ಗೋಪನಹಳ್ಳಿ ಗ್ರಾಮದಲ್ಲಿ ಇಟ್ಟಕ್ಕಿ ಗೌಡರಿಂದ ಹೂ ಚೆಲ್ಲುವ ಮೂಲಕ ದೀವಣಿಗೆ ಹಬ್ಬಕ್ಕೆ ಚಾಲನೆ

by | 11/11/23 | ಸಾಂಸ್ಕೃತಿಕ


. ಜನಧ್ವನಿ ವಾರ್ತೆ ಮ.11 ವಿವಿಧ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಬದಲಾಗಿ ದೀವಣಿಗೆಹಬ್ಬ ಆಚರಣೆ ಮಾಡಲು ಮಂಗಳವಾರ ಅಮವಾಸೆಯದಿಂದ ಚಾಲನೆದೊರೆಯಲಿದೆ.
ದೀಪಾವಳಿ ಹಬ್ಬದ ಆಚರಣೆ ಇಲ್ಲಿ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದು. ಹಳ್ಳಿಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಅಷ್ಟಾಗಿ ಕಂಡು ಬರುತ್ತಿಲ್ಲ. ದೀವಣಿಗೆ(ಎತ್ತಿನ)ಹಬ್ಬದ ಹೆಸರಿನಲ್ಲಿ ಆಚರಣೆ ಎತ್ತುಗಳಿಗೆ ಶೃಂಗಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಮಂಗಳವಾರ ಅಮಾವಾಸೆ ಮುಗಿದ ನಂತರ ಹಳ್ಳಿಗಳಲ್ಲಿ ದೀವಣಿಗೆ ಹಬ್ಬಗಳ ಸಾಲೇ ಶುರುವಾಗುತ್ತದೆ. ಆದರೆ ಎಲ್ಲಾ ಹಳ್ಳಿಗಳಲ್ಲೂ ಒಂದೇ ದಿನ ದೀವಣಿಗೆ ಆಚರಿಸದೆ ಅಯಾ ಹಳ್ಳಿಯ ಮುಖಂಡರ ತೀರ್ಮಾನದಂತೆ ಆಯಾ ವಾರದ ದಿನ ಮುಂದಿನ ಅಮಾವಸ್ಯೆ ಬರುವ ತನಕ ಒಂದು ತಿಂಗಳ ಪೂರ್ತಿ ದೀಪಾವಳಿ ಹಬ್ಬ ಆಚರಿಸುತ್ತಾರೆ.
ತಂಗಟೆ ಹೂವು ದೀಪಾವಳಿ ಆಚರಣೆ ತಿಂಗಳಲ್ಲಿ ಅಡವಿಯಲ್ಲಿ ಎಲ್ಲಿನೋಡಿದರೂ ಗೋಲ್ಡ್ ಕಲರ್ ಕಾಣುತ್ತದೆ ಈ ಹೂವುಗಳನ್ನು ಕೆಲವು ದೇವರುಗಳಿಗೆ ಬಂಗಾರದ ಹೂವೆಂದು ಮುಡಿಸುವ ಪದ್ದತಿ ಇದೆ.
ವಿಶೇಷ:
ಹಬ್ಬಕ್ಕೆ ಮೂರು ದಿನ ಮುಂಚಿಯೇ ಗೊಲ್ಲ ಸಂಪ್ರದಾಯಕ್ಕೆ ಸೇರಿದ ಇಟ್ಟಕ್ಕಿಗೌಡ ಅಡವಿಯಲ್ಲಿ ಬದು, ಅರಣ್ಯ, ಸೇರಿದಂತೆ ವಿವಿಧ ಕಡೆಗಳಲ್ಲಿ ಬೆಳೆದ ತಂಗಟೆ(ಬಂಗಾರ) ಹೂವುಗಳನ್ನು ಕಿತ್ತು ತಂದು ಶುಕ್ರವಾರ ಹಾಗೂ ಶನಿವಾರ ಗ್ರಾಮದ ಎಲ್ಲಾ ದೇವಾಸ್ಥನಗಳಿಗೆ ಮೊದಲು ಹಾಕಿ ನಂತರ ಬುಡ್ಡೆ(ಗುಡ್ಡೆ)ಕಲ್ಲಿಗೆ ಹಾಕಿ ನಂತರ ಗ್ರಾಮಗಳ ಪ್ರತಿ ಮನೆಗಳ ಬಾಗಿಲಿಗೆ ಚೆಲ್ಲಿ ಹೋಗುತ್ತಾರೆ. ಹೀಗೆ ತಂಗಟೆ ಹೂವು ಚೆಲ್ಲಿದ ರಾತ್ರಿಯಿಂದ ದೇವಸ್ಥಾನಗಳಿಗೆ ಅಂಟಿ-ಪಿಂಟಿ ಎಂಬ ದೀಪದಾನ ಸಂಪ್ರದಾಯ ಆರಂಭವಾಗುತ್ತದೆ, ಗ್ರಾಮದ 9 ಜನ ಅಯಾಗಾರರು ಕಳ್ಳೆ ಮುಳ್ಳು ಜಾತಿಯ ಬೇಲಿಯನ್ನು ಕಡಿದು ಈಡು(ಕಿಚ್ಚು) ಮುಳ್ಳಿನ ಗೂಡನ್ನು ಕಟ್ಟಲಾಗುತ್ತದೆ. ಗೊಲ್ಲಸುಮುದಾಯದ ಇಟ್ಟಕ್ಕಿ ಗೌಡರು ಪೂಜೆ ನಂತರ ಮುಳ್ಳಿನ ಗೂಡಿಗೆ ಬೆಂಕಿ ಹಚ್ಚಿ ಶೃಂಗಾರಗೊಳಿಸಿದ ಎತ್ತುಗಳನ್ನು ಸುತ್ತುವರಿಸಿ ಪೂಜೆ ಸಲ್ಲಿಸಿ ನಂತರ ಕಿಚ್ಚಿನ ಪೂಜೆಗೆಂದು ಮಾಡಿದ ಎಡೆಯ ಅನ್ನವನ್ನು ಕಲಸಿದ ಮುಸರೆಯನ್ನು ತಂದು ರೈತರು ತಮ್ಮ ಜಮೀನುಗಳಿಗೆ ಹಾಕಿದರೆ ಬೆಳೆಗಳಿಗೆ ಯಾವುದೇ ಕೀಟ, ರೋಗ ಬಾದೆ ಹಾಗೂ ಬೆಳೆಗಳಿಗೆ ಯಾವುದೇ ದೃಷ್ಠಿ ಬೀಳುವುದಿಲ್ಲ ಬೆಳೆಯೂ ಸಹ ಉಲುಸಾಗಿ ಹೆಚ್ಚಿನ ಇಳುವರಿ ಬರುತ್ತದೆ ಎಂಬ ನಂಬಿಕೆ ಹಳ್ಳಿಯ ರೈತರ ನಂಬಿಕೆಯಾಗಿಯಾಗಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *