ಚಳ್ಳಕೆರೆ ಜನಧ್ವನಿ ವಾರ್ತೆ ಸೆ.16. ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬುಡಕಟ್ಟುಗಳಾದ ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯಕ್ಕೆ ತಮ್ಮ ಆರಾಧ್ಯ ದೇವತೆ ಗೌರಸಮುದ್ರದ ಮಾರಿದೇವತೆ ಜಾತ್ರೆಗೆ ಭಾನುವಾರ 17 ರಂದು ಹುತ್ತಕ್ಕೆ ಅಭಿಶೇಕ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಿದ್ದು , 18 ರ ಸೋಮವಾರ ಮೂಲ ಸನ್ನಿಯದ ದೇವಿಗೆ ಅಭಷೇಕ ನಡೆಯಲಿದ್ದು 19ಮಂಗಳವಾರ ಮೂಲ ಸ್ಥಾನದಿಂದ ದೇವಿಯನ್ನು ಮೆರವಣಿಗೆಯೊಂದಿಗೆ ಜಾತ್ರೆ ನಡೆಯಲು ತುಮ್ಮಲು ಪ್ರದೇಶಕ್ಕೆ ಕರೆತರಾಗವುದು ಸಂಭ್ರಮದ ಜಾತ್ರೆಗಾಗಿ ಈಗಾಗಲೆ ಜಿಲ್ಲಾಡಳಿತ, ತಾಲೂಕು ಆಡಳಿತ , ಪೊಲೀಸ್ ಇಲಾಖೆ, ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಅದ್ದೂರಿಯಾಗಿ ಜಾತ್ರೆಗೆ ಬರುವ ಭಕ್ತರಿಗೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಪ್ರತಿ ನಿತ್ಯ ಸಂAಧಪಟ್ಟ ಅಧಿಕಾರಿಗಳು ಜಾತ್ರಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ನಾಯಕನಹಟ್ಟಿ ಶ್ರೀತಿಪ್ಪೇರುದ್ರಸ್ವಾಮಿ ಜಾತ್ರೆ ಬಿಟ್ಟರೆ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನಸೇರುವ ಬಹುದೊಡ್ಡ ಜಾತ್ರೆ ಗೌರಸಮುದ್ರ ಮಧ್ಯಾಹ್ನ ಮಾರಮ್ಮ ದೇವಿ ಜಾತ್ರೆ.
ಹಿನ್ನೆಲೆ
ದಾನಸಾಲಮ್ಮ ಎಂಬ ಯುವತಿ ಈಶ್ವರ ತಪಸ್ಸಿನಿಂದ ವರಪಡೆದ ಕುಂಬಳಕಾಯಿಯನ್ನು ಬೇಯಿಸಿ ತಿಂದ ಮೇಲೆ ದಾನಸಾಲಮ್ಮನಿಗೆ ಒಂದು ಹೆಣ್ಣು ಮಗು ಜನಿಸಿತು. ಬಹಳ ದಿನಗಳಿಗೆ ಈಶ್ವರನ ವರದಾನದಿಂದ ಹುಟ್ಟಿದ ಹೆಣ್ಣು ಮಗುವಿಗೆ ಮಾರಮ್ಮ ಎಂದು ನಾಮಕರಣ ಮಾಡಲಾಗಿದೆ.
ದಾನಸಾಲಮ್ಮ ಪತಿ ಸಂಚಸಿಖನಾಯಕ ದಂಪತಿಗಳಿಗೆ ಮಾರಮ್ಮ ಜನಿಸಿದ ನಂತರ ಏಳು ಜನ ಗಂಡು ಮಕ್ಕಳು ಹುಟ್ಟಿದರು. ಇವರು ಬೆಳೆದು ದೊಡ್ಡವರಾದ ಮೇಲೆ ಮಾರಮ್ಮ ಕುಟುಂಬದೊAದಿಗೆ ಕೋಟೆಕೊತ್ತಲಗಳನ್ನ ಕಟ್ಟಿಸಿ ಸಮಾಜದೊಂದಿಗೆ ಸಂತೋಷದಿAದ ಜೀವನ ಸಾಗಿಸಿದರು.
ಬಹುದಿನಗಳನಂತರ ಉಪ್ಪಾರ ಉಪ್ಪಿನ ಮಾಳಿಗೆಯಲ್ಲಿ ಹುತ್ತ ಬೆಳೆಯಲು ಪ್ರಾರಂಬವಾಯಿತು ದಿನಲೂ ಅವರು ಬಂದು ಬೆಳೆದ ಹುತ್ತವನ್ನು ಕಿತ್ತು ಹಾಕಿ ತನ್ಮ ಕಾಯಕ ಮಾಡುತ್ತಿದ್ದರು ಪ್ರತಿ ದಿನ ಹುತ್ತವನ್ನು ಕಿತ್ತು ಹಾಕಿದರೂ ಸಹ ಅದು ದೊಡ್ಡದಾಗಿ ಬೆಳೆಯಲು ಪ್ರಾರಂಬಿಸಿದಾಗ ಇವರಿಗೆ ಆಶ್ವರ್ಯ ಜತೆಗೆ ಗಾಬರಿಗೊಂಡು ಗೌರಸಮುದ್ರದ ಐಹೋರಿ ಮಠಕ್ಕೆ ಬಂದು ಜೋತಿಷ್ಯ ಕೇಳಿದಾಗ ಅವರಿಗೆ ಆಶ್ಚರ್ಯವಾಯಿತು.
ಹುತ್ತಬೆಳೆಯುವುದನ್ನು ಮತ್ತೆ ಕಿತ್ತುಹಾಕಲು ಹೋಗುವುದು ಬೇಡ ಈ ಸ್ಥಳದಲ್ಲಿ ಮಾರಮ್ಮ ಎಂಬ ಹೆಣ್ಣು ಮಗಳು ನಿಮಗೆ ಒಲಿಯುತ್ತಾಳೆ ಆದ್ದರಿಂದ ಭಯ ಭಕ್ತಿ ಶ್ರದ್ದೆಯಿಂದ ಪೂಜೆ ಮಾಡಿದರೆ ನಿಮಗೆ ಒಳ್ಳೆಯಾಗುತ್ತದೆ ಎಂಬ ಜ್ಯೋತಿಷಿಯ ಸಲಹೆಯಂತೆ ಉಪ್ಪಾರ ಜನಾಂಗದ ಕೆಂಚಮ್ಮ ಎಂಬ ಮಹಿಳೆ ಪತ್ರಿ ನಿತ್ಯ ಹುತ್ತಕ್ಕೆ ಹಾಲು ಬಿಟ್ಟು ಪೂಜೆ ಸಲ್ಲಿಸುತ್ತಿದ್ದಳು ಈಗಿರುವ ದೇವಸ್ಥಾನದ ಸ್ಥಳವೇ ಗೌರಸಮುದ್ರ ಮಾರಮ್ಮ ದೇವಿಯ ಗುಡಿ ಎಂದು ಹೇಳಲಾಗುತ್ತಿದೆ.
ಈಗಲೂ ಸಹ ಹುತ್ತಕ್ಕೆ ಹಾಲು ಬಿಡುವ ಮೂಲಕ ಜಾತ್ರೆ ಪ್ರಾರಂಭವಾಗುವುದು ಇಂದಿಗೂ ಸಹ ಗೌರಸಮುದ್ರಮಾರಮ್ಮ ದೇವಿಯ ಪೂಜೆಯನ್ನು ಉಪ್ಪಾರ ಜನಾಂಗದವರೇ ಪೂಜೆ ಮಾಡುವ ಪದ್ದತಿ ಇದೆ.
ಗೌರಸದ್ರಮುದ್ರ ಮಾರಮ್ಮ ದೇವಿ ಜಾತ್ರೆ ನಡೆದ ನಂತರ ಮರಿಪರಿಷೆ ಆಗುವ ಒಂದು ತಿಂಗಳವರೆಗೆ ಗ್ರಾಮಗಳಲ್ಲಿ ಮಾರಿ ಹಬ್ಬ ಆಚರಣೆ ಮಾಡುವ ಪದ್ದತಿಯನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ.
ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇದ ಮಾಡಲಾಗಿದೆ ಜಾತ್ರೆಗೆ ಬರುವ ಎಲ್ಲಾ ದಿಕ್ಕುಗಳಲ್ಲಿ ಪೊಲೀಸ್ ಇಲಾಖೆವತಿಯಿಂದ ಚೆಕ್ ಪೋಷ್ಟ್ ಗಳನ್ನು ನಿರ್ಮಿಸಲಾಗಿದೆ.

0 Comments