ಕ್ರೈಂ
ಜಮೀನಿನಲಲ್ಲಿದ್ದ ಡ್ರಿಪ್ ವೈರ್ ಕಳವು- ಬೈಕ್ ಅಪಘಾತ ಇಬ್ಬರಿಗೆ ಗಾಯ.
ಜಮೀನಿನಲ್ಲಿದ್ದ ಹನಿ ನೀರಾವರಿಯ ಡ್ರಿಪ್-ವೈರ್ ಕಳವು ::
ಮೊಳಕಾಲ್ಕೂರು, ನವೆಂಬರ್ 28 : ಮೊಳಕಾಲ್ಕೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ವಾಸಿ ವೀರಾರೆಡ್ಡಿ
(58) ತಂದೆ ನಾಗಣ್ಣ ರವರ ಬಾಬು ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ, ರಿ.ಸ.ನಂ:115/4 ರಲ್ಲಿ 02
ಎಕರೆ, ರಿ.ಸ.ನಂ:115/3 ರಲ್ಲಿ 02 ಎಕರೆ ಜಮೀನುಗಳಲ್ಲಿ ಡ್ರಿಪ್-ವೈರ್ ನ್ನು ಹಾಕಿದ್ದು ಹನಿ ನೀರಾವರಿ
ಮಾಡಿಕೊಂಡಿರುತ್ತಾರೆ. ವೀರಾರೆಡ್ಡಿರವರ ಜಮೀನಿನಲ್ಲಿರುವ 04 ಕೊಳವೆ ಬಾವಿಗಳು ಉತ್ತಮವಾಗಿ ಕಾರ್ಯ
ನಿರ್ವಹಿಸುತ್ತಿದ್ದುದರಿಂದ, ಇವರ ಮೂರು ಜಮೀನಿಗೆ ಹಾಕಿದ್ದ ಸುಮಾರು 20 ಸಾವಿರ ಮೌಲ್ಯದ ಡ್ರಿಪ್-ವೈರ್
ನ್ನು 72 ಸಿಂಬೆ-ಬಂಡಲ್ ಗಳಾಗಿ ಮಾಡಿ ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ ಜಮೀನಿನಲ್ಲಿ ಸಂಗ್ರಹ
ಮಾಡಿದ್ದು, ದಿನಾಂಕ:23.11.2023 ರಿಂದ ದಿನಾಂಕ:27.11.2023 ಮಧ್ಯದ ಅವಧಿಯಲ್ಲಿ ವೀರಾರೆಡ್ಡಿ ರವರು
ತಮ್ಮ ಮಾವನ ಊರಾದ ಬಳ್ಳಾರಿಗೆ ಹೋಗಿರುವಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಬೈಕ್ ಅಒಘಸತ ಇಬ್ಬರಿಗೆ ಗಾಯ.
ಮಾರಣಾಂತಿಕವಲ್ಲದಅಪಘಾತ ಪ್ರಕರಣಗಳು ::
ಚಿತ್ರದುರ್ಗ, ನವೆಂಬರ್ 28 : ಚಿತ್ರದುರ್ಗ ಟೌನ್ ನ ಕಾಮನಬಾವಿ ಬಡಾವಣೆ ನಿವಾಸಿ ಹರೀಶ್ (35) ತಂದೆ
ಲೇಟ್ ಚಂದ್ರಪ್ಪ ರವರು ದಿನಾಂಕ.27.11.2023 ರಂದು ತನ್ನ ಬಾಬು ನಂ.ಕೆ.ಎ.16-ಈಯು-6298 ನೇ
ಮೋಟಾರ್ ಸೈಕಲ್ ನಲ್ಲಿ ತಮ್ಮನಾದ ಹನುಮಂತಪ್ಪ(28) ತಂದೆ ಲೇಟ್ ಚಂದ್ರಪ್ಪ ರವರ ಜೊತೆಗೆ
ಕಾಸವನಹಳ್ಳಿ ಗ್ರಾಮದ ತಮ್ಮ ತೋಟಕ್ಕೆ ಹೋಗಿ ರಾತ್ರಿ ವಾಪಸ್ಸು ಮನೆಗೆ ಬರುತ್ತಿರುವಾಗ ಸುಮಾರು ರಾತ್ರಿ
10.20 ಗಂಟೆ ಸಮಯದಲ್ಲಿ ಚಿತ್ರದುರ್ಗ ಟೌನ್ ನ ಚಳ್ಳಕೆರೆ ಗೇಟ್ ಮೇಲ್ಬಾಗದ ಬೆಂಗಳೂರು ಕಡೆಯಿಂದ
ದಾವಣಗೆರೆ ಹಳೆಯ ಎನ್.ಹೆಚ್-48 ರಸ್ತೆಯಲ್ಲಿ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಹನುಮಂತಪ್ಪ
ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ
ಯಾವುದೋ ಒಂದು ಎಮ್ಮೆಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಪರಿಣಾಮ ಬೈಕ್ ಸಮೇತ ಇಬ್ಬರೂ ರಸ್ತೆಗೆ
ಬಿದ್ದು, ಹಿಂಬದಿ ಕುಳಿತಿದ್ದ ಹರೀಶ್ ರವರಿಗೆ ಮೈ-ಕೈಗೆ, ಸೊಂಟಕ್ಕೆ ಒಳಪೆಟ್ಟು ಬಿದ್ದು ನೋವುಂಟಾಗಿರುತ್ತದೆ
ಹಾಗೂ ಚಾಲಕ ಹನುಮಂತಪ್ಪನಿಗೂ ಸಹ ಒಳಪೆಟ್ಟು ಬಿದ್ದು ನೋವಾಗಿದ್ದು, ಈ ಬಗ್ಗೆ ಚಿತ್ರದುರ್ಗ ಸಂಚಾರಿ
ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಅಪಹರಣಕ್ಕೊಗಾದ ವಿದ್ಯಾರ್ಥಿಯೊಬ್ಬ ಸಿನಿಮೀಯ ರೀತಿ ಅಪರಹಣಕಾರರಿಂದ ತಪ್ಪಿಸಿಕೊಂಡು ದಾವಣಗೆರೆ ಠಾಣೆಗೆ ಹೊಗಿ ತಂದೆಗೆ ಕರೆ ಮಾಡಿಸಿದ ಬೆಚ್ಚಿಬೀಳಿಸುವ ಘಟನೆ.
ಚಳ್ಳಕೆರೆ. ಜನಧ್ವನಿ ವಾರ್ತೆ ನ.27 ಅಪಹರಣಕ್ಕೊಗಾದ ವಿದ್ಯಾರ್ಥಿಯೊಬ್ಬ ಸಿನಿಮೀಯ ರೀತಿ ಅಪರಹಣಕಾರರಿಂದ ತಪ್ಪಿಸಿಕೊಂಡು ದಾವಣಗೆರೆ ಠಾಣೆಗೆ ಹೊಗಿ ತಂದೆಗೆ ಕರೆ ಮಾಡಿಸಿದ ಘಟನೆ ಸೋಮವಾರ ನಡೆದಿದೆ.
. ಅಪಹರಣಕಾರರಿಂದ ತಪ್ಪಿಸಿಕೊಂಡು ದಾವಣಗೆರೆ ಬಡಾವಣೆ ಪೋಲಿಸ್ ಠಾಣೆ ಸೇರಿದ ವಿದ್ಯಾರ್ಥಿ
ಕಾಲೇಜಿಗೆ ಹೋಗುವ ವಿದ್ಯಾರ್ಥಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪೋಷಕರಿಂದ ಪೋನ್ ಫೆಗೆ ಹಣ ಹಾಕಿಸಿ ಬಿಟ್ಟ ಘಟನೆ ಬೆನ್ನಲ್ಲೇ ಮೊತ್ತೊಬ್ಬವಿದ್ಯಾರ್ಥಿಯನ್ನು ಅಪರಹರಿಸಿದ ಘಟನೆ ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಎಂ.ಸ್ವಾಮಿ (17) ಚಿತ್ರದುರ್ಗಕ್ಕೆ ಲ್ಯಾಬ್ ಟೆಕ್ನೀಸಿಯನ್ ವ್ಯಾಸಂಗ ಮಾಡಲು ದಿನ ನಿತ್ಯ ಗೋಪನಹಳ್ಳಿ ಗ್ರಾಮದಿಂದ ಹೋಗುತ್ತಿದ್ದ ಪಾವಗಡ ರಸ್ತೆಯ ಸಂತೆ ಮೈದಾನದ ನರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇಬ್ಬರು ಚಾಕುಚೂರು ತೋರಿಸಿ ನಿಮ್ಮ ಪೋಷಕರ ಬಳಿ ಹತ್ತು ಸಾವಿರ ಹಣ ಪೋನ್ ಪೇ ಮಾಡಿಸು ಎಂದು ಹೇಳಿದ್ದಾರೆ.
ತಕ್ಕಣ ವಿದ್ಯಾರ್ಥಿ ಪೋಷಕರಿಗೆ ದೂರವಾಣಿಕರೆ ಮಾಡಿ ಪೋನ್ ಪೇಗೆ 4 ಸಾವಿರ ರೂ ಹಾಕಿಸಿಕೊಂಡು ಬಿಟ್ಟು ಕಳಿಸಿದ್ದಾ ರೆ ಈ ಘನಟೆ ನಡೆದು ಎರಡು ತಿಂಗಳು ಕಳೆದಿಲ್ಲ ಅದೇ ಗ್ರಾಮದ ರೋಹಿತ್ ಚಳ್ಳಕರೆ ನಗರದ ಕುವೆಂಪು ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದಿನಂತೆ ಗೋಪನಹಳ್ಳಿ ಗ್ರಾಮದಿಂದ ಬೆಳಗ್ಗೆ 7-30 ರ ಬಸ್ಸಿಗೆ ಶಾಲೆಗೆ ಹೋಗಿದ್ದಾನೆ.
ನಗರೆದ ಪಾವಗಡ ರಸ್ತೆಯಲ್ಲಿ ಬಸ್ಸು ಇಳಿದು ಶಾಲೆಗೆ ಹೋಗುವಾಗ ಕಾರಿನಲ್ಲಿ ಬಂದ ವ್ಯಕ್ತಿಗಳು ಶಾಲೆಗೆ ಡ್ರಾಪ್ ಕೊಡುತ್ತೇವೆ ಕುಳಿತುಕೊ ಎಂದು ಕಾರಿನಲ್ಲಿ ಕುಡಿತಕೊಂಡು ವಿದ್ಯಾರ್ಥಿಗೆ ನೀರು ಕುಡಿ ಎಂದು ಕುಡಿಸಿದ್ದಾರೆ. ನೀರು ಕುಡಿಯ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ಪಾನೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಎಚ್ಚರಗೊಂಡ ವಿದ್ಯಾರ್ಥಿ ಮೂತ್ರ ವಿಸರ್ಜೆನೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಂಡು ಲಾರಿ ಮೂಲಕ ದಾವಣಗೆರೆ ಬಡವಾಣೆ ಪೋಲಿಸ್ ಠಾಣೆಗೆ ಹೋಗಿ ಪೋಷಕರಿಗೆ ಕರೆ ಮಾಡಿಸಿದ್ದು ಪೋಷಕರು ದಾವಣಗೆ ಠಾಣೆಗೆ ಹೋಗಿ ಮಗನನ್ನು ಕರೆತಲು ಹೋಗಿದ್ದಾರೆ ಹೆಚ್ಚಿನ ಮಾಹಿತಿ ತನಿಖೆ ನಂತರವೇ ತಿಳಿಯ ಬೇಕಿದೆ.
ಒಟ್ಟಾರೆ ಚಳ್ಳಕೆರೆ ನಗರದಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದ ಪೋಷಕರು ತಮ್ಮ ಮಕ್ಕಳನ್ನು ಶಾಲಾಕಾಲೇಜಿಗೆ ಕಳಿಸಲು ಭಯ ಭೀತರಾಗಿದ್ದಾರೆ.
ಒಟ್ಟಾರೆ ವಿದ್ಯಾರ್ಥಿ ಧೈರ್ಯದಿಂದ ಅಪರಹಣಕಾರಿಗೆ ಚೆಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಪ್ರಾಣಾಪಯ ದಿಂದ ಪಾರಾಗಿರುವುದಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಪೊಲೀಸ್ ಇಲಾಖೆ ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸ ಬೇಕಾಗಿದೆ.
ವಿದ್ಯುತ್ ತಂತಿ ತಗುಲಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ಅಥಣಿಯಲ್ಲಿ ನಡೆದಿದೆ
ಬೆಳಗಾವಿ ನ.26. ಬೆಂಗಳೂರಿನಲ್ಲಿ ವಿದ್ಯುತ್ ಅವಘಡಕ್ಕೆ ಸಿಲುಕಿ ತಾಯಿ ಮಗು ಸಾವನ್ನಪ್ಪಿದ ಘಟನೆ ಇನ್ನು ಕಣ್ಣುಮುಂದೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ತಂದೆ ಮಲ್ಲಿಕಾರ್ಜುನ ಪೂಜಾರಿ(32), ಮಗ ಪ್ರೀತಮ್(7) ಮೃತ ರ್ದುದೈವಿಗಳು. ಪ್ರೀತಮ್ನನ್ನು ತಂದೆ ಮಲ್ಲಿಕಾರ್ಜುನ ತೋಟಕ್ಕೆ ಕರೆದುಕೊಂಡುಹೋಗಿದ್ದ. ಈ ವೇಳೆ ಮೋಟಾರ್ ಆನ್ ಮಾಡಿ ವಾಟರ್ವಾಲ್ ಟರ್ನ್ ಮಾಡುವಾಗ ಮಲ್ಲಿಕಾರ್ಜುನ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ನೋಡಿದ ಮಗ, ತಂದೆಯನ್ನು ರಕ್ಷಿಸಲು ಕೈ ಹಿಡಿದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಅಕ್ಕಪಕ್ಕದ ಮನೆಯವರ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಎಂದು ಐದು ಜನ ಆತ್ಮಹತ್ಯೆ
ತುಮಕೂರು: ಅಕ್ಕಪಕ್ಕದ ಮನೆಯವರ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಎಂದು ಐದು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ನಗರದ ಸದಾಶಿವನಗರದ ನಿವಾಸಿಗಳಾದ ಗರೀಬ್ಸಾಬ್ (32), ಸುಮಯಾ (30), ಹಜೀರಾ, ಮಹ್ಮದ್ ಶುಭಾನ್, ಮಹ್ಮದ್ ಮುನೀರ್ ಮೃತರು.
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ನಿವಾಸಿ.ನಗರದ ಸದಾಶಿವನಗರದಲ್ಲಿ ಕಬಾಬ್ ಅಂಗಡಿ ನಡೆಸುತ್ತಾ, ಜೀವನ ಸಾಗಿಸುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿದ್ದರು.
‘ಕೆಳಗಡೆ ಬಾಡಿಗೆಗೆ ಇದ್ದ ಕಲಂದರ್ ಎಂಬುವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅವರೇ ನಮ್ಮ ಸಾವಿಗೆ ಕಾರಣ ಎಂದು’ ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾವು ಯಾರ ತಂಟೆಗೂ ಹೋಗುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು ದೌರ್ಜನ್ಯ ನೀಡುತ್ತಿದ್ದರು. ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ದೇಹಗಳನ್ನು ಪೋಸ್ಟ್ಮಾರ್ಟಂ ಮಾಡಬೇಡಿ ಎಂದು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.
ನರಭಕ್ಷಕ ವ್ಯಾಘ್ರನ ಆರ್ಭಟಕ್ಕೆ ಮತ್ತೊಬ್ಬ ದನಗಾಹಿ ಮಹಿಳೆ ಬಲಿ
ನಂಜನಗೂಡು
*ನರಭಕ್ಷಕ ವ್ಯಾಘ್ರನ ಆರ್ಭಟಕ್ಕೆ ಮತ್ತೊಬ್ಬ ದನಗಾಹಿ ಮಹಿಳೆ ಬಲಿ*
*ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುವ ವೇಳೆ ದಾಳಿ ಮಾಡಿ ಒತ್ತೋಯ್ದ ನರಭಕ್ಷಕ ಹುಲಿ*
ಸರಿ ಸುಮಾರು ಮಧ್ಯಾಹ್ನದ 3.15 ರ ಸಮಯದಲ್ಲಿ ಹಾಡು ಹಗಲೇ ದಾಳಿ
ರತ್ನಮ್ಮ ನರಭಕ್ಷಕ ಹುಲಿಗೆ ಬಲಿಯಾದ ಮೃತ ಮಹಿಳೆ
ಬಳ್ಳೂರು ಹುಂಡಿ ಗ್ರಾಮದ ವೆಂಕಟಯ್ಯ ಎಂಬುವರ ಪತ್ನಿ ಮೃತ ಮಹಿಳೆ ರತ್ನಮ್ಮ 50 ವರ್ಷ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮ
ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ಮೃತ ಮಹಿಳೆ ರತ್ನಮ್ಮ
ವ್ಯಾಘ್ರನ ಬಾಯಿಗೆ ಆಹಾರವಾದ ರತ್ನಮ್ಮಳ ಜಮೀನಿನಿಂದ ಕಾಡಿನೊಳಗೆ ಮೃತ ದೇಹವನ್ನು ಎಳೆದೋಯ್ದ ವ್ಯಾಘ್ರ
ನರಭಕ್ಷಕ ಹುಲಿಗೆ ಬಲಿಯಾದ ರತ್ನಮ್ಮಳ ಮೃತದೇಹವನ್ನು ಹುಡುಕಾಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
ಸುಮಾರು ಒಂದು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ನರಭಕ್ಷಕ ಹುಲಿ ದಾಳಿ ಮಾಡಿತು
ನರಭಕ್ಷಕ ಹುಲಿಯನ್ನು ಸರಿ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗದ ಕಾರಣ ಈಗ ಮತ್ತೆ ದನಗಾಯಿ ಮಹಿಮೆ ಬಲಿಯಾಗಿದ್ದಾರೆ
ಹೆಡಿಯಾಲ ಬಳ್ಳೂರು ಹುಂಡಿ ಮಹದೇವ ನಗರ ಗ್ರಾಮದ ಸುತ್ತಮುತ್ತಲ ವಾಸಿಗಳು ಈಗ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಲು ಮುಂದಾಗಿದ್ದಾರೆ
ಹೆಡಿಯಾಲ ಅರಣ್ಯ ಇಲಾಖೆಯ ಆರ್ಎಫ್ಒ ನಾರಾಯಣ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಮೃತ ಮಹಿಳೆ ರತ್ನಮಳ ಮೃತ ದೇಹವನ್ನು ಹುಡುಕಾಡುತ್ತಿದ್ದಾರೆ
ಕಾರ್ಮಿಕ ಅಧಿಕಾರಿಗಳ ತಪಾಸಣೆ ಹೋಟೆಲ್ ಗ್ಯಾರೇಜ್ಗಳಲ್ಲಿ ಬಾಲಕಾರ್ಮಿಕ ಪದ್ದತಿ ನಿಷೇಧ ಜಾಗೃತಿ
ದಾವಣಗೆರೆ; ನ.24 : ನ.24 ರಂದು ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ಹರಿಹರ ನಗರದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯಾವಸ್ಥೆ & ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ಕುರಿತು ವಿವಿಧ ಅಂಗಡಿ, ಹೋಟೆಲ್, ಗ್ಯಾರೇಜ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಅಧಿಕಾರಿಗಳು ಬಾಲ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ತಪಾಸಣೆ ನಡೆಸಿ, ಮಾಲೀಕರಿಗೆ ಕರಪತ್ರ & ಸ್ಟೀಕ್ಕರ್ಸ್ ನೀಡಿ ಜಾಗೃತಿ ಮೂಡಿಸಿದರು.
ಕಾರ್ಯಾಚರಣೆಯಲ್ಲಿ ಕಾರ್ಮಿಕ ನಿರೀಕ್ಷಕರಾದ ರಾಜಶೇಖರ ಹಿರೇಮಠ್ & ರಾಜಪ್ಪ.ಟಿ, ಹಾಗೂ ಯೋಜನಾ ನಿರ್ದೇಶಕರಾದ ಪ್ರಸನ್ನ ಇ.ಎನ್ ಉಪಸ್ಥಿತರಿದ್ದರು.
ಕುಖ್ಯಾತ ಕತರ್ನಾಕ್ ಮನೆಗಳನ್ನ ಬಂಧನ 629 ಗ್ರಾಂ ಚಿನ್ನ ವಶ : ಕುದುರೆ ರೇಸ್ ಹಾಗೂ ಮೋಜಿನ ಜೀವನಕ್ಕಾಗಿ ಕಳವು
ಹೊಸಕೋಟೆ ನ.23 ಕುಖ್ಯಾತ ಕತರ್ನಾಕ್ ಮನೆಗಳನ್ನ ಬಂಧನ 629 ಗ್ರಾಂ ಚಿನ್ನ ವಶ : ಕುದುರೆ ರೇಸ್ ಹಾಗೂ ಮೋಜಿನ ಜೀವನಕ್ಕಾಗಿ ಕಳವು
ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿದ್ದಂತಹ ಕತರ್ನಾಕು ಕುಖ್ಯಾತ ಮನೆಗಳನನ್ನ ಬಂಧಿಸುವಲ್ಲಿ ತಿರುಮಲ ಶೆಟ್ಟಿ ಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿಯ ಇಮ್ತಿಯಾಜ್ ಅಹಮದ್ ಹಾಗೂ ಕಾವಲ್ ಬೈರಸಂದ್ರದ ನಗೀನ ತಾಜ್ ಬಂದಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಸುಮಾರು 38 ಲಕ್ಷ ಮೌಲ್ಯದ 629 ಗ್ರಾಂ ಚಿನ್ನದ ಆಭರಣ, 719 ಗ್ರಾಂ ಬೆಳ್ಳಿಯ ಆಭರಣ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಇಮ್ತಿಯಾಜ್ ಅಹಮದ್ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮದಲ್ಲಿ ಸಣ್ಣದಾದ ರೂಮ್ ಒಂದನ್ನ ಬಾಡಿಗೆಗೆ ಪಡೆದು ವಾಸವಾಗಿದ್ದ. ರಾತ್ರಿ ವೇಳೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತಹ ಈ ಆರೋಪಿ ಕಬ್ಬಿಣದ ರಾಡ್ ಹಾಗೂ ಸ್ಕ್ರೂ ಡ್ರೈವರ್ ಗಳನ್ನು ಇಟ್ಟುಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಮನೆ ಬೀಗ ಮುರಿದು ಕಳ್ಳತನ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ತೋಚಿಕೊಂಡು ಪರಾರಿಯಾಗಿದ್ದ.
ಹೀಗೆ ಕಳವು ಮಾಡುತ್ತಿದ್ದಂತಹ ಚಿನ್ನವನ್ನು ತನ್ನ ಸ್ನೇಹಿತೆ ಆದಂತಹ ನಗಿನ ತಾಜ್ ಗೆ ಕೊಟ್ಟು ಅವಳ ಮುಖಾಂತರ ಬ್ಯಾಂಕು, ಜುವೆಲ್ಲರಿ, ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುವುದು ಹಾಗೂ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಿಂದ ಕುದುರೆ ರೇಸು ಮೋಜು-ಮಸ್ತಿ ಮಾಡಿ ಕಾಲ ಕಳೆಯುವುದು ಆರೋಪಿಯ ಜೀವನ ಶೈಲಿ ಆಗಿರುತ್ತದೆ.

ಬಾಕ್ಸ್: ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು
ಮನೆಗೊಳ್ಳತನ ಮಾಡುತ್ತಿದ್ದಂತಹ ಇಮ್ತಿಯಾ ಅಹಮದ್ ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಳ್ಳಿ 10, ಹಾಗೂ ಅನುಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 5 ಒಟ್ಟು 15 ಪ್ರಕರಣ ಸೇರಿದಂತೆ ಬೆಂಗಳೂರಿನ ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಸುಬ್ರಮಣ್ಯಪುರ, ಮೈಕೋಲೇಔಟ್ ಜೀವನ್ ಭೀಮಾ ನಗರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗಳ 42 ಕಳವು ಪ್ರಕರಣಗಳ ಆರೋಪಿಯಾಗಿದ್ದಾನೆ. ಕಳೆದ 10 10 ತಿಂಗಳ ಹಿಂದೆ ಕಳುವು ಪ್ರಕರಣದಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಬಂದಿತನಾಗಿ ಬೇಲ್ನಲ್ಲಿ ಹೊರಬಂದಿದ್ದ, ಹೊರಬಂದ ಬಳಿಕ ಸಮೇತನಹಳ್ಳಿ ಬಳಿ ರೂಮ್ ಮಾಡಿಕೊಂಡು ಮತ್ತೆ ತನ್ನ ಅದೇ ಚಾಳಿಯನ್ನು ಮುಂದುವರಿಸಿ ಸುಮಾರು 15 ಕಳ್ಳತನಗಳನ್ನು ಮಾಡಿದ್ದ. ಕಳ್ಳತನವನ್ನೇ ಉದ್ಯೋಗವನ್ನಾಗಿಸಿಕೊಂಡು ಪೊಲೀಸರ ಕಣ್ ತಪ್ಪಿಸಿ ಓಡಾಡಿಕೊಂಡಿದ್ದ ಅಂತಹ ತಿರುಮಲಾ ಶೆಟ್ಟಳ್ಳಿ ಪೊಲೀಸರು ಸಾಕಷ್ಟು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಸುದ್ದಿಗೋಷ್ಠಿ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ – ಬೆಂಗಳೂರು ಗ್ರಾಮಾಂತರ ಜಿಲ್ಲೆ
ಗ್ರಾಪಂ ಸದಸ್ಯ 20ಸಾವಿರ ರೂ ಲಂಚಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಹಾವೇರಿ.
ಹಾವೇರಿನ.23 ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಗ್ರಾಮಪಂಚಾಯಿತಿ ಸದಸ್ಯ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯಮಹಮ್ಮದ್ ಜಾಪರ್
20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದಾದಾಪೀರ್ ಲೋಹರ್ ಎಂಬುವರಿಗೆ 5 ಲಕ್ಷ ರೂ. ಮನೆ ಮಂಜೂರಾಗಿತ್ತು. ಈ ಮನೆಗೆ ಜಿಪಿಎಸ್ ಮಾಡಿಸಲು ಗ್ರಾ. ಪಂ. ಸದಸ್ಯ 40 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ಪ್ರಕರಣ ನಗರವನ್ನೇ ಬೆಚ್ಚಿ ಬೀಳಿದ ಬೆನ್ನಲ್ಲೇ ಹಲ್ಲೆ ಮಾಡಿದ ಗಂಡ ಸೇರಿ ಎಂಟು ಜನರ ಮೇಲೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ
ಚಳ್ಳಕೆರೆ ನ.22 ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ಪ್ರಕರಣ ನಗರವನ್ನೇ ಬೆಚ್ಚಿ ಬೀಳಿದ ಬೆನ್ನಲ್ಲೇ ಹಲ್ಲೆ ಮಾಡಿದ ಗಂಡ ಸೇರಿ ಎಂಟು ಜನರ ಮೇಲೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನಿಂದ ಹಲ್ಲೆಗೊಳದ ಆಶಾಳ ತಂದೆ ಹನುಮಂತಪ್ಪ ಚಳ್ಳಕೆರೆ ಠಾಣೆಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ದೂರು ನೀಡಿದ್ದಾರೆ. ನನ್ನ ಮಗಳಾದ ಆಶಾ ಳನ್ನು ಚಳ್ಳಕೆರೆ ತಾಲೂಕು ಪರಶುರಾಂಪು ಹೋಬಳಿ ಚನ್ನಮನಾಗತಿಹಳ್ಳಿ ಗ್ರಾಮದ ಕುಮಾರಸ್ವಾಮಿ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು ಕಳೆದ 4 ವರ್ಷದ ಹಿಂದೆ ಅವರಿಬ್ಬರಿಗೆ ಸಂಬಂಧಿಕರರೂ ಸೇರಿ ಮದುವೆ ಮಾಡಿದ ಬಳಿಕೆ ಆಶಾಳು ಗಂಡನ ಮನೆಯಲ್ಲಿ, ಚನ್ನಮನಾಗತಿಹಳ್ಳಿಯಲ್ಲಿದ್ದು 6 ತಿಂಗಳವರೆಗೆ ಗಂಡ ಹೆಂಡತಿ ಅನೋನ್ಯವಾಗಿದ್ದು ನಂತರ ಗಂಡ
ಮತ್ತು ಗಂಡ ಕುಮಾರಸ್ವಾಮಿ ತಾಯಿ ಲಕ್ಷ್ಮೀದೇವಿ, ತಂದೆ ಹನುಮಂತಪ್ಪ, ಅಕ್ಕ ಲಕ್ಷ್ಮಿ, ಲಕ್ಷ್ಮೀಯ ಮಗಳು ಸುಚಿತ್ರ, ತಮ್ಮಂದಿರಾದ ಹನುಮಂತರಾಯ ಮತ್ತು ಮಂಜುನಾಥ ಹಾಗೂ ಕುಮಾರಸ್ವಾಮಿಯ ಚಿಕ್ಕಪ್ಪನಾದ ಗುಜ್ಜಾರಪ್ಪ ಇವರು ಆಶಾಳಿಗೆ ನೀನು ಓಡಿ ಬಂದವಳು ಅಂತಾ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದು ಆಶಾಳ ಶೀಲವನ್ನು ಶಂಕಿಸಿ ಮೇಲ್ಕಂಡವರೆಲ್ಲರೂ ಕೆಟ್ಟ ಮಾತುಗಳಿಂದ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಪಂಚಾಯಿತಿ ಮಾಡಿದರೂ ಮತ್ತು ಅವರ ಸಂಬಂಧಿಕರು ಹೋಗಿ ಪಂಚಾಯಿತಿ ಮಾಡಿದ್ದರೂ ಸಹ ನಿರಂತರವಾಗಿ ಕಿರುಕುಳ ನೀಡುತ್ತಿದ್ದು ಈಗೆ 2 ವರ್ಷದ ಹಿಂದೆ ಆಶಳಾನ್ನು ಮೇಲಂಡವರೆಲ್ಲರೂ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಕೈಕಾಲುಗಳಿಂದ ಹೊಡೆದು ನೀನು ನಮ್ಮ ಮನೆಯಲ್ಲಿ ಇದ್ದರೆ ಸಾಯಿಸಿಬಿಡುತ್ತೇವೆಂತ ಪ್ರಾಣ ಬೆದರಿಕೆ ಹಾಕಿದ್ದರಿಂದ ತವರು ಬಂದು ನಂತರ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಗಂಡನ ಮೇಲೆ ಡೈವೋರ್ಸ್ ಕೇಸು ಹಾಕಿಕೊಂಡು ಚಳ್ಳಕೆರೆ ಕೊರ್ಟಿಗೆ ಹಿಯರಿಂಗ್ ಗೆಓಡಾಡಿಕೊಂಡಿದ್ದಳು,
ಕುಮಾರಸ್ವಾಮಿಯು ಆಶಾಳನ್ನು ಕೊಲೆ ಮಾಡುತ್ತೇನೆ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದು, ಅದೇ ರೀತಿ ಬುಧವಾರ ನನ್ನ ಮಗಳು ಕೋರ್ಟಿಗೆ ಬರುತ್ತೇನೆಂತ ಎಂದು ತಿಳಿಸಿದ್ದರಿಂದ ತಿಳಿಸಿದ್ದರಿಂದ ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಸುಮಾರು 11-15 ಗಂಟೆಗೆ ಮಗಳು ಆಶಾರವರು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ನ ಮುಂದಿನ
ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಆಕೆಯ ಗಂಡ ಕುಮಾರಸ್ವಾಮಿ ಏಕಾಏಕಿಯಾಗಿ ನಿಲಿಸಿ, ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಬೇರೆಯವರ ಜೊತೆ ಅಕ್ರಮ ಸಂಭಂದ ಇಟ್ಟುಕೊಂಡಿದ್ದೀಯಾ ನಿನ್ನನ್ನು ಸಾಯಿಸಿಬಿಡುತ್ತೇನೆ ಎಂದು ಕೊಲೆ ಮಾಡುವ ಉದ್ದೇಶದಿಂದ ಅವನ ಕೈಯಲ್ಲಿದ್ದ ಮಚ್ಚಿನಿಂದ ಆಶಾಳ ತಲೆಗೆ ಹೊಡೆಯಲು ಹೋದಾಗ ಆಕೆಯ ಕೈಗಳನ್ನು ಅಡ್ಡ ಹಿಡಿದಿದ್ದ ಸ್ಥಳಕ್ಕೆ ಹೋಗುವಷ್ಟರಲ್ಲಿ , ಕುಮಾರಸ್ವಾಮಿ ಪುನಃ ಆಶಾಳ ಕೈಗಳಿಗೆ ಮತ್ತು ತಲೆಗೆ ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿ ನೋಡಿ ತಪ್ಪಿಸಿಕೊಂಡು ಓಡಿ ಹೋಗುವಾಗಿರುತ್ತಾನೆ.
ತಕ್ಷಣ ಸ್ಥಳದಲ್ಲಿದ್ದ ಮಂಜುನಾಥ ಇನ್ನಿತರ ಜನರು ಸೇರಿಕೊಂಡು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಆಶಾಳ ಶೀಲವನ್ನು ಶಂಕಿಸಿ ಅವಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ಚಳ್ಳಕೆರೆ ತನಿಖೆ ಪಿಎಸ್ ಐ ಶಿವರಾಜ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪತ್ನಿಮೇಲೆ ಪತಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಹಲ್ಲೆ ಮಾಡಿದ ಪತಿ ಪೋಲಿಶ್ ವಶಕ್ಕೆ
ಚಳ್ಳಕೆರೆನ.22 ಹೆಂಡತಿಯ ಮೇಲೆ ಗಂಡ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ಳಂ ಬೆಳಗ್ಗೆ ನಗರದ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ನಗರದ ಜನನಿಬಿಡ ಪ್ರದೇಶ ಹಾಗೂ ಅರಮನೆ ಹೋಟೆಲ್ ಮುಂಭಾಗದಲ್ಲಿ ಘಟನೆ ನಡರದಿದ್ದು ಹೆಂಡತಿ ಹೆಗ್ಗೇರೆ ಗ್ರಾಮದ ಆಶಾ(23) ಚನ್ನಮ್ಮನಾಗತಿಹಳ್ಳಿ ಗ್ರಾಮದ ಕುಮಾರಸ್ವಾಮಿ ಸಾರಿಗೆ ಬಸ್ ನಿಲ್ದಾಣದಲ್ಲಿ ಹೆಂಡತಿ ಬರುವುದನ್ನೇ ಕಾಯಿತ್ತಿದ್ದು ಅರಮನೆ ಹೋಟೆಲ್ ಬಳಿ ಬಂದ ತಕ್ಷಣ ಹೆಂಡತಿ ಮೇಲೆ ಮೊಚ್ಚಿನಿಂದ ಹಲ್ಲೆ ಮಾಡಿ ತಲೆ.ಕೈ. ಬೆರಳು ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಶಾಳನ್ನು ಪೋಲಿಸರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮಚ್ಚಿನಿಂದ ಹಲ್ಲೆ ಮಾಡಿ ಪತಿ ಕುಮಾರಸ್ಬಾಮಿಯನ್ನು ಡಿ ವೈಎಸ್ಪಿ ರಾಜಣ್ಣ.ಪಿಐ ದೇಸಾಯಿ ಘಟನೆ ಬಗ್ಗೆ ತನಿಖೆಕೊಂಡಿದ್ದಾರೆ.



