ಜನಧ್ವನಿ ವರದಿ ಎಫೆಕ್ಟ್ ಕೊನೆಗೂ ಓಬಯ್ಯನಹಟ್ಟಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಭಾಗ್ಯ ಒದಗಿಸುವುದಾಗಿ ಭರವಸೆ.

by | 26/10/23 | ಇಂಪ್ಯಾಕ್ಟ್

ಜನಧ್ವನಿ ಮೀಡಿಯಾ ವರದಿ ಎಫೆಕ್ಟ್
ಚಳ್ಳಕೆರೆ ಜನಧ್ವನಿ ವಾರ್ತೆ ಅ.26. ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಓಬಯ್ಯನಹಟ್ಟಿ ಗ್ರಾಮಸ್ಥರ ಅಳಲು. ಎಂಬ ತಲೆಬತಹದಡಿಯಲ್ಲಿ ಬುಧವಾರ ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಗುರುವಾರ ಬೆಳಗ್ಗೆ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ನೀರಿನ ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ಯಿಯ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಗಟ್ಟಿ ಬೋರಯ್ಯ ಕಪಿಲೆ ಹಾಗೂ ತಿಪ್ಪಳ್ಳಿ ಕಪಿಲೆ ವ್ಯಾಪ್ತಿಯಲ್ಲಿ ಸುಮಾರು 27 ರಿಂದ30 ಮನೆಗಳಿದ್ದು ಕಿರು ನೀರು ಸಬರಾಜು ಕುಡಿಯುವ ನೀರಿನ 4 ಟ್ಯಾಂಕ್ ಗಳಿವೆ 2 ಜಾನುವಾರು ತೊಟ್ಟಿಗಳಿವೆ ಕಳೆದ ಸುಮಾರು 8 ವರ್ಷಗಳಿಂದ ವರ್ಷಗಳಿಂದ ನೀರು ಬಿಡದೆ ಖಾಲಿ ಇವೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುಔಮತಾಗಿದೆ ಎಂದು ಇಲ್ಲಿನ ಜನರು ಜನಧ್ವನಿ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ಥಳಕ್ಕೇ ಪಿ ಡಿ ಒ ಹಾಗೂ ಸದಸ್ಯ ಭೇಟಿ ನೀಡಿ ಪರಿಶೀಲನೆ ನಡೆಸುದರು.

ಗ್ರಾಪಂ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಗ್ರಾಪಂ ಸದಸ್ಯರೊಬ್ಬರ ಸಂಬಂಧಿಕರ ಜಮೀನಿಗೆ ನೀರು ಬಿಟ್ಟುಕೊಳ್ಳಲು ಬಿಟ್ಟಿರುವುದರಿಂದ ನಮಗೆ ನೀರಿನ ತೋಂದರೆಯಾಗಿದೆ ಹಾಗೂ ಇಲ್ಲಿದ್ದ ಕೈಪಂಪಿನ ಬಿಡಿಭಾಗಗಳನ್ನು ಮಾರಿಕೊಂಡಿದ್ದಾರೆ ಎಂದು ಗ್ರಾಮಸ್ಥರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸರಕಾರಿ ಬೋರು ನನ್ನ ಜಮೀನಿನಲ್ಲಿದೆ ನಾನು ಬಿಡುವುದಿಲ್ಲ ಎಂದು ಕುಡಿಯುವ ನೀರಿನ ಬೋರ್ ವಶಪಡಿಸಿಕೊಂಡ ರೈತ ಹಠ ಮಾಡಿದಾಗ ಪಿಡಿಒ ಶ್ರೀನಿವಾಸ್ ಹಾಗೂ ಸದಸ್ಯರು ಮಾತನಾಡಿ ರೈತನ ವಶದಲ್ಲಿರುವ ಬೋರನ್ನು ಪಂಚಾಯತ್ ವತಿಯಿಂದ ಶುಕ್ರವಾರ ರೆಡಿ ಮಾಡ್ಸಿ ನೀರು ಬಿಡ್ತಿವಿ ಎಂದು
ಪಿ ಡಿ ಒ ಶ್ರೀನಿವಾಸ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಸಂದರ್ಭದಲ್ಲಿ ಗ್ರಾಮಸ್ಥರಾದ ಪೆದ್ದಯ್ಯಾ
ಮ್ಯಾಕಲಮಲ್ಲಯ್ಯ ಬೋಡಿ ಹುಚ್ಚಯ್ಯ ನಾಗಬೂಷಣ
ಪಾಲಯ್ಯ ವಿಜಯ. ಮಹದೇವಣ್ಣ ಮರಡಿ ಬೋರಯ್ಯ ಬೈಯಣ್ಣ. ಗ್ರಾಪಂ ಸದಸ್ಯರಾದ ಒಬಣ್ಣ ಬಂಡೆ. ಸೋಮಣ್ಣ.‌ ಗೀತಮ್ಮ. ಬಡಯ್ಯ ಲಕ್ಷ್ಮಿ. ಮಹದೇವಣ್ಣ ಇತರರಿದ್ದರು.
[

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *