ಗ್ರಾಮದಲ್ಲಿ ಅಕ್ರಮಚಟುಕೆಗಳು ಕಂಡು ಬಂದಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಪಿಎಸ್ ಐ ಶಿವರಾಜ್.
by ಗೋಪನಹಳ್ಳಿಶಿವಣ್ಣ | 02/12/23 | ಕಾನೂನು
![](https://janadhwani.in/wp-content/uploads/2023/12/IMG_20231202_173344-scaled.jpg)
ಚಳ್ಳಕೆರೆ ಜನಧ್ವನಿ ವಾರ್ತೆ ಡಿ.2. ಗ್ರಾಮೀಣ ಪ್ರದೇಶದಲ್ಲಿಯಾವುದೇ ಕಾನೂನು ಬಾಹಿರ ಚಟುವಟಿಕೆ ಹಾಗೂ ಅಪರಿತರ ಗ್ರಾಮದಲ್ಲಿ ಸುತ್ತಾಡುವುದು ಕಂಡು ಬಂದರೆ ಪೋಲಿಸ್ ಠಾಣೆಗೆ ಮಾಹಿನಿ ನೀಡುವಂತೆ ತನಿಖೆ ಪಿಎಸ್ ಐ ಶಿವರಾಜ್ ಕಿವಿಮಾತು ಹೇಳಿದರು. ತಾಲೂಕಿನ ಗೋಪನಹಳ್ಳಿ ಗ್ರಾಮದ ಶ್ರೀಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಪೋಲಿಸ್ ಇಲಾಖೆವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.ಪ್ರೌಢಶಾಲೆ ಆಸ್ಪತ್ರೆ ಮುಂಭಾಹದಲ್ಲಿ ಕುಡಿದು ಬಾಟಲಿ ಎಸೆದು ಹೋಗುತ್ತಾರೆ ಎಂಬ ಆರೋಪ ಕೇಳಿ ಬಂದಿದ್ದು ಇನ್ನು ಮುಂದೆ ಗ್ರಾಮದಲ್ಲಿ ಸಾರ್ವಜನಿಕಸ್ಥಳ ಶಾಲೆ ಆವರಣದಲ್ಲಿ ಮದ್ಯಪಾನ ಮಾಡಿದರೆ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು. ಶಾಲಾ ಕಾಲೇಜಿಗೆ ಹೋಗು ವಿದ್ಯಾರ್ಥಿನಿಯರ ಮೇಲೆ ಲವ್ ಹೆಸರಿನಲ್ಲಿ ಅಪ್ರಪ್ತರ ಮೇಲೆ ಪ್ರೇಮದ ಹೆಸರಿನಲ್ಲಿ ಚುಡಾಯಿಸುವುದು ವಿವಾಹ ಮಾಡಿಕೊಂಡ ಪ್ರಕರಣಗಳು ಕಂಡು ಬಂದರೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗುವುದು. ಜನರು ಪೋಲೀಸರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಅಕ್ರಮ ದಂಧೆಗಳಾದ ಮಟ್ಕಾ , ಜೂಜಟ್ ಗಾಂಜಾ ಮಾರಾಟ, ಮಾಡಬಾರದು, ಜನರು ನೇರವಾಗಿ ಠಾಣೆಗೆ ಬಂದು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಬೇಕು. ಅಕ್ರಮ ದಂಧೆ ಕೋರರ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯತೆ ಕಾಪಾಡಲಾಗುವುದುಮುಖಾಂತರ ಅಕ್ರಮಗಳನ್ನು ಕಡಿವಾಣ ಹಾಕಬೇಕಾದರೆ ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರಾಧಮ್ಮ .ಮುಖಂಡರಾಂದ ಉಮೇಶ್.ಪ್ರಸನ್ನ.ಮಹಂತೇಶ್. ಎಎಸ್ ಐ ತಿಪ್ಪೇಸ್ವಾಮಿ.ಪೋಲಿಸ್ ಮುಡಿಕೆ ಮಂಜುನಾಥ್ ಇತರರಿದ್ದರು.
0 Comments