ಇಂಜಿನಿಯರಿಂಗ್ ಕಾಲೇಜುಗಳಿಂದ, ಲೋಕೋಪಯೋಗಿ ಗುಣ ಭರವಸೆ ನಿಯಂತ್ರಣ ವಿಭಾಗ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಗುಣ ಭರವಸೆ ನಿಯಂತ್ರಣ ವಿಭಾಗ, ಸಣ್ಣ ನೀರಾವರಿ ಗುಣ ಭರವಸೆ ನಿಯಂತ್ರಣ ವಿಭಾಗ, ಇತ್ಯಾದಿ ಗುಣ ಭರವಸೆ ನಿಯಂತ್ರಣ ವಿಭಾಗಗಳಿಂದ ಪರಿಶೀಲಿಸಿ ದೃಢೀಕರಣ ಪಡೆಯಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಪ್ರತಿ ವರ್ಷ 5000 ಕೋಟಿ ರೂ.ಅನುದಾನ ನೀಡುವ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದು, ಈ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗವನ್ನು ಆರಂಭಿಸುವ ಚಿಂತನೆ ಇದ್ದು, ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲಾಗುವುದು ಎಂದರು.
ಗಮನ ಸೆಳೆಯುವ ಈ ಸೂಚನೆಯಲ್ಲಿ ಸಚಿವ ಈಶ್ವರ ಖಂಡ್ರೆ, ವಿಧಾನ ಪರಿಷತ್ ಶಾಸಕರಾದ ತೇಜಸ್ವಿನಿ ಗೌಡ, ರಘುನಾಥ್‌ರಾವ್ ಮಲ್ಕಾಪುರೆ, ವೆಂಕಟೇಶ, ಬೋಜೇಗೌಡ, ತಿಪ್ಪಣ್ಣ, ರವಿಕುಮಾರ್, ಸತೀಶ್, ನಮೋಶಿ ಮತ್ತಿತರರು ಮಾತನಾಡಿದರು.

ನೇತಾಡುವ ವಿದ್ಯುತ್ ತಂತಿಗಳು.ಬಿರುಕು ಬಿಟ್ಟು ವಾಲಿರುವ ವಿದ್ಯುತ್ ಕಂಬಗಳು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಿದೆ. ತಿಮ್ಮಪ್ಪಯ್ಯನಹಳ್ಳಿ.


ಚಳ್ಳಕೆರೆ ಡಿ.5, ನೇತಾಡುವ ವಿದ್ಯುತ್ ತಂತಿಗಳು.ಬಿರುಕು ಬಿಟ್ಟು ವಾಲಿರುವ ವಿದ್ಯುತ್ ಕಂಬಗಳು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಿದೆ. ಹೌದು ಇದು ಚಳ್ಳಕೆರೆ

ತಾಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ರೈತ ವೃಷಬೇಂದ್ರಪ್ಪ ರಿ ಸಂ44ರಲ್ಲಿ ನೇತಾಡುವ ವಿದ್ಯುತ್ ತಂತಿಗಳು ಕೈಗೆಟುವಂತಿದ್ದು ಇನ್ನು ಕೃಷಿ ಚಟುವಟಿಕೆ ವೇಳೆ ಸ್ವಲ್ಲ ಯ್ಯಾಮಾರಿದರೂ ಇಹ ಲೋಕ ತ್ಯಜಿಸುವುದು ಗ್ಯಾರೆಂಟಿ. ಇನ್ನು ವಿದ್ಯುತ್ ಕಂಬಳು ಬಿರುಕು ಬಿಟ್ಟು ಶಿಥಿಲವಾಗಿದ್ದು ಗಾಳಿಗೆ ಯಾವುದೇ ಸಂದರ್ಭದಲ್ಲಿ ಬೀಳುವ ಭೀತಿಯಲ್ಲಿ ರೈತರು ಆತಂಕದಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಂತಾಗಿದ್ದು. ಜಾನುವಾರುಗಳೇನಾದರೂ ವಿದ್ಯುತ್ ಕಂಬಗಳಿಗೆ ಉಜ್ಜಿ ದರೆ ವಿದ್ಯುತ್ ಶಾಖ್ ಹೊಡೆಯುವಯದು ಗ್ಯಾರೆಂಟಿ ಶಿಥಿಲವಾದ ವಿದ್ಯುತ್ ಕಂಬಗಳ ನೇತಾಡುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಬೆಸ್ಕಾಂ ಇಲಾಖೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೆ ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟ ಘಟನೆಗಳು ಸಾಕಷ್ಟಿವೆ ವಿದ್ಯುತ್ ಅವರ ಡಕ್ಕೆ ತುತ್ತಾಗಿ ಮೃತ ಪಡುವ ಮುನ್ನವೇ ವಿದ್ಯುತ್ ಕಂಬ ಹಾಗೂ ನೇತಾಡುವ ತಂತಿಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ದುರಸ್ಥಿ‌ಪಡಿಸುವರೇ ಕಾದು ನೋಡ ಬೇಕಿದೆ.

ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಸಭೆಗಳೂ ನಡೆಯದೆ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಹಾಗೂ ಅಭಿವೃದ್ಧಿ ಕುಂಠಿತ ಸದಸ್ಯ ವೈ.ಪ್ರಕಾಶ್ ಆರೋಪ.

ಚಳ್ಳಕೆರೆ ಜನಧ್ವನಿ ವಾರ್ತೆ ಡಿ.1. ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಕಳೆದ ಸುಮಾರು 8 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದ ಅನುದಾನದ ಹಂಚಿಕೆ ಆಗುತ್ತಿಲ್ಲ. ಕಾಮಗಾರಿಗಳ ಅನುಮೋದನೆ. ಇ-ಸ್ವತ್ ಸೇರಿದಂತೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ನಗರಸಭೆ ಸದಸ್ಯ ವೈ.ಪ್ರಕಾಶ್ ಗಂಭೀರ ಆರೋಪಮಾಡಿದ್ದಾರೆ. ಚಳ್ಳಕೆರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದ ಎರಡನೇ ಅವಧಿ ಮೀಸಲಾತಿ ಸರಕಾರ ನಿಗಧಿ ಪಡಿಸದೇ ಇರುವುದರಿಂದ ಸದಸ್ಯಕ್ಕೆ ಸುಮಾರು ಕಳೆದ 8 ತಿಂಗಳಿಂದ ನಗರಸಭೆಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು ನಗರಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಾರ್ವಜನಿಕರ ಯಾವುದೇ ಕೆಲದಸ ಕಾರ್ಯಗಳು ನಡೆಯುತ್ತಿಲ್ಲ ನಿವೇಶ. ಆಸ್ತಿ ಇ-ಸ್ವತ್ತು. ಕಂದಾಯ ಸೇರಿದಂತೆ ತಿಂಗಳಗಟ್ಟಲೆ ಅಲೆದಾಡಿದರೂ ಯಾವುದೇ ಕೆಲಸಗಳು ನಡೆಯುತ್ತಿಲ್ಲ .ನಮ್ಮನ್ನು ನಗರಸಭೆಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ಜನರಿಗೆ ನಾವು ಮುಖ ತೋರಿಸದಂತಾಗಿದೆ ಒತ್ತಡದಿಂದ ನಗರಸಭೆಯ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ. ನಗರಸಭೆಗೆ ಆಡಳಿತಾಧಿಕಾರಿ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗೆ ಧ್ವನಿಯಾಗುತ್ತಿಲ್ಲ. ಕಡತಗಳಿಗೆ ಸಹಿ ಹಾಕುವುದಕ್ಕೆ ಸೀಮಿತರಾಗಿದ್ದಾರೆ ಎಂಬ ಕೂಗು ನಗರದ ಜನತೆಯಿಂದ ಕೇಳಿ ಬರುತ್ತಲಿದೆ.


‘ಜಿಲ್ಲಾಧಿಕಾರಿ ಜಿಲ್ಲೆಯ ನಿರ್ವಹಣೆಯ ಗುರುತರ ಜವಾಬ್ದಾರಿ ಹೊಂದಿದ್ದು, ನಗರಸಭೆಯ ಹೆಚ್ಚುವರಿ ಹೊಣೆ ನಿಭಾಯಿಸಲು ಕಷ್ಟಸಾಧ್ಯವಾಗುತ್ತಿದೆ’ ಎಂಬುದು ನಾಗರಿಕರಿಂದ ಕೇಳಿ ಬರುತ್ತಿವೆ.

‘ನಗರಸಭೆ ಕಾರ್ಯಕಲಾಪಗಳು, ಸಾಮಾನ್ಯ ಸಭೆ, ಪ್ರಗತಿ ಪರಿಶೀಲನೆ, ಕಾಮಗಾರಿ, ಸ್ವಚ್ಛತಾ ಕಾರ್ಯ, ದೈನಂದಿನ ಕೆಲಸ ಕಾರ್ಯಗಳು ಹಿನ್ನಡೆ ಅನುಭವಿಸುತ್ತಿವೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.ನಗರಸಭೆ ಸದಸ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಆಡಳಿತಾಧಿಕಾರಿಗಳ ಸಹಿ ಬೇಕು. ಇದರಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ನಮ್ಮನ್ನು ಆಯ್ಕೆ ಮಾಡಿದ ಮತದಾರರು ನಮಗೆ ಶಪಿಸುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯರು.


ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ನಗರಸಭೆ ಸದಸ್ಯರು ಅಧಿಕಾರ ಚಲಾಯಿಸುವಂತಿಲ್ಲ. ಹೀಗಾಗಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೈರ್ಮಲ್ಯ, ಬೀದಿದೀಪದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬುದು ನಾಗರಿಕರ ಬೇಸರ ವ್ಯಕ್ತ ಪಡಿಸಿದ್ದಾರೆ ಈಗಲಾದರೂ ಜಿಲ್ಲಾಧಿಕಾರಿಗಳು ಚಳ್ಳಕೆರೆ ನಗರಸಭೆಗೆ ಭೇಟಿ‌ ನೀಡಿ ಸಾರ್ವಜನಿಕರು ಕುಂದುಕೊರತೆ ಆಲಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವರೇ ಕಾದು ನೋಡ ಬೇಕಾಗಿದೆ.

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಸಾಮಾನ್ಯ ಸಭೆ ಹಾಗೂ ಅಭಿವೃದ್ಧಿ ಕುಂಠಿತ ಸದಸ್ಯ ವೈ.ಪ್ರಕಾಶ್ ಆರೋಪ.

ಚಳ್ಳಕೆರೆ ಜನಧ್ವನಿ ವಾರ್ತೆ ಡಿ.1. ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಕಳೆದ ಸುಮಾರು 8 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದ ಅನುದಾನದ ಹಂಚಿಕೆ ಆಗುತ್ತಿಲ್ಲ. ಕಾಮಗಾರಿಗಳ ಅನುಮೋದನೆ. ಇ-ಸ್ವತ್ ಸೇರಿದಂತೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ನಗರಸಭೆ ಸದಸ್ಯ ವೈ.ಪ್ರಕಾಶ್ ಗಂಭೀರ ಆರೋಪಮಾಡಿದ್ದಾರೆ. ಚಳ್ಳಕೆರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದ ಎರಡನೇ ಅವಧಿ ಮೀಸಲಾತಿ ಸರಕಾರ ನಿಗಧಿ ಪಡಿಸದೇ ಇರುವುದರಿಂದ ಸದಸ್ಯಕ್ಕೆ ಸುಮಾರು ಕಳೆದ 8 ತಿಂಗಳಿಂದ ನಗರಸಭೆಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು ನಗರಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಾರ್ವಜನಿಕರ ಯಾವುದೇ ಕೆಲದಸ ಕಾರ್ಯಗಳು ನಡೆಯುತ್ತಿಲ್ಲ ನಿವೇಶ. ಆಸ್ತಿ ಇ-ಸ್ವತ್ತು. ಕಂದಾಯ ಸೇರಿದಂತೆ ತಿಂಗಳಗಟ್ಟಲೆ ಅಲೆದಾಡಿದರೂ ಯಾವುದೇ ಕೆಲಸಗಳು ನಡೆಯುತ್ತಿಲ್ಲ .ನಮ್ಮನ್ನು ನಗರಸಭೆಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ಜನರಿಗೆ ನಾವು ಮುಖ ತೋರಿಸದಂತಾಗಿದೆ ಒತ್ತಡದಿಂದ ನಗರಸಭೆಯ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ. ನಗರಸಭೆಗೆ ಆಡಳಿತಾಧಿಕಾರಿ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗೆ ಧ್ವನಿಯಾಗುತ್ತಿಲ್ಲ. ಕಡತಗಳಿಗೆ ಸಹಿ ಹಾಕುವುದಕ್ಕೆ ಸೀಮಿತರಾಗಿದ್ದಾರೆ ಎಂಬ ಕೂಗು ನಗರದ ಜನತೆಯಿಂದ ಕೇಳಿ ಬರುತ್ತಲಿದೆ.

‘ಜಿಲ್ಲಾಧಿಕಾರಿ ಜಿಲ್ಲೆಯ ನಿರ್ವಹಣೆಯ ಗುರುತರ ಜವಾಬ್ದಾರಿ ಹೊಂದಿದ್ದು, ನಗರಸಭೆಯ ಹೆಚ್ಚುವರಿ ಹೊಣೆ ನಿಭಾಯಿಸಲು ಕಷ್ಟಸಾಧ್ಯವಾಗುತ್ತಿದೆ’ ಎಂಬುದು ನಾಗರಿಕರಿಂದ ಕೇಳಿ ಬರುತ್ತಿವೆ.

‘ನಗರಸಭೆ ಕಾರ್ಯಕಲಾಪಗಳು, ಸಾಮಾನ್ಯ ಸಭೆ, ಪ್ರಗತಿ ಪರಿಶೀಲನೆ, ಕಾಮಗಾರಿ, ಸ್ವಚ್ಛತಾ ಕಾರ್ಯ, ದೈನಂದಿನ ಕೆಲಸ ಕಾರ್ಯಗಳು ಹಿನ್ನಡೆ ಅನುಭವಿಸುತ್ತಿವೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.ನಗರಸಭೆ ಸದಸ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಆಡಳಿತಾಧಿಕಾರಿಗಳ ಸಹಿ ಬೇಕು. ಇದರಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ನಮ್ಮನ್ನು ಆಯ್ಕೆ ಮಾಡಿದ ಮತದಾರರು ನಮಗೆ ಶಪಿಸುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯರು.

ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ನಗರಸಭೆ ಸದಸ್ಯರು ಅಧಿಕಾರ ಚಲಾಯಿಸುವಂತಿಲ್ಲ. ಹೀಗಾಗಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೈರ್ಮಲ್ಯ, ಬೀದಿದೀಪದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬುದು ನಾಗರಿಕರ ಬೇಸರ ವ್ಯಕ್ತ ಪಡಿಸಿದ್ದಾರೆ ಈಗಲಾದರೂ ಜಿಲ್ಲಾಧಿಕಾರಿಗಳು ಚಳ್ಳಕೆರೆ ನಗರಸಭೆಗೆ ಭೇಟಿ‌ ನೀಡಿ ಸಾರ್ವಜನಿಕರು ಕುಂದುಕೊರತೆ ಆಲಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವರೇ ಕಾದು ನೋಡ ಬೇಕಾಗಿದೆ.

ವಿಜ್ಞಾನ ಮುಂದುವರೆದೆಂತಲ್ಲಾ ಸರಕಾರಿ ಗೋಮಾಳ ಮಾಯ ಗೋ ಸಂತತಿ ನಶಿಸಿ ಹೋಗುತ್ತಿದೆ ಉಪನ್ಯಾಸಕ ಓಬಣ್ಣ ವಿಷಾದ.


ಚಳ್ಳಕೆರೆ ಜನಧ್ವನಿ ವಾರ್ತೆ ನ.30 ಒಬ್ಬ ಸಾದು ಬಿಕ್ಷೆ ಬೇಡಿ ದೇವರ ಎತ್ತುಗಳಿಗೆ ಮೇವು ಒದಿಸುತ್ತಿದ್ದೇವೆ ಆದರೆ ರಾಜ್ಯವನ್ನಾಳುವ ಜನಪ್ರತಿನಿಧಿಗಳು ಮಾತ್ರ ದೇವರ ರಾಸುಗಳನ್ನು ಗೋ ಶಾಲೆ ಪ್ರಾರಂಭಿಸಲು ಇಚ್ಚಾ ಶಕ್ತಿ ತೋರುತ್ತಿಲ್ಲ ಎಂದು ಸರಕಾರದ ವಿರುದ್ದ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಜಪಾನಂದಸ್ವಾಮಿಗಳು ಕಿಡಿ ಕಾರಿದ್ದಾರೆ.


ಶೀಫ್ಟ್ ಮಾಡದೇ, ರಾಸುಗಳಿರುವ ಸ್ಥಳಕ್ಕೆ ಸರ್ಕಾರ ಮೇವು ಪೂರೈಕೆ ಮಾಡಬೇಕು ನಗರದ ಪ್ರವಾಸಿಮಂದಿರದಲ್ಲಿ ನಡೆದ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿನ ದೇವರ ರಾಸುಗಳ ಕಿಲಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರ ಬರಗಾಲ ಎಂದು ಘೋಷಣೆ ಮಾಡಿ ಗೋಶಾಲೆ ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ ಆದರೆ ಇದುವರೇಗೂ ಜಾನುವಾರುಗಳಿಗೆ ಗೋಶಾಲೆಗಳು ತೆರೆಯಲು ಸರಕಾರ ಮೀನಾ ಮೇಷ ಎಣಿಸುತ್ತಿದೆ. ದೇವರ ಎತ್ತುಗಳಿಗೆ ಪ್ರತ್ಯೇಕ ಗೋಶಾಲೆ ತೆರೆಯಬೇಕು, ಶಾಶ್ವತ ಗೋಶಾಲೆ ತೆರಯಲು ಸರಕಾರದ ಗೋಮಾಳದಲ್ಲಿ ಜಾಗ ಮೀಸಲಿಡಬೇಕು.


ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ದೇವರ ಹೆಸರುಗಲ್ಲಿ ಜಾನುವಾರುಗಳು ಬಿಟ್ಟು ಪೋಷಣೆ ಮಾಡಿಕೊಂಡು, ವಿಶೇಷ ಆಚರಣೆಗಳನ್ನು ಮಾಡುತ್ತಾರೆ. ದೇವರ ರಾಸುಗಳಿಗೆ ಮೂಗು ದಾರ ಹಾಕುವುದಿಲ್ಲ, ಹಗ್ಗ ಹಾಕಿ ಕಟ್ಟುವುದಿಲ್ಲ, ಇವು ಗೋ ಶಾಲೆಗಳಲ್ಲಿ ಇರುವುದಿಲ್ಲ. ದೇವರ ರಾಸುಗಳು ಇರುವ ಸ್ಥಳಗಳಿಗೆ ಸರ್ಕಾರ ಮೇವು ಪೂರೈಕೆ ಮಾಡಿ ದೇವರ ರಾಸುಗಳನ್ನು ಸರ್ಕಾರ ರಕ್ಷಣೆ ಮಾಡಬೇಕ ಎಂದು ಮನವಿ ಮಾಡಿದರು.
ಗೋ ಶಾಲೆಗಳು ಯಾವಾಗಲು ತೆರೆಯಬೇಕಿತ್ತು, ಆದರೆ ಸರ್ಕಾರ, ಜನಪ್ರತಿನಿಧಿಗಳ ಮಾತಿನಲ್ಲಿಯೇ ಇದೇ ಹೊರತು, ಇದುವರೆಗೆಯಾದರೂ ಗೋ ಶಾಲೆಗಳನ್ನು ಸರ್ಕಾರ ಆರಂಭಿಸಿಲ್ಲ, ಮಳೆಯಿಲ್ಲದೆ ಮೇವು ನೀರಿಲ್ಲದೆ ಜಾನುವಾರುಗಳು ರಕ್ಷಣೆ ಮಾಡಲು ಗೋಪಾಲಕರು ಪರದಾಡುತ್ತಿದ್ದಾರೆ. ಸರ್ಕಾರ ದೇವರ ರಾಸುಗಳಿಗೆ ಮೇವು ಪೂರೈಕೆ ಮಾಡುವುದಿಲ್ಲವೆಂದು ಹೇಳಲು ನಾನೇ ಜಾನುವಾರುಗಳಿಗೆ ಮೇವು ಪೂರೈಕೆ ಮಾಡುತ್ತೇನೆ ಎಂದು ಗೋಪಾಲಕರಿಗೆ ಹೇಳಿದರು.
ನಾನು ಇದುವರೆಗೆ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿರುವ 113 ದೇವರ ರಾಸುಗಳ ಕೇಂದ್ರಗಳಿಗೆ ಭಿಕ್ಷೆ ಬೇಡಿ 302 ಟನ್ ಮೇವು ಪೂರೈಕೆ ಮಾಡಿದ್ದೇನೆ, ಸರ್ಕಾರಕ್ಕೆ ಮೇವು ಪೂರೈಕೆ ಮಾಡಲು ಮುಂದಾಗದಿದ್ದರೆ ಮುಂಗಾರು ಬರುವ ತನಕ ಮೇವು ಪೂರೈಕೆ ಮಾಡುತ್ತೇನೆ. ಗೋ ಶಾಲೆಗಳು ತೆರೆಯುವುದರಿಂದ ದೇವರ ರಾಸುಗಳಿಗೆ ಯಾವುದೇ ಉಪಯೋಗವಿಲ್ಲ ಎಂದು ತಿಳಿಸಿದರು.
ಮೊಳಕಾಲ್ಮೂರು ತಾಲ್ಲೂಕಿನ ಮಂಜಣ್ಣ ಮಾತನಾಡಿ ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ ಕ್ಷೇತ್ರಗಳಲ್ಲಿ ನಾಯಕ ಸಮುದಾಯ ಶಾಸಕರುಗಳು ಇದ್ದರು, ಬುಡಕಟ್ಟು ಮ್ಯಾಸನಾಯಕರು ದೇವರ ಹೆಸರುಗಳಲ್ಲಿ ಪೋಷಿಸುತ್ತಿರುವ ಜಾನುವರುಗಳು ಹಾಗು ಅವುಗಳಿಂದ ಆಚರಣೆ ಮಾಡುವ ಸಂಪ್ರದಾಯಗಳು ಉಳಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಉಪನ್ಯಾಸP ಓಬಣ್ಣ ಮಾತನಾಡಿ ವಿಜ್ಞಾನ ಮುಂದುವರೆದೆAತಲ್ಲ ಹುಲ್ಲು ಗಾವಲು ಪ್ರದೇಶವನ್ನು ಸರಕಾರ ಮುಟ್ಟುಗೋಲು ಮಾಡಿಕೊಂಡು ಜಾನುವಾರುಗಳಿಗೆ ಮೇಯಲು ಸ್ಥಳವಿಲ್ಲದಂತಾಗಿದೆ ಇದರಿಂದ ಪಶುಸಂಗೋಪನೆ ನಶಿಸಿ ಹೋಗುತ್ತದೆ.ಪಾರಂಪಾರಿಕ ತಲತಲಾಂತರದಿAದ ಬಂದ ಬುಡಕಟ್ಟು ಸಂಸಕೃತಿ ಕಣ್ಮರೆಯಾಗುತ್ತದೆ ದೇವರ ಎತ್ತುಗಳಿಗೆ ಪ್ರತ್ಯೇಕ ಗೋಶಾಲೆ ತೆರೆಯುವಂತೆ ತಿಳಿಸಿದರು.
ನಟರಾಜ್ ಮಾತನಾಡಿ ಸರಕಾರಿ ಗೋಮಾಳಖಾಸಗಿಯವರಿಗೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ನಿವೇಶನ ಭೂಮಿ ಮಂಜುರಾತಿ ಮಾಡುತ್ತಿದೆ ಆದರೆ ದೇವರ ಎತ್ತುಗಳಿಗೆ ಮಾತ್ರ ಶಾಶ್ವತ ಗೋಶಾಲೆ, ಮೇವು ಬೆಳೆಯುವ ಯೋಜನೆಗೆ ಸರಕಾರಿ ಗೋಮಾಳದಲಿ ಮೀಸಲಿಡಲು ಮುಂದಾಗುತ್ತಿಲ್ಲ ದೇವರ ಎತ್ತುಗಳು ಜಪಾನಂದ ಸ್ವಾಮಿಗಳು ಕಳೆದ ಐದು ವರ್ಷಗಳಿಂದ ಮೇವು ವಿತರಣೆ ಮಾಡುತ್ತಿದ್ದಾರೆ ಇವರಿಗೆ ದೇವರ ಎತ್ತುಗಳ ದತ್ತು ಮಾಡಿಸುವುದು ಹಾಗೂ ದೇವರ ಎತ್ತುಗಳಿಗೆ ಗೋಶಾಲೆ ನಿರ್ಮಿಸಲು ಸರಕಾರಿ ಗೋಮಾಳದಲ್ಲಿ ಭೂಮಿ ಮಂಜುರಾತಿ ನೀಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲ್ಲಿ ಕಿಲಾರಿ ಬೋರಯ್ಯ, ಪಾಲಯ್ಯ,ಬೋರಯ್ಯ, ಸಿದ್ದೇಶ್, ಪರಮೇಶ್ವರಪ್ಪ, ಸಂಯೋಜಕರಾದ ಮಹೇಶ್, ಸಿದ್ದೇಶ್ ಸೇರಿದಂತೆ ಉತರರುದ್ದರು.

ಮಹಿಳ ಮತ್ತು ಮಕ್ಕಳ ಆಸ್ಪತ್ರೆಗೆ ಡಾ.ನಾಗರಾಜ್.


ಚಳ್ಳಕೆರೆ ಸೆ.28. ಸಾರ್ವಜನಿಕ‌ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ವರ್ಗಾವಣೆ ಆದೇಶ ಹೊರಡಿಸಿದ ಆರೋಗ್ಯ ಇಲಾಖೆ. . ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆ ಯ ಮಹಿಳ ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಶಮಾಪರ್ವಿನ್ ಇವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿದರೆ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ನಾಗರಾಜ್ ಇವರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಮಕ್ಕಳ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಸಿ.ಮಂಜೂರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ.

ಹಾಡು ಹಗಲಲ್ಲೇ ಅಪರಾದ ಕೃತ್ಯಗಳು- ಕೆಟ್ಟು ನಿಂತ ಸಿಸಿ ಕ್ಯಾಮಗಳ ದುರಸ್ಥಿಗೆ ಮುಂದಾಗದ ಅಧಿಕಾರಿಗಳು ಸಾರ್ವಜನಿಕರ ಅಕ್ರೋಶ.


ಚಳ್ಳಕೆರೆ ನ.28ಒಂದಾನೊಂದು ಕಾಲದಲ್ಲಿ ಎಣ್ಣೆ ನಗರಿ ಎಂದು ಖ್ಯಾತಿ ಪಡೆದಿರುವ ಚಳ್ಳಕೆರೆ ಈಗ ಅತಿ ವೇಗವಾಗಿ ಬೆಳೆದು ಶಿಕ್ಷಣ, ವಿಜ್ಞಾನ ಸಂಸ್ಥೆಗಳಿಂದ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದ್ದು ವಿಜ್ಞಾನ ನಗರಿ ಎಂದು ಪ್ರಪಂಚದ ಭೂಪಟದಲ್ಲಿ ಸೇರಿರುವ ಇಂತಹ ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ, ನಗರದ ಜನತೆಯ ನೆಮ್ಮದಿ ಕೆಡಿಸುವಂತೆ ಮಾಡಿದೆ.


ಹೌದು ಇದು ಚಳ್ಳಕೆರೆ ನಗರದ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದು ಆಂದ್ರಪ್ರದೇಶಕ್ಕೆ ಹೊಂದಿಕೊಂಡಿರುವುದು ವಾಹನಗಳ ದಟ್ಟಣೆ, ಸಂಚಾರ ನಿಯಮ, ಅಪಘಾತಗಳ ಜತೆಗೆ ಕಳ್ಳತನ, ದರೋಡೆ, ಸುಲಿಗೆ ಮಾಡಿ ತಪ್ಪಿಸಿಕೊಳ್ಳಲು ಸಿಸಿ ಕ್ಯಾಮಗಳಲ್ಲಿದೆ ಇರುವುದು ಕಳ್ಳರಿಗೆ ವರದಾನವಾಗಿದೆ.
ನಗರದ ಮುಖ್ಯರಸ್ತೆಯಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳು, ಚಿನ್ನ, ಬೆಳ್ಳಿ ಅಂಗಡಿಗಳು ಸಾಕಷ್ಟಿವೆ. ಚಿನ್ನ, ಬೆಳ್ಳಿ ಅಂಗಡಿ, ಪೆಟ್ರೋಲ್ ಬಂಕ್ ದರೋಡೆ, ಸರಣಿ ಅಂಗಡಿಗಳ ಕಳವು, ನೆಹರು ವೃತ್ತ , ಖಾಸಗಿ ಬಸ್ ನಿಲ್ದಾಣ, ಸಾರಿಗೆ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮೊಬಲ್ ಹಾಗೂ ದ್ವಿಚಕ್ರವಾಹನ , ಪಿಕ್ ಪಾಕೇಟ್ ಪ್ರಕರಣ, ಪೊಲೀಸ್ ಸೋಗಿನಲ್ಲಿ ಮಹಿಯರ ಸರಗಳ್ಳತನ ,ಮತ್ತು ಬರಿಸಿ ಒಡವೆ ಹಣ ಕಳವು , ರಸತೆ ಅಪಘಾತ ಸೇರಿದಂತೆ ಹಲವು ಅಪರಾದ ಕೃತ್ಯಗಳು ಪದೇ ಪದೆ ನಡೆಯುತ್ತಿವೆ.
ನಗರಸಭೆಯಿಂದ ಸುಮಾರು ನಗರದ ಪ್ರಮುಖ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 20 ಸಿ.ಸಿ. ಕ್ಯಾಮರ ಆಳವಡಿಸಲಾಗಿತ್ತು. ಅವುಗಳ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದಿವೆ.


ನಗರದ ಕೆಲವು ಚಿನ್ನ ಬೆಳ್ಳಿ ಅಂಗಡಿ, ಪೆಟ್ರೋಲ್ ಬಂಕ್, ಬ್ಯಾಂಕ್ ಹಾಗೂ ವಿವಿಧ ಅಪರಾದ ಕೃತ್ಯಗಳು ನಡೆದಾಗ ಕಳ್ಳತನ ಪ್ರಕರಣಗಳು ಪತ್ತೆ ಹಚ್ಚಲು
ಸುಲಭವಾಗುತ್ತದೆ ಎಂದು ಹೇಳುವ ಪೊಲೀಸ್ ಇಲಾಖೆ ಮಾತ್ರ ನಗರದ ಪ್ರಮುಖ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಗಳನ್ನು ದುರಸ್ತಿ ಪಡಿಸಲುಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಪೊಲೀಸ್ ಇಲಾಖೆ ನಗರಸಭೆ ಕಡೆ ಬೊಟ್ಟು ತೋರಿಸಿದರೆ ನಗರಸಭೆ ಈ ಹಿಂದ ನೀಡಿದ್ದ ಸಿಸಿ ಕ್ಯಾಮಗಳ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿವೆ ನಗರಸಭೆ ಬಜೆಟ್ ನಲ್ಲಿ ಸಿಸಿ ಕ್ಯಾಮರಗಳಿಗೆ ಅನದಾನ ಮೀಸಲಿಡಲಾಗಿದೆ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಹಾಗೂ ಸಾಮಾನ್ಯ ಸಭೆಗಳಿಲ್ಲದೆ ನೆನೆಗುದಿಗೆ ಬಿದ್ದಿದೆ ಎಂಬ ಮಾಹಿತಿ ನಗರಸಭೆ ಹೇಳಲಾಗುತ್ತಿದೆ ಈಗಲಾದರೂ ಸಂಬಂಧಪಟ್ಟ ಇಲಾಖೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗುವರೇ ಕಾದು ನೋಡ ಬೇಕಿದೆ.