ಚಳ್ಳಕೆರೆ ಜ.8 ಪೊಲೀಸ್ ಉಪಾಧೀಕ್ಷರ ಕಚೇರಿ ಉಪ ವಿಭಾಗ ಚಳ್ಳಕೆರೆ. ಚಳ್ಳಕೆರೆ ಪೊಲೀಸ್ ಠಾಣೆ ಇವರುಗಳ ಸಂಯುಕ್ತ ಆಶ್ರಯದಲ್ಲಿ “ನಶೆಮುಕ್ತ ಚಿತ್ರದುರ್ಗ – ನಶೆಮುಕ್ತ ಚಳ್ಳಕೆರೆ” ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥ ಕಾರ್ಯಕ್ರಮ ನಡೆಸಲಾಯಿತು.
ಇತ್ತೀಚಿಗೆ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗದವರಲ್ಲಿ ಮಾದಕ ವ್ಯಸನ ಹವ್ಯಾಸವಾಗಿ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ರವರ ನಿರ್ದೇಶನದ ಮೇರೆಗೆ ಚಳ್ಳಕೆರೆ ನಗರದಲ್ಲಿ “ನಶೆ ಮುಕ್ತ ಚಿತ್ರದುರ್ಗ – ನಶೆ ಮುಕ್ತ ಚಳ್ಳಕೆರೆ” ಘೋಷಣೆಯಡಿ ನಗರದ ಪ್ರಮುಖ ಬೀದಿಗಳಲ್ಲಿ “ಜಾಗೃತಿ ಜಾಥ” ನಡೆಸಲಾಯಿತು.
ನಂತರ ನಗರದ ವಾಲ್ಮೀಕು ವೃತ್ತದಲ್ಲಿ ಜಾಥ ಕಾರ್ಯಕ್ರಮಕ್ಕೆ ಡಿವೈಎಸ್ಪಿ ರಾಜಣ್ಣ ಮಾತನಾಡಿ ಇತ್ತೀಚಿಗೆ ಯುವಕರು, ವಿದ್ಯಾರ್ಥಿಗಳು, ಪಾಶ್ಚಿಮಾತ್ಯರ ಸೋಗಿನಲ್ಲಿ ಅನುಕರಣೆಗಳನ್ನು ಅನುಸರಿಸಿ ಮಾದಕ ವ್ಯಸನದ ವಸ್ತುಗಳಿಗೆ ದಾಸರಾಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದರಲ್ಲದೆ
ಈ ಮಾದಕ ವಸ್ತುಗಳ ಸೇವನೆಯಿಂದ ಧನಹಾನಿ,ಮಾನಹಾನಿ ಮತ್ತು ಪ್ರಾಣಹಾನಿ ಎಂಬುದನ್ನು ಮರೆತು ಕ್ಷಣಿಕ ಸುಖಕ್ಕಾಗಿ ಹಾತೊರೆಯುತ್ತಿರುವುದು ತುಂಬಾ ಕಳವಳಕಾರಿಯಾದ ವಿಷಯವಾಗಿದ್ದು ಈ ದೇಶದ ಭವಿಷ್ಯ ನಿರ್ಮಿಸುವ ಹೊಣೆಗಾರಿಕೆ ಇರುವ ಯುವಕರು ಹಾಗೂ ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ಅಪರಾಧಿ ಚಟುವತಿಕೆಗಳಿಂದ ದೂರ ಉಳಿಯಬೇಕು ಎಂದರು.
![](https://janadhwani.in/wp-content/uploads/2024/01/IMG-20240108-WA0085.jpg)
ಈ ನಿಟ್ಟಿನಲ್ಲಿ ನಮ್ಮ ಸಮಾಜದ ಯುವಕ ಯುವತಿಯರು ತಮ್ಮ ಅಮೂಲ್ಯವಾದ ಸಮಯವನ್ನು ವಿದ್ಯಾರ್ಜನೆ, ಆಧ್ಯಾತ್ಮಿಕ, ಯೋಗ, ಕುಟುಂಬ ಪರಿಪಾಲನೆ ಮಾಡುವ ಮೂಲಕ ದೇಶದ ಸತ್ಪ್ರಜೆಗಳಾಗಿ ತಮ್ಮ ಹೆತ್ತ ತಂದೆ ತಾಯಿಗಳಿಗೆ ಹಾಗೂ ಸಮಾಜದ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂಬುದಾಗಿ ಅವರು ಯುವಕ ಯುವತಿಯರಿಗೆ ಕರೆ ನೀಡಿದರು.
ಚಳ್ಳಕೆರೆ ಠಾಣೆ ವೃತ್ತ ನೀರೀಕ್ಷ ದೇಸಾಯಿ ಮಾತಾನಾಡಿ ಮಾದಕ ವಸ್ತುಗಳ ಸೇವಿಸಿದ ವ್ಯಕ್ತಿಗಳಿಂದ ಸಮಾಜದಲ್ಲಿ ಅನೈತಿಕ ಅಪರಾಧ ಚಟುವಟಿಕೆಗಳು ಹೆಚ್ಚಿಸುವ ಕಾರಣ ಯಾವುದೇ ಒತ್ತಡಕ್ಕೆ ಮಣಿಯದೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಅಲ್ಲದೆ ಅಪರಾಧಿ ಎಷ್ಟೇ ಬುದ್ಧಿವಂತಿಕೆ ತೋರಿಸಿದರು ಇಲಾಖೆಯ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಇಂದಿನ ಯುವ ಜನಾಂಗ ಹಾಗೂ ಸಾರ್ವಜನಿಕರು ಈ ಮಾದಕ ವಸ್ತುಗಳಿಂದ ದೂರ ಇರಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಿಎಸ್ ಐ ಗಳಾದ ಸತೀಶ್ ನಾಯ್ಕ.ಧರೆಪ್ಪ.ಪೋಲಿಸ್ ಸಿಬ್ಬಂದಿಗಳು ಹಾಗೂ ಶಾಲಮಕ್ಕಳು ಭಟಗವಹಿಸಿದ್ದರು.
0 Comments