ಚರಿತ್ರೆ

ರಾಮಜೋಗಿಹಳ್ಳಿ ಗ್ರಾಮದ ಇತಿಹಾಸ ಹೊಂದಿದ ಕಲ್ಯಾಣಿಯ ದುರಸ್ಥಿ ಪಡಿಸುವಂತೆ ಗ್ರಾಪಂ ಸದಸ್ಯ ಸುರೇಶ್ ಬಾಬು.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 13. ಪೂರ್ವಜರು ಜನ ಜಾನುವಾರುಗಳಿಗೆಕುಡಿಯುವ ನೀರಿಗಾಗಿ ಕಲ್ಯಾಣಿ, ತೆರದ ಬಾವಿ, ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದರು ಅವುಗಳ ನಿರ್ವಹಣೆಯಿಲ್ಲದೆ ಕಣ್ಮರೆಯಾಗುತ್ತಿರುವುದು ವಿಷಾಧನೀಯ .
ಹೌದು ಇದು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ಸಮೀಪ ಸುಮಾರು 100 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಕಲ್ಯಾಣಿಯಲ್ಲಿನ ನೀರನ್ನು ಈಗಲಾಸಹ ಜನ ಜಾನುವಾರುಗಳಿಗೆ ಹಾಗೂ ದಿನ ನಿತ್ಯದ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಇಂತಹ ಇತಿಹಾಸವಿರು ಕಲ್ಯಾಣಿಗೆ ಮುಚ್ಚಿಹೋಗು ದುಸ್ಥಿತಿಗೆ ಬಂದಿದೆ.
ಕಲ್ಯಾಣಿ ಏರಿ ಕುಸಿದು ಕಲ್ಯಾಣಿಯಲ್ಲಿ ಮಣ್ಣು ಬಿದ್ದು ಮುಚ್ಚಿಹೋಗು ಬೀತಿ ಎದುರಾಗಿದೆ ಕಳೆದ ಮೂರು ವರ್ಷಗಳ ಹಿಂದೆ ಮಳೆಗಾದಲ್ಲಿ ಕೆರೆಯ ನೀರು ಬಿಟ್ಟಾಗ ಕಲ್ಯಾಣಿ ತುಂಬಿಹೋದ ಸಂದರ್ಭಸದಲ್ಲಿಯೂಸ ಏರಿ ಕುಸಿದಿತ್ತು ಆಗ ತಾತ್ಕಾಲಿಕವಾಗಿ ದುರಸ್ಥಿ ಮಾಡಿಸಿದ್ದರು ಮತ್ತೆ ಈಗ ಕುಡಿಯುವ ಹಂತಕ್ಕೆ ತಲುಪಿತ್ತು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಕಲ್ಯಾಣಿ ದುರಸ್ಥಿ ಪಡಿಸಿ ಮುಂದಿನ ಪೀಳಿಗೆಗೆ ಕಲ್ಯಾಣಿ ಉಳಿಸುವಂತೆ ಗ್ರಾಪಂ ಸದಸ್ಯಸುರೇಶ್ ಬಾಬು ಒತ್ತಾಯಿಸಿದ್ದಾರೆ.

ಸಡಗರ ಸಂಭ್ರಮದಿಂದ ಜರುಗಿದ ಹಟ್ಟಿತಿಪ್ಪೇಶನ ರಥೋತೋತ್ಸವ- ಮುಕ್ತಿ ಬಾವುಟ಻ 61 ಲಕ್ಷ ರೂಗಳಿಗಳಿಗೆಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾರ್ .


ಚಳ್ಳಕೆರೆ ಜನಧ್ವನಿ ಮಾ.26 ಚಿತ್ರದುರ್ಗ: ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಬರಗಾಲ ಹಾಗೂ ಉರಿ ಬಿಸಿಲು, ಗಾಳಿ, ದೂಳು ಯಾವುದನ್ನೂ ಲೆಕ್ಕಿಸದೆ ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಬೆಳಗ್ಗೆಯಿಂದಲೇ ಜನಸಾಗರ ಹರಿದು ಬಂದಿತ್ತು. ನಾಯಕನಹಟ್ಟಿಯ ದೊಡ್ಡ ಕೆರೆ ಕಟ್ಟಿಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಪವಾಡಗಳ ಮೂಲಕ ಮಧ್ಯ ಕರ್ನಾಟಕದ ಜನಮನದಲ್ಲಿ ನೆಲೆ ನಿಂತಿದ್ದಾರೆ.
ತಿಪ್ಪೇರುದ್ರಸ್ವಾಮಿ ಐಕ್ಯವಾಗಿರುವ ಹೊರಮಠ ಹಾಗೂ ದೇವರ ವಿಗ್ರಹ ಹಾಗೂ ಮುಖ್ಯವಾಗಿರುವ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.


ಮಧ್ಯಾಹ್ನ 3.45 ಗಂಟೆಯ ಸರಿಯಾಗಿ ಚಿತ್ತಾ ನಕ್ಷತ್ರದಲ್ಲಿ ತಿಪ್ಪೇರುದ್ರಸ್ವಾಮಿ ರಥವನ್ನು ರಥ ಬೀದಿಯಿಂದ ಹೊರಮಠದವರೆಗೆ ಎಳೆಯಲಾಯಿತು. ಈ ವೇಳೆ ಸಾಹಸ್ತ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವದ ಸಮರ್ಪಣೆ ಅರ್ಪಿಸಿದರು.
ಮುಕ್ತಿ ಬಾವುಟ ಹರಾಜು


ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ 61 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಜಾತ್ರೆಗೆ ಹರಿದು ಬಂದ ಭಕ್ತ ಸಾಗರ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಭಕ್ತ ಸಾಗರದ ದಂಡು ಹರಿದು ಬಂದಿತ್ತು. ಅಕ್ಕಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಸೇರಿ ಬಳ್ಳಾರಿ, ರಾಯಚೂರು, ತುಮಕೂರು, ಕೊಪ್ಪಳ ಗದಗ ಸೇರಿ ಮತ್ತಿತರರ ಭಾಗಗಳಿಂದ ಭಕ್ತರು ತಿಪ್ಪೇಶನ ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೇರಿ ವಿವಿಧ ಜನಪ್ರತಿನಿಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಮೀನಾ, ಡಿವೈಎಸ್ಪಿ ರಾಜಣ್ಣ, ಅಪಾರಜಿಲ್ಲಾಧಿಕಾರಿ ಕುಮಾ ರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ತಾಪಂ ಇಒ ಲಕ್ಷ್ಮಣ್, ತಹಶೀಲ್ದಾರ್ ರೇಹಾನ್ ಪಾಷ, ಪಟ್ಟಣ ಪಂಚಾಯತ್ ಪೌರಾಯುಕ್ತ ಪಾಲಣ್ಣ ಇತರರಿದ್ದರು.
ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಹಾಗೂ ವಾಹನ ವ್ಯವಸ್ಥೆ ಕುಡಿಯುವ ನೀರು ಭದ್ರತೆವ್ಯವಸ್ಥೆ ಕಲ್ಪಿಸಲಾಗಿತ್ತು.
ರಥಕ್ಕೆ ಬಾಳೆಹಣ್ಣು ಹರಕೆ


ಇನ್ನು, ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಕ್ತರು ರಥಕ್ಕೆ ಸೂರುಬೆಲ್ಲೆ ಮೆಣಸು,ಬಾಳೆ ಹಣ್ಣು ಎಸೆಯುವ ಮೂಲಕ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಂಡರು. ಇದೇ ವೇಳೆ 2024 ಕ್ಕೆ ಲೋಕಾಸಭಾ ಚುನಾವಣೆಯಲ್ಲಿ ಬಿ.ಎನ್. ಚಂದ್ರಪ್ಪ ಗೆಲುವು ಎಂಬ ಬಾಳೆ ಹಣ್ಣು ರಥಕ್ಕೆ ಎಸೆದಿರುವುದು ಕಂಡು ಬಂದಿದೆ. ಕೊಬರು ಸುಟ್ಟು ಅರಕೆ ತೀರಿಸಿಕೊಂಡರು.
ಪಾದಯಾತ್ರೆ.


ಚಿತ್ರದುರ್ಗ, ಚಳ್ಳಕರೆ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಶ್ರೀಗುರುತಿಪ್ಪೇಸ್ವಾಮಿಯ ದರ್ಶನ ಪಡೆಯಲು ಭಕ್ತರು ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಬಂದು ಸ್ವಾಮಿಯ ದರ್ಶನ ಪಡೆದರು.

ಹಟ್ಟಿತಿಪ್ಪೇಶನ ರಥೋತ್ಸವ ಮಂಗಳವಾರ ಮಧ್ನಾನ ಮೂರು ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಲಿದೆ.


ಚಳ್ಳಕೆರೆ ಜನಧ್ವನಿ ವಾರ್ತೆ ಮಾ 25. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವು ರಾಜ್ಯಾದ್ಯಾಂತ ಮನೆ ಮಾತಾಗಿರುವ ಮಹಾಕ್ಷೇತ್ರವಾಗಿದೆ. ಚಳ್ಳಕೆರೆ ನಗರದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ. \

ನಾಯಕನಹಟ್ಟಿ ಕಂದಾಯ ಹೋಬಳಿ ಕೇಂದ್ರ ಹಾಗೂ ಪಟ್ಟಣ ಪಂಚಾಯಿಯಾಗಿದ್ದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುತ್ತದೆ. ಪ್ರತಿ ವರ್ಷ ಪಾಲ್ಗುಣ ಮಾಸ ಬಹುಳದ ಚಿತ್ರ ನಕ್ಷದಂದು ಮಾರ್ಚ್ 26 ರ ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ ನಾಯಕನಹಟ್ಟಿ, ತಳಕು, ಮನ್ನೆಕೋಟೆ, ಭಕ್ತಾಧಿಗಳಿಂದ ಭಲಿಅನ್ನ ಹಾಗೂವಿಶೇಷ ಪೂಜೆ ಹಾಗೂ ಮುಕ್ತಿಭಾವುಟ ಹರಾಜು ಪ್ರಕ್ರಿಯೆ ನಂತರ ಗುರುತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಸಾವಿರಾರು ಭಕ್ತರು ಕೈ ಹಾಕಿ ತೇರನ್ನು ಎಳೆಯುವರು.
ಕರ್ನಾಟಕ ರಾಜ್ಯದಲ್ಲಿ ನಡೆಯುವ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದಾದ ನಾಯಕನಹಟ್ಟಿ ಜಾತ್ರೆಯು ಹಿಂದೂ- ಮುಸಲ್ಮಾನರ ಭಾವೈಕ್ಯತೆಯ ದ್ಯೋತಕವಾಗಿದೆ. ಇಲ್ಲಿನ ಕೇಂದ್ರ ಶಕ್ತಿಯಾದ ಗುರು ತಿಪ್ಪೇರುದ್ರಸ್ವಾಮಿಯನ್ನು ಶ್ರೀಗುರುತಿಪ್ಪೇರುದ್ರಸ್ವಾಮಿ, ಹಟ್ಟಿತಿಪ್ಪೇಶ, ತಿಪ್ಪೇಸ್ವಾಮಿ ಎಂತಲೂ ಕರೆಯುತ್ತಾರೆ. ಹಿಂದೆ ಪಂಚಗಣಾಧೀಶರರೆಂದು ಹೆಳಲಾಗಿರುವ ಕೊಲುಶಾಂತೇಶ, ಕೆಂಪಯ್ಯ, ಚೆನ್ನಯ್ಯ, ಚನ್ನಬಸವೇಶ್ವರ, ಹಾಗೂ ತಿಪ್ಪೇಸ್ವಾಮಿಗಳು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜನ ಜಾಗೃತಿಯನ್ನು ಮೂಡಿಸಿದ್ದರು ಎನ್ನಲಾಗಿದೆ.

ಈ ಐವರಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿಯವರು ನಿಡಗಲ್ಲು- ರಾಯದುರ್ಗ, ಕಡೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಫಣಿಯಪ್ಪ ಎಂಬ ಭಕ್ತನ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರನ್ನು ತನ್ನೊಂದಿಗೆ ಕರೆತರುತ್ತಾರೆ.ಅಲ್ಲಿಯ ಹಳ್ಳಿ ಜನರು ಬಡತನದ ಬಗ್ಗೆ ಅರಿತ ಸ್ವಾಮಿಗಳು ಅಲ್ಲಲ್ಲಿ ಕೆಲವು ಕೆರೆಗಳನ್ನು ನಿರ್ಮಿಸುತ್ತಾರೆ. ಕೂಲಿಕಾರರಿಗೆ ದಿನದ ಕೂಲಿಯನ್ನು ಮಾಡಿದಷ್ಟು ನೀಡು ಭಿಕ್ಷೆ ಎಂಬ ಮಂತ್ರಶಕ್ತಿಯಿಂದ ಸೃಷ್ಠಿಸುತ್ತಿದ್ದರು ಎಂಬ ದಂತಕಥೆಯು ಇದೆ.
ಪವಾಡ ಪುರುಷರಾಗಿದ್ದರೆಂದು ನಂಬಲಾದ ಶ್ರೀಗುರುತಿಪ್ಪೇರುದ್ರಸ್ವಾಮಿಯವರು ಯಾವ ಸ್ಥಳದವರು? ಯಾವ ಜಾತಿಯವರು? ಎಂಬ ಬಗ್ಗೆ ಈಗಲೂ ಜನರಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇವರು ವೀರಶೈವರೆಂದು ಕೆಲವರು ನಂಬಿದ್ದಾರೆ. ಇವರು ಬೇಡ ಜನಾಂಗದವರು ಇದ್ದಿರಬಹುದೆಂದು ಕೆಲವರ ವಾದ. ಒಂದು ದಿನ ನಾಯಕನಹಟ್ಟಿಗೆ ಬಂದು ತಿಪ್ಪೇರುದ್ರಸ್ವಾಮಿಯವರು ಅದೇ ಗ್ರಾಮದಲ್ಲಿದ್ದ ಮಾರಮ್ಮನ ಗುಡಿಗೆ ಹೋಗಿ ಒಂದೆರಡು ದಿನ ತಂಗಲು ಸ್ಥಳಾವಕಾಶ ನೀಡಲು ಮಾರಮ್ಮದೇವಿಯ ಅಪ್ಪಣೆ ಪಡೆದರೆಂದೂ ಮಾರಮ್ಮ ಬದಲು ಹಳ್ಳಿಗಳಿಗೆ ತಿರುಗಾಡಿ ಬರಲು ಹೋದಾಗ ಗುಡಿಯ ತುಂಬಾ ತಿಪ್ಪೇಸ್ವಾಮಿಯವರ ಜೋಳಿಗೆ- ಬೆತ್ತಗಳು ಕಾಣಿಸಿಕೊಂಡು, ಇದನ್ನು ಕಂಡ ಮಾರಮ್ಮ ಗುಡಿಯನ್ನು ತಿಪ್ಪೇಸ್ವಾಮಿಯವರಿಗೆ ಬಿಟ್ಟು ಕೊಟ್ಟು ವಡ್ನಹಟ್ಟಿಗೆ ಹೋಗಿ ನೆಲೆಸಿದಳೆಂದು ಇಲ್ಲಿನ ಜನರ ಕಥೆ ಹೇಳುವುದಿದೆ. ಈಗ ಅದೇ ಗುಡಿಯ ಶ್ರೀಗುರು ತಿಪ್ಪೇಸ್ವಾಮಿಯ ಒಳಮಠ ಇಲ್ಲಿ ತಿಪ್ಪೇಸ್ವಾಮಿಯವರನ್ನು ಲಿಂಗರೂಪದಲ್ಲಿ ಪ್ರತಿಷ್ಟಾಪಿಸಿ ಆರಾಧಿಸಲಾಗುತ್ತಿದೆ.
ಹೊರ ಮಠ ಹಾಗೂ ಒಳ ಮಠ
ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಸಂಭಂಧಿಸಿದ ಎರಡು ಆರಾಧನಾ ಸ್ಥಳಗಳಾಗಿದ್ದು ಅವುಗಳನ್ನು ಹೊರ ಮಠ ಹಾಗೂ ಒಳ ಮಠ ಎಂದು ಕರೆಯಲಾಗಿದೆ. ಶ್ರೀ ಗುರುತಿಪ್ಪೇರುದ್ರಸ್ವಾಮಿ ಜೀವಿತಾವಧಿಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು. ಅದನ್ನು ಒಳಮಠವೆಂದು ಕರೆಯುತ್ತಾರೆ. ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊಗಡೆ ಚಿಕ್ಕಕೆರೆ ಹತ್ತಿರ ಇದ್ದು ಇದಕ್ಕೆ ಹೊರಮಠ ಎನ್ನುವರು. ಒಳ ಮಠದ ಗೋಪುರವು ಸುಮಾರು 50 ಅಡಿ ಎತ್ತರವಿದ್ದು ಅತ್ಯಾಕರ್ಷಕವಾಗಿದೆ. ಒಳಮಠದ ಮುಂದೆ ಜಾತ್ರೆ ಸಂದರ್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಗೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ.
ಕೊಬ್ಬರಿ ಸುಡುವ ಪದ್ದತಿ
ಈ ಆಚರಣೆಯನ್ನು ಹಿಂದೆ ವಿಶಿಷ್ಟ ಕತೆಯೇ ಇದೆ. ತಿಪ್ಪೇಸ್ವಾಮಿಯವರು ಮೊದಲಿಗೆ ರಾಯದುರ್ಗದಿಂದ ನಾಯಕನಹಟ್ಟಿಗೆ ಬರುವಾಗ ರಾತ್ರಿ ಕತ್ತಲೆ ಆವರಿಸಿದ್ದು ಫಣಿಯಪ್ಪನನ್ನು ಒಣಗೊಬ್ಬರಿಗಳನ್ನು ಕೋಲುಗಳಿಗೆ ಸಿಕ್ಕಿಸಿ ಬೆಂಗಿಯಿAದ ಒತ್ತಿಸಿ ಆ ಬೆಳಕಿನಲ್ಲಿ ತಿಪ್ಪೇಸ್ವಾಮಿಯವರನ್ನು ಹಟ್ಟಿಗೆ ಕರೆತಂದರAತೆ. ಆ ಕಾರಣಕ್ಕೆ ಇಂದಿಗೂ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣ ಕೊಬ್ಬರಿ ಸುಡುವ ಸಂಪ್ರದಾಯ ರೂಡಿಯಲ್ಲಿದೆ. ಅದೇ ರೀತಿ ದುಂಡು ಮೆಣಸು, ಎರಚಲು ಸಂಪ್ರದಾಯ ಇಲ್ಲಿ ಇರುತ್ತದೆ. ಹೊರಮಠವನ್ನು ಶ್ರೀ ತಿಪ್ಪೇರುದ್ರಸ್ವಾಮಿ ಗದ್ದುಗೆ ಎಂದು ಒಳಮಠವನ್ನು ಶ್ರೀ ತಿಪ್ಪೇಸ್ವಾಮಿ ಮಠವೆಂದು ಕರೆಯುತ್ತಾರೆ. ಒಳ ಮಠಕ್ಕೆ ಶೈವರು ಪೂಜಾಧಿಕಾರವನ್ನು ಹೊಂದಿದ್ದರೆ. ಒಳ ಮಠದಲ್ಲಿ ಪ್ರತಿ ಸೋಮವಾರ ಪೂಜಾ ನಡೆಯುವುದಕ್ಕೆ ಹೊರಮಠಕ್ಕೆ ಜೀವಕಳೆ ಬರಬೇಕು ವಾಡಿಕೆಯಿಂದ ನಾಯಕನಹಟ್ಟಿ ಜಾತ್ರೆಗೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದಷ್ಟೆ ಅಲ್ಲದೆ ಆಂದ್ರ, ತಮಿಳುನಾಡು, ರಾಜ್ಯಗಳಿಂದಳೂ ಭಕ್ತರು ಸಾಗರೋಪಾದಿಯಲ್ಲಿ ಸೇರುತ್ತಾರೆ.
ಪ್ರಾಣಿ ಭಲಿ ನಿಶೇಷದ;
ಜಾತ್ರೆಯ ಸುತ್ತ ಮುತ್ತ ಹಾಗೂ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಭಲಿ ಮಾಡುವುದಾಗಲಿ ಮಧ್ಯಪಾನ ಮಾಡುವುದಾಗಲಿ ನಿಶೇಷದ ಮಾಡಲಾಗಿದೆ ಎಲ್ಲಾ ಮಾರ್ಗಗಲ್ಲೂ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ತಹಸೀಲ್ದಾರ್ ರೇಹಾನ್ ಪಾಷ,ಡಿವೈಎಸ್ಪಿ ರಾಜಣ್ಣ . ತಿಳಿಸಿದ್ದಾರೆ
ಸಿ.ಸಿ. ಕ್ಯಾಮರ ಕಣ್ಣುಗಾವಲು.
ಭದ್ರತೆ ದೃಷ್ಠಿಯಿಂದ ಸಮಗ್ರ ಜಾತ್ರೆ ವ್ಯವಸ್ಥೆಯನ್ನು ಸಿ.ಸಿ.ಕ್ಯಾಮರಗಳ ಕಣ್ಗಾವಲಿಗೆ ವಹಿಸಲಾಗಿದೆ. ಸುಮಾರು 60 ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಗಳನ್ನು ಅಳವಡಿಸಲಾಗಿದೆ. ಭದ್ರತೆಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ನಿರ್ವಹಿಸಲಿದೆ. ಜಾತ್ರಾ ಸಂದರ್ಭದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸವೋಚ್ಛ ನ್ಯಾಯಾಲಯದ ಆದೇಶದಂತೆ ದೇವಸ್ಥಾನ ಪ್ರಾಂಗಣ, ದೇವಸ್ಥಾನ ಸಂಬಂಧಿಸಿ ಸ್ಥಳದಲ್ಲಿ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಾತ್ರಾ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ ಇರುತ್ತದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ದೇವಸ್ಥಾನ ಇ ಒ ಹೆಚ್.ಗಂಗಾಧರಪ್ಪ ಹೇಳಿದ್ದಾರೆ.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥಕ್ಕೆ ಕಳಸಾರೋಹಣ ರಥಕ್ಕೆ ಬಣ್ಣದ ಬಾವುಟಗಳ ಅಳವಡಿಕೆ ವಿವಿಧ ಸಮುದಾಯಗಳಿಗೆ ಆಹ್ವಾನ.


ನಾಯಕನಹಟ್ಟಿ::ಮಾ.22. ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ. ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.
ಜಾತ್ರೆಗೆ ಇನ್ನೂ ಐದು ದಿನಗಳು ಬಾಕಿ ಇರುವ ಕಾರಣ ರಥಕ್ಕೆ ಕಳಸ ಬರಲು ಪ್ರತಿಷ್ಠಾಪಿಸಲಾಗುತ್ತದೆ.
ಗ್ರಾಮದ ಬಾಬುದಾರರು ಕಳಸವನ್ನು ಪಟ್ಟಣದ ಒಳಮಠದಿಂದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಅನುಸರಿಸಿ ಪೂಜೆ ಮಾಡಿಕೊಂಡು ಮೆರವಣಿಗೆಯ ಮೂಲಕ ದೊಡ್ಡ ರಥದ ಬಳಿ ತಂದರು.
ನಂತರ ಕಂಬಳಿಯ ಗದ್ದಿಗೆ ಮೇಲಿಟ್ಟು ಶಾಸ್ತ್ಯುಕ್ತವಾಗಿ ಪೂಜೆ ಮಾಡಿ ಸುಮಾರು 32. ಕೆ. ಜಿ .ತೂಕದ ನೂತನ ಕಳಸವನ್ನು ಹಗ್ಗದ ಸಹಾಯದಿಂದ ರಥದ ಮೇಲಕ್ಕೆ ಎಳೆದು ಪ್ರತಿಷ್ಠಾಪಿಸಲಾಯಿತು.

ಇದೇ ವೇಳೆ ನೂರಾರು ಭಕ್ತರು ಮಹಿಳೆಯರು ತಿಪ್ಪೇರುದ್ರಸ್ವಾಮಿಗೆ ಜಯ ಘೋಷಣೆಗಳನ್ನು ಕೂಗಿದರು.
ಈ ಮೂಲಕ ವಿಧ್ಯುಕ್ತವಾಗಿ ಜಾತ್ರೆಗೆ ಚಾಲನೆ ನೀಡಲಾಯಿತು. ಕಳಸ ಪ್ರತಿಷ್ಠಾಪನೆ ನಂತರ ರಥಕ್ಕೆ ವಿವಿಧ ಬಣ್ಣಗಳ ಬಾವುಟಗಳನ್ನು ಜೋಡಿಸುವ ಕಾರ್ಯ ಮಾಡಲಾಗುತ್ತದೆ. ಹಾಗೂ ಈ ಆಚರಣೆಯ ಮೂಲಕ ಗ್ರಾಮದ ಪ್ರತಿಯೊಂದು ಸಮುದಾಯದ ಬಾಬುದಾರರು ದೈವಸ್ಥರು ಗ್ರಾಮಸ್ಥರಿಗೆ ಅಧಿಕೃತವಾದ ಆಹ್ವಾನ ನೀಡಲಾಗುತ್ತದೆ.


ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್ ಗಂಗಾಧರಪ್ಪ, ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್, ಡಿವೈಎಸ್ ಪಿ ರಾಜಣ್ಣ, ಪಿಎಸ್ಐ ಕೆ ಶಿವಕುಮಾರ್,
ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಮಿಟಿಯ ಮಾಜಿ ಅಧ್ಯಕ್ಷ ಜೆ ಪಿ ರವಿಶಂಕರ್, ವ್ಯವಸ್ಥಾಪನ ಸಮಿತಿಯ ಸದಸ್ಯ ಕೆ ಎನ್ ತಿಪ್ಪೇರುದ್ರಪ್ಪ, ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್, ಕೇಶವಮೂರ್ತಿ, ದಳವಾಯಿ ತಿಪ್ಪೇಸ್ವಾಮಿ, ಟಿ ತಿಪ್ಪೇಸ್ವಾಮಿ (ಧಣಿ), ಟಿ.ಓಬಳೇಶ್, ದಳವಾಯಿ ರುದ್ರಮನಿ, ದೊರೆ ತಿಪ್ಪೇಸ್ವಾಮಿ, ಎನ್ ಮಹಾಂತಣ್ಣ, ಉಮೇಶ್, ಸೇರಿದಂತೆ ಸಮಸ್ತ ಪಟ್ಟಣದ ಗ್ರಾಮಸ್ಥರು ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಇದ್ದರು

ತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ರೂಗಳ ವಿಮೆಯನ್ನು ಜಿಲ್ಲಾಡಳಿತ ಒದಗಿಸಿದೆ. .


ನಾಯಕನಹಟ್ಟಿ ಮಾ21
ಮಧ್ಯಕರ್ನಾಟಕದಲ್ಲಿ ಪ್ರಖ್ಯಾತವಾಗಿರುವ ತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ರೂಗಳ ವಿಮೆಯನ್ನು ಜಿಲ್ಲಾಡಳಿತ ಒದಗಿಸಿದೆ. ಗುರುವಾರ ಇದಕ್ಕೆ ಸಂಬಂಸಿದಂತೆ ವಿಮೆ ಪಾಲಿಸಿ ಪ್ರತಿಯನ್ನು ಕಂಪನಿಯ ಪ್ರತಿನಿಧಿಗಳು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳಿಗೆ ನೀಡಿದರು.
ದಾವಣಗೆರೆ ವೃತ್ತದ ದಿ ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿಯ ವಿಭಾಗೀಯ ಮ್ಯಾನೇಜರ್ ದೇವದಾಸ್ ಮಾತನಾಡಿ, ಜಾತ್ರೆಯ ದಿನ ಹಾಗೂ ವರ್ಷದ ಯಾವುದೇ ದಿನ ರಥಕ್ಕೆ ಉಂಟಾಗಬಹುದಾದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ವಿಮೆ ನೀಡಲಾಗಿದೆ. ಒಂದು ವರ್ಷದ ಅವಧಿಗೆ ರಥಕ್ಕೆ 2.5 ಕೋಟಿ ರೂಗಳ ವಿಮೆ ಒದಗಿಸಲಾಗಿದೆ.


ರಥೋತ್ಸವದಲ್ಲಿ ಅವಘಢ ಸಂಭವಿಸಿದಲ್ಲಿ 89 ಭಕ್ತರಿಗೆ ತಲಾ 2 ಲಕ್ಷ ರೂಗಳ ವಿಮೆ ಯನ್ನು 30ದಿನದವೆಗೆ ನೀಡಲಾಗಿದೆ. ರಥದ ಸುತ್ತಲೂ ರಥವನ್ನು ಚಲಾಯಿಸುವ ಹಾಗೂ ಸಾಂಪ್ರದಾಯಿಕ ಸೇವಾಕರ್ತರು ಭಾಗವಹಿಸುತ್ತಾರೆ. ಇಂಥಹ ಸೇವಾಭಕ್ತರಾಗಿರುವ 89 ನಾಮನಿರ್ದೇಶಿದ ಜನರಿಗೆ ತಲಾ 2ಲಕ್ಷ ರೂಗಳ ವಿಮೆ ಒದಗಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರಿಗಾಗಿ 25ಲಕ್ಷ ರೂಗಳ ವಿಮೆ ಒದಗಿಸಲಾಗಿದೆ. ರಥವು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಮುಂಜಾಗ್ರತ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ.
ಒಟ್ಟಾರೆ ಮೂರು ಪಾಲಿಸಿಗಳಿಂದ ಒಟ್ಟಾರೆ 51;232, ಗಳ ಚೆಕ್ ನ್ನು ದೇವಾಲಯದ ಇಒ ಹೆಚ್. ಗಂಗಾಧರಪ್ಪ ವಿಮಾ ಕಂಪನಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಉಸ್ತುವಾರಿ ಹೊಂದಿರುವ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಕೀಲ ಬಿ.ಎಂ.ಅರುಣ್ ಕುಮಾರ್ ಇದ್ದರು.

ಅದ್ದೂರಿಯಾಗಿ ನಡೆದ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ.


ಚಳ್ಳಕೆರೆ-17 ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರೆ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀಪಾತಲಿಂಗೇಶ್ವರ ಜಾತ್ರೆಗೆ ಕರ್ನಾಟಕವೂ ಸೇರಿದಂತೆ ಅಂಧ್ರಪ್ರದೇಶದಿಂದಲ್ಲೂ ನೂರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಗೊರವಿನಕೆರೆ ವಂಶದ ಪ್ರತಿಯೊಬ್ಬರು ಮನೆಗೆ ಇಂತಿಷ್ಟರಂತೆ ಅಕ್ಕಿ, ಬೆಲ್ಲ, ಬೇಳೆಯನ್ನು ಒಂದೆಡೆ ಸೇರಿಸಿ ಪ್ರಸಾದ ಮಾಡಿ ನೆರೆದಿದ್ದ ನೂರಾರು ಭಕ್ತರಿಗೆ ಉಣಬಡಿಸುವ ಪದ್ದತಿ ಇಂದಿಗೂ ನಡೆದು ಬಂದಿದೆ.


ಚೋಳರ ಕಾಲದಿಂದಲ್ಲೂ ಈ ದೇವರನ್ನು‌ ಪೂಜಿಸುವ ಮಡಿವಾಳ ಸಮಾಜದ ಗೊರವಿನಕೆರೆ ವಂಶಸ್ಥರು ಎರಡು ದಿನಗಳಕಾಲ ಶ್ರದ್ದಾ ಭಕ್ತಿಯಿಂದ ಪೂಜಿಸಿ ತಮ್ಮ‌ ಇಷ್ಟಾರ್ಥ ಈಡೇರಿಸುವಂತೆ ಬೇಡುತ್ತಾರೆ. ಗ್ರಾಮದಿಂದ ಸುಮಾರು ಎರಡ್ಮೂರು ಕಿ.ಮೀ ದೂರದ ಅಡವಿಯಲ್ಲಿ‌ ನೆಲೆಸಿರುವ ಶ್ರೀಸ್ವಾಮಿಯ ದರ್ಶನಕ್ಕೆ‌ ಉರಿಬಿಸಿಲನ್ನು‌ ಲೆಕ್ಕಿಸದೆ ಕಾಲ್ನಡಿಗೆ ಮೂಲಕವೂ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಪಾತಲಿಂಗೇಶ್ವರ ಸ್ವಾಮಿ ಜಾತ್ರೆಯ ಪ್ರಾರಂಭದಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಿಂದ ದೇಸ್ಥಾನದವರೆಗೂ ವಿವಿಧ ಕಲಾತಂಡಗಳೊಂದಿಗೆ ಸ್ವಾಮಿಯನ್ನು‌ ಮೆರವಣಿಗೆ ನಡೆಸಲಾಯಿತು. ಭಾನುವಾರ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು. ಗೊರವಿಕೆರೆ ವಂಶಸ್ಥರು ಮತ್ತು ನೂರಾರು ಭಕ್ತರು ಸ್ವಾಮಿಗೆ ನಮಿಸಿ ಇಷ್ಟಾರ್ಥ ಈಡೇರಿಸುವಂತೆ ನಮಿಸಿದರು.
ಪರಶುರಾಮಪುರ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‍ಶಂಕರ್, ದೇವಸ್ಥಾನ ಸಮಿತಿ‌ ಅಧ್ಯಕ್ಷ ಆರ್. ಮಲ್ಲಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಖಜಾಂಚಿ ವೇದಮೂರ್ತಿ, ಕಾರ್ಯದರ್ಶಿ ಕರೀಕೆರೆ ನಾಗರಾಜು, ಚಂದ್ರಣ್ಣ, ಪಾತಲಿಂಗಪ್ಪ, ಎನ್‌.ಪ್ರಕಾಶ್, ನಿಂಗಣ್ಣ, ವಿಶ್ವನಾಥ, ನರೇಂದ್ರಕುಮಾರ್, ಮಂಜುನಾಥ, ಪೂಜಾರ್ ಶ್ರೀನಿವಾಸ್, ಹನುಂಮತಪ್ಪ ಮತ್ತು ಗೊರವಿನಕೆರೆ ವಂಶಸ್ಥರು ಪಾಲ್ಗೊಂಡಿದ್ದರು.

ಬೆಳಗ್ಗೆಯಿಂದಲೇ ಸರದಿಸಾಲಿನಲ್ಲಿ ನಿಂತು ಚಳ್ಳಕೆರಮ್ಮದೇವಿ ದರ್ಶನ ಪಡೆದ ಭಕ್ತರು.


ಚಳ್ಳಕೆರೆ ಮಾ.12., ನಗರದ ನಗರದೇವತೆ ದರ್ಶನ ಪಡೆಯಲು ಬೆಳ್ಳಂ ಬೆಳಗ್ಗೆ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ರಾಷ್ಟೀಯಾ ಹೆದ್ದಾರಿಗೊಂದಿಕೊಂಡ ನಗರ ದೇವತೆ ಶ್ರೀಚಳ್ಳಕೆರೆಮ್ಮ ದೇವಿ ಜಾತ್ರಾಮಹೋತ್ಸವ ಅಂಗವಾಗಿ ಮಹಿಳೆಯರು ನಿಂಬೆಹಣ್ಣಿ ದೀಪ ಬೆಳಗುವ ಮೂಲಕ ದೇವಿಯ ದರ್ಶನ ಪಡೆಯಲು ಭಕ್ತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿರುವ ದೃಶ್ಯ ಕಂಡು ಬಂತು.


ಪ್ರಾಣಿ ಬಲಿ ನಿಷೇಧ. ‌‌‌‌‌‌‌‌‌ ಪಿ.ಎಸ್.ಐ ಸತೀಶ್ ನಾಯ್ಕ ದೇವಸ್ಥಾನ ಬಳಿ ಭೇಟಿ ನೀಡಿ ದೇವರ ಹೆಸರಿನಲ್ಲಿ ಕುರಿ.ಕೋಣ.ಕೋಳಿ ಬಲಿ ಕೊಡಬಾರದು ಪ್ರಾಣಿ ಬಲಿ ನಿಶೇಷ ಕಾಯ್ದೆಜಾರಿಯಲ್ಲಿದೆ ಎಂದು ಪ್ರಾಣಿ ನಲಿ ನಿಶೇಧಿಸಲಾಗಿದೆ ಎಂಬ ಪ್ಲೆಕ್ಸ್ ಕಟ್ಟುವ ಮೂಲಕ ಜಾಗೃತಿ ಮೂಡಿಸಿದರು.

ಕರ್ನಾಟಕ-ಆಂಧ್ರಪ್ರದೇಶ ಗಡಿ ಗ್ರಾಮದ ದಕ್ಷಿಣಕಾಶಿ ಎಂದೇ ಹೆಸರಾಗಿರುವ ಹೆಂಜೇರುಸಿದ್ಧೇಶ್ವರ ಜಾತ್ರೋತ್ಸವದ ವೈಭವ


ಹೇಮಾವತಿ ಮಾ.11
ಕರ್ನಾಟಕ- ಆಂಧ್ರಪ್ರದೇಶದ ಗಡಿ ಗ್ರಾಮ ದಕ್ಷಿಣ ಕಾಶಿ ಎಂದು ಪ್ರಖ್ಯಾತವಾಗಿರುವ ಹೇಮಾವತಿ ಹೆಂಜೇರು ಸಿದ್ಧೇಶ್ವರ ಜಾತ್ರೋತ್ಸವ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಪೂರ್ವಕವಾಗಿ ಹಾಗೂ ವೈಭವಯುತವಾಗಿ ವಿಜೃಂಭಣೆಯಿಂದ ನಡೆಯಿತು.
ವಿಶೇಷವಾಗಿ ಒಂದು ವಾರಗಳ ಕಾಲ ಜರುಗುವ ಹೆಂಜೇರು ಸಿದ್ಧೇಶ್ವರ ಜಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ- ಆಂಧ್ರಪ್ರದೇಶ ರಾಜ್ಯಗಳ ಜನರಲ್ಲದೇ ವಿವಿಧೆಡೆಯಿಂದಲೂ ಭಕ್ತರು ಆಗಮಿಸಿದ್ದರು.
ಸಾವಿರಾರು ಭಕ್ತರು ಹೆಂಜೇರು ಸಿದ್ಧೇಶ್ವರ ಜಾತ್ರೋತ್ಸವದಲ್ಲಿಹರ ಹರ ಮಹದೇವ ಎಂಬ ಜಯ ಘೋಷದೊಂದಿಗೆ ದೇಗುಲ ಮುಂಭಾಗದಲ್ಲಿರುವ ಅಗ್ನಿಕುಂಡಕ್ಕೆ ಶೇಂಗಾ, ಔಡಲ,ಕೊಬ್ಬರಿ, ಬೆಳ್ಳಿ-ತಾಮ್ರದ ಹಾವು-ಚೇಳು, ಧೂಪವನ್ನು ಅರ್ಪಿಸುತ್ತಾ ಇಷ್ಟಾರ್ಥ ಸಿದ್ಧಿ, ಮಳೆ-ಬೆಳೆ, ಶಾಂತಿ, ನೆಮ್ಮದಿ, ಸಮೃದ್ಧಿಹಾಗೂ ಸಕಲ ಜೀವಿಗಳಿಗೂ ಆರೋಗ್ಯ -ಭಾಗ್ಯ ಕರುಣಿಸುವಂತೆ ಹೆಂಜೇರು ಸಿದ್ಧೇಶ್ವರನಲ್ಲಿ ಪ್ರಾರ್ಥಿಸಿದರು.
ಸುಡು ಬಿಸಿಲಿನಲ್ಲಿ ಹತ್ತಾರು ಕಿಲೋಮೀಟರ್ ದೂರದಿಂದ ಕಾಲ್ನಡಿಗೆಯಲ್ಲೇ ಆಗಮಿಸಿದ್ದ ಭಕ್ತರು, ತಮ್ಮ ಕೋರಿಕೆಗಳ ಈಡೇರಿಕೆಗಾಗಿ ಅಗ್ನಿಕುಂಡಕ್ಕೆ ಧೂಪ ಹಾಕುವುದರ ಮೂಲಕ ಭಕ್ತಿ ಸಮರ್ಪಿಸಿದ್ದಲ್ಲದೇ ಸಿದ್ದೇಶ್ವರನ ಕೃಪಾಶಿರ್ವಾದಕ್ಕೆ ಒಳಗಾದರು.
ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಗಡಿ ಪ್ರದೇಶದ ಕನ್ನಡ- ತೆಲುಗು ಭಾಷಿಕರಲ್ಲಿ ಏಳು ದಿನಗಳ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನದ ಸೇವಾ ಸಮಿತಿಯಿಂದ ಭಕ್ತರಿಗೆ ಮಜ್ಜಿಗೆ, ಪಾನಕ, ಪ್ರಸಾದ ವ್ಯವಸ್ಥೆ ಹಾಗೂ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿತ್ತು.ಇದರಿಂದ ಭಕ್ತರು ಸಂತೃಪ್ತರಾಗಿ ಉತ್ಸಹಾದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೋತ್ಸವದ ಯಶಸ್ಸಿಗೆ ಕಾರಣರಾದರು.

ಆರಾದ್ಯ ದೈವ ಗುರುತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಸೋಮವಾರ ಗುಗ್ಗರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಬುಡಕಟ್ಟು ಸಂಸ್ಕೃತಿ ಆಚರಣೆಯ ಅನಾವರಣ ಕಾರ್ಯ ನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ.


ಚಳ್ಳಕೆರೆ ಜನಧ್ವನಿ ವಾರ್ತೆ ಮಾ.11
ಬುಡಕಟ್ಟು ಜನರ ಆರಾದ್ಯ ದೈವ ಗುರುತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಸೋಮವಾರ ಗುಗ್ಗರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಬುಡಕಟ್ಟು ಸಂಸ್ಕೃತಿ ಆಚರಣೆಯ ಅನಾವರಣ ಮಾಡಲಾಯಿತು.
ತಿಪ್ಪೇರುದ್ರಸ್ವಾಮಿ ದೇವರು ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ನಾಯಕನಾಗಿ ನೂರಾರು ಗ್ರಾಮಗಳಿಗೆ ಬುಡಕಟ್ಟು ದೈವವಾಗಿ ಪ್ರಸಿದ್ದಿಯನ್ನು ಪಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಹೊರಮಠ ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಜನಪದ ಹಾಗೂ ಬುಡಕಟ್ಟು ಸಂಸ್ಕೃತಿಯ ನೆಲೆಯಲ್ಲಿ ಕಂಡು ಬರುತ್ತವೆ. ಅಂಥಹ ಆಚರಣೆಗಳಲ್ಲಿ ಪ್ರಮುಖವಾದದ್ದು ಗುಗ್ಗರಿ ಹಬ್ಬ.


ಗುಗ್ಗರಿ ಹಬ್ಬದ ವಿಶೇಷ

ವಾರ್ಷಿಕ ಜಾತ್ರೆ ಆಚರಣೆಗೆ ಸಾಕ್ಷಿಯಾಗಿ ಕಂಕಣ ಪೂಜೆಯ ಮೊದಲು ಬರುವ ಶುಭ ಸೋಮವಾರದಂದು ಗುಗ್ಗರಿ ಹಬ್ಬವನ್ನು ಆಚರಿಸುವ ಪದ್ಧತಿ ಇದೆ. ಪಟ್ಟಣದ ಹೊರಮಠ ಮತ್ತು ಒಳಮಠದ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಕೈಗೊಳ್ಳಲಾಗುವುದು. ರೈತರು ಬೆಳೆದ ಹೊಸ ಧಾನ್ಯವನ್ನು ಮೊದಲು ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಜತೆಗೆ ದೇವಾಲಯದಲ್ಲಿ ಸಮೀಪದ ಹಳ್ಳಿಗಳ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರೆತ್ತುಗಳ ಸಗಣಿ ಕುರುಳಿನಿಂದ ಹುರುಳಿ ಧಾನ್ಯವನ್ನು ಬೇಯಿಸಲಾಗುವುದು. ಹಾಗೂ ಸುಟ್ಟ ಕುರುಳಿನ ಭಷ್ಮವನ್ನು ಹೊರಮಠದಲ್ಲಿ ವಿಭೂತಿಯಾಗಿ ವರ್ಷಪೂರ್ತಿ ಬಳಸುತ್ತಾರೆ. ಮತ್ತು ಬೇಯುಸಿದ ಹುರುಳಿ ಗುಗ್ಗರಿಯನ್ನು ಸಂಜೆ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾಧವಾಗಿ ಹಂಚಲಾಗುವುದು. ಆ ಮೂಲಕ ಸುಗ್ಗಿಯ ಹಬ್ಬವಾಗಿ ಬಿಂಬಿತವಾಗುವ ಗುಗ್ಗರಿ ಹಬ್ಬವು ಬುಡಕಟ್ಟು ಜನರ ಆಹಾರ ಪದ್ಧತಿಯಲ್ಲಿ ಸಮಾನತೆಯನ್ನು ತರುವುದಾಗಿದೆ ಎಂದು ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯ ಟಿ.ರುದ್ರಮುನಿ ಹೇಳಿದರು.
ಸರದಿಯಲ್ಲಿ ನಿಂತು ಗುಗ್ಗರಿ ಸ್ವೀಕರಿದ ಭಕ್ತರು
ಪ್ರತಿ ಸೋಮವಾರ ಗುರು ತಿಪ್ಪೇರುದ್ರಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಪೂಜಾ ಕೈಂಕರ್ಯ ಸೇವೆಗಾಗಿ ಹೊರಮಠಕ್ಕೆ ಕರೆತರಲಾಗುವುದು. ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಂಗಳಾರತಿ ನಂತರ ನೆರೆದ ಭಕ್ತರಿಗೆ ಗುಗ್ಗರಿಯನ್ನು ಪ್ರಸಾಧವಾಗಿ ನೀಡುವ ಪರಿಪಾಠವಿದೆ. ಹಾಗೇ ಇಂದು ದೇವಾಲಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಗುಗ್ಗರಿ ಪ್ರಸಾಧ ಪಡೆದು ಬೆಲ್ಲದ ಜತೆಗೆ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅರ್ಚಕ ವಂಶದ ತಿಪ್ಪೇರುದ್ರಣ್ಣ,,ಕಾಂತಣ್ಣ, ಲೋಕೋಪಯೋಗಿ ಎಇಇ ವಿಜಯಭಾಷ್ಕರ್, ಜೆಇ ಅಕೀಮ್, ಸತೀಶ್, ಪೂಜಾರಿ ರುದ್ರಣ್ಣ,ಮಹಾಂತೇಶ, ಗುರುಸ್ವಾಮಿ, ನಾಗೇಂದ್ರಪ್ಪ, ನಾಗಣ್ಣ, ಇತರರಿದ್ದರು.

ಸೋಮವಾರ ಗಂಗಾದೇವತೆಯೊಂದಿಗೆ ಚಳ್ಳಕೆರೆಮ್ಮ ಜಾತ್ರೆಗೆ ಜಾಲನೆ, ಗುರುವಾರ ಸಿಡಿ ಉತ್ಸವ

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10
ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮನ ದೇವಿಯನ್ನು ತವರು ಮನೆ ದೊಡ್ಡೇರಿ ಗ್ರಾಮಕ್ಕೆ ಗಂಗಾ ಪೂಜೆ ಮಾಡುವುದರೊಂದಿಗೆ ಜಾತ್ರೆಗೆ ಸೋಮವಾರ ಚಾಲನೆ ದೊರೆಯಲಿದೆ.
ಚಳ್ಳಕೇರಮ್ಮ ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ತಳವಾರರು, ಪೋತರಾಜರರು ಗ್ರಾಮದ ಪುರೋಹಿತರು, ಶಾನಭೋಗರ ಸಮ್ಮುಖದಲ್ಲಿ ಶ್ರೀದೇವಿಯ ಮೆರವಣಿಗೆಯೊಂದಿಗೆ ತವರು ಮನೆ ದೊಡ್ಡೇರಿಗೆ ತೆರಳಿ ಅಲ್ಲಿ ಗಂಗಾ ಪೂಜೆ ನೆರವೇರಿಸಿ ಪುನಃ ಸಂಜೆ ದೇವಸ್ಥಾನಕ್ಕೆ ಮರಳಿ ಬಂದು ಗುಡಿತುಂಬುವ ಮೂಲಕ ಜಾತ್ರಾಗೆ ಚಾಲನೆ ದೊರಲಿದೆ.
ಚಳ್ಳಕೆರೆ ನಗರದಿಂದ ಹೊರಟ ಶ್ರೀಚಳ್ಳಕೆರೆಯಮ್ಮ ದೇವಿಯ ಮೆರವಣಿಗೆಯಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದು, ವಿಶೇಷವಾಗಿ ಪೋತರಾಜರು, ಪುರಂತಪ್ಪ ಹಾಗೂ ದೇವಸ್ಥಾನದ ಆಯಗಾರರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.
ಶ್ರೀದೇವಿಯ ಮೆರವಣಿಗೆ ಇಲ್ಲಿನ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಸುಮಾರು 10 ಕಿ.ಮೀ ದೂರದ ದೊಡ್ಡೇರಿ ಗ್ರಾಮದ ಗರಣಿ ಹಳ್ಳಕ್ಕೆ ಹೋಗಿ ಗಂಗಾದೇವತೆ ಮಾಡಿಕೊಂಡು ವಿಶೇಷ ಅಲಂಕಾರದೊಂಗೆ ನಗರಕ್ಕೆ ಮರಳಿ ಗುಡಿ ತುಂಬಲಿದೆ ಜಾತ್ರೆ ಪ್ರಯುಕ್ತ ನಗರದ ಪ್ರಮುಖ ರಸ್ತೆ ನೆಹರು ವೃತ್ತ , ಬಳ್ಳಾರಿ ರಸ್ತೆ ಸೇರಿದಂತೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಜಾತ್ರೆಗೆ ಕಳೆ ಕಟ್ಟಿದೆ.

ಮಂಗಳವಾರ ಕೋಣ ಉತ್ಸವ ಬುಧವಾರ ಹಿಟ್ಟಿನ ಆರತಿ, ಬೇವಿನ ಸೀರೆ ಉತ್ಸವ, ಗುರುವಾರ ಮಧ್ಯಾಹ್ನ 3.30ಕ್ಕೆ ದೇವಿಯ ಸಿಡಿ ಉತ್ಸವ ಜರುಗಲಿದೆ.
ಸಿಡಿ ಉತ್ಸವದಲ್ಲಿ ಜಿಲ್ಲೆಯ ಹಾಗೂ ನೆರೆಯ ರಾಜ್ಯದಿಂದ ಜನಸಾಗರ ಹರಿದು ಬರಲಿದೆ.

ಇತಿಹಾಸ
ಚಳ್ಳಕೇರಮ್ಮ ದೇವಿಯನ್ನು ಚಿತ್ರದುರ್ಗದ ಕಡೆಯಿಂದ ಬಂಡಿಯ ಮೇಲೆ ತರಲಾಯಿತು ಎಂಬ ಹಿನ್ನೆಲೆಯಿಂದ್ದು ಹಿಂದೆ ಅಲೆಮಾರಿಗಳಾಗಿದ್ದು ಜನ ತಮ್ಮೊಂದಿಗೆ ತಮ್ಮ ದೇವರನ್ನು ಹೊತ್ತೊಯ್ಯುತ್ತಿದ್ದು ಪೆಟ್ಟಿಗೆ ದೇವರು ಎಂದು ಕರೆಯುತ್ತಿದ್ದರು.ಚಳ್ಳಕೇರಮ್ಮ ಮೂಲರ್ತ ಪೆಟ್ಟಿಗೆಯ ದೆವರೇ ಆಗಿದ್ದು ತಾಲೂಕಿನ ದೊಡ್ಡೇರಿ ಗ್ರಾಮದಿಂದ ವಲಸೆ ಬಂದ ಈಕೆಯನ್ನು ತಂದು ಚಳ್ಳಕೆರೆಗೆ ಪ್ರತಿಷ್ಠಾಪಸಿದಂತೆ ತೋರುತ್ತದೆ. ಚಳ್ಳಕೆರೆ ನೆಲಸಿದ ಕಾರಣ ಈಕೆಗೆ ಸ್ಥಳೀಯ ಜನತೆ ಚಳ್ಳಕೇರಮ್ಮ ಎಂದು ಕರೆಯುತ್ತಾರೆ. ಚಳ್ಳಕೆರೆಯ ಹುಟ್ಟಿನ ನಂತರ ದೇವಿ ಇಲ್ಲಿಗೆ ಬಂದವಳಾದುದ್ದರಿAದ ಚಳ್ಳಕೆರೆಯಮ್ಮ ಎಂಭ ಹೆಸರು ಪಡೆದಿದ್ದಾಳೆ ಎಂಬ ಐತಿಹ್ಯವಿದೆ. ಈ ದೇವಿಯ ಜಾತ್ರೆ ಪದ್ದತಿ ಐದು ವರ್ಷಕೊಮ್ಮೆ ಜಾತ್ರೆ ನಡೆಯುತ್ತಿದೆ. ಜಾತ್ರೆ ವಿಶೇಷ ಕಾರ್ಯಕ್ರಮದೊಂದಿಗೆ ನಡೆಯುತ್ತದೆ.


ಚಳ್ಳಕೆರೆಗೆ ಪುರಾತನ ಹೆಸರು ಓರಗಲ್ಲು ಪಟ್ನ ಎಂದು ಹೆಸರು ಇತ್ತು ಎಂಬ ಐತಿಹ್ಯ ಓರಗಲ್ಲು ರಾಜ ಪರಶುರಾಮ ನಾಯಕರು ದೊಡ್ಡೇರಿಯಲ್ಲಿ ಆಡಳಿವನ್ನು ನಡೆಸುತ್ತಿದ್ದರು ಆ ಸಂದರ್ಭದಲ್ಲಿ ದೇವಿ ಬಂದು ನೆಲೆ ನಿಂತಿದ್ದಳು, ಸಂದರ್ಭದಲ್ಲಿ ಚಳ್ಳಕೆರೆಗೆ ಭಯಂಕರ ಪ್ಲೇಗು ಕಾಯಿಲೆವೊಂದು ಬಂದಾಗ ಚಳ್ಳಕೆರೆಗೆ ಬಂದು ಕಾಯಿಲೆಯನ್ನು ನಿವಾರಿಸಿ ಇಲ್ಲಿಯೇ ನೆಲೆಸಿದಳು ನಂತರ ಓರಗಲ್ಲು ಎಂಬ ಹೆಸರಾಯಿತು.
ಇಂದಿಗೂ ವೈಶ್ಯ ಬ್ಯಾಂಕ್ ಹಿಂದೆ ಇರುವ ಓರಗಲ್ಲು ಇದೆ ಈ ದೇವರ ಹೆಸರನ್ನೇ ಸಂಕ್ಷಿಪ್ತವಾಗಿ ಕಲ್ಲು ಕರಿ, ಚಲ್ಲಕೆರೆ, ಚಲಕಾರಿ, ಚಳಕೆರೆ, ಚಳ್ಳಕೆರೆ, ಎಂದು ಹೆಸರು ಬಂದಿದೆ.
14ನೇ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಸೇರಿತ್ತು ೧೫ ನೇ ಶತಮಾನ ನಂತರ ಚಿತ್ರದುರ್ಗ ಪಾಳೇಗಾರರ ಆಡಳಿತಕ್ಕೆ ಸೇರಿತ್ತು ದೊಡ್ಡೇರಿ ಅಂದು ಗಡಿ ಠಾಣೆ, ಠಾಣಾಧಿಕಾರಿ ಕಾಮಗೇತುಲು ವಂಶಸ್ಥ ಕಾಟಪ್ಪನಾಯಕ, ಕಾಟಪ್ಪ ನಾಯಕನ ಮಗನೇ ಹಿರೇಮದಕರಿನಾಯಕ ಕಾಟಪ್ಪನಾಯಕರು ವಾಸಿಸಿದ ಸ್ಥಳ ಹಾಗೂ ಅವರ ಹೆಸರಿನಲ್ಲಿಯೇ ಇರುವ ಇಂದಿನ ಕಾಟಪ್ಪನಹಟ್ಟಿ ಇಲ್ಲಿ ಚಿಕ್ಕದಾದ ಕೋಟೆಯ ಕೊತ್ತಲವು ಸಹ ಚಳ್ಳಕೆರೆ ನಗರದ ಈಶಾನ್ಯದಲ್ಲಿದೆ ಕಾಟಪ್ಪನಾಯಕರ ಮನೆತರದವರೇ ಮದಕರಿನಾಯಕನ ವಂಶಸ್ಥರು ಇಂದಿಗೂ ಕಾಟಪ್ಪನಹಟ್ಟಿಯಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

You cannot copy content of this page