ಕ್ರೈಂ

ಟಿ ಎ ಟಿ ಟ್ಯಾಕೀಸ್ ಹಿಂಭಾದ “ಎ” ಅಂಗನವಾಡಿ ಕೇಂದ್ರದಲ್ಲಿ ಕಳವು.


ಚಳ್ಳಕೆರೆ ಜು.,24. ಅಂಗನವಾಡಿ ಕೇಂದ್ರದ ಬೀಗ ಮುರಿದು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಚಳ್ಳಕೆರೆ ನಗರದ ಟಿ.ಎ ಟಿ ಟಾಕೀಸ್ ಹಿಂಭಾದ ಎ. ಅಂಗನವಾಡಿ ಕೇಂದ್ರದ ಬೀಗ ಮುರಿದು ಕುಕ್ಕರ್.ಪಾತ್ರೆ. ಬಕೇಟ್ ಸೇರಿದಂತೆ ಅಡುಗೆ ಮಾಡುವ ಸಾಮಾಗ್ರಿಗಳನ್ನು ಕಳವು ಮಾಡಿದ್ದು ಒಂದೇ ಸ್ಥಳದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿದ್ದು ಮತ್ತೊಂದು ಅಂಗನವಾಡಿ ಕೇಂದ್ರ ಬೀಗ ಒಡೆಯಲು ಮುಂದಾಗಿದ್ದು ಕಳವು ಪ್ರಕರಣ ವಿಫಲರಾಗಿದ್ದಾರೆ. ಎಂದಿನಂತೆ ಅಂಗನವಾಡಿ ಕೇಂದ್ರ ಶಿಕ್ಷಕಿ ಕರ್ತವ್ಯಕ್ಕೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ತಕ್ಷಣ ಇಲಾಖೆ ಅಧಿಕಾರಿ ಹಾಗೂ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶವಗಾರದ ಬಳಿ ವಿದ್ಯುತ್ ಸ್ಪರ್ಶದಿಂದ ಎರಡು ಎಮ್ಮಗಳು ಸಾವು.

ಚಳ್ಳಕೆರೆ ಜು.23. ವಿದ್ಯುತ್ ಸ್ಪರ್ಶದಿಂದ ಶವಗಾರದ ಆವರಣದಲ್ಲೇ ಎರಡು ಎಮ್ಮೆಗಳು ಮೃತ ಪಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಇದು ನಗರದ ಸಾರ್ವಜನಿಕ ಆಸ್ಪತ್ರೆ ಆವಣದಲ್ಲಿ ಎರಡು ಎಮ್ಮೆಗಳು ಮೇಯಲು ಹೋಗಿ ಶವಗಾರದ ಆವರದಲ್ಲಿ ಮೃತ ಪಟ್ಟಿರುವುದು ವಿದ್ಯುತ್ ಸ್ಪರ್ಶ ಹಾಗೂ ಆಸ್ಪತ್ರೆಯಲ್ಲಿ ತ್ಯಾಜ್ಯ ಸುರಿದಿರುವುದನ್ನು ತಿಂದು ಮೃತಪಟ್ಟಿರ ಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ನಗರದ ಹೊಸಬೇಡರಹಟ್ಟಿಯ ದೀವ್ಯ ಕೋಂ ಆತ್ಮಲಿಂಗ ಇವರಿಗೆ ಸೇರಿದ ಎರಡು ಎಮ್ಮೆಗಳು ಮೃತಪಟ್ಟಿದ್ದ ಒಂದು ಎಮ್ಮೆಗೆ 40 ಸಾವಿರ ರೂ ನಂತೆ ಒಟ್ಟು 80 ಸಾವಿರ ರೂಗಳು ಎಮ್ಮೆಗಳ ಮೃತದಿಂದ ನಷ್ಟವಾಗಿದೆ.
ಆಸ್ಪತ್ರೆಯ ಆವರಣದಲ್ಲಿರುವ ಶವಗಾರಕ್ಕೆ ಗೇಟು ಇಲ್ಲದೆ ಇರುವುದು ಜಾನುವಾರುಗಳು ಆಸ್ಪತ್ರೆಯ ;ತ್ಯಾಜ್ಯವನ್ನು ಶವಗಾರದ ಪಟ್ಟದಲ್ಲೇ ಸುರಿಯುತ್ತಿರುವುದಿಂದ ಅನೇಕ ಜಾನುವಾರುಗಳು ಮೇವನ್ನು ಹುಡುಕುತ್ತಾ ಹೋಗಿ ತ್ಯಾಜ್ಯ ತಿನ್ನುತ್ತಿವೆ ಹಾಗೆ ಶವಗಾರದ ಆವರಣದಲ್ಲಿ ವಿದ್ಯುತ್ ವೈರ್ ನೇತಾಡುತ್ತಿರುವುದನ್ನು ಎಮ್ಮಗಳು ಮುಟ್ಟಿರುವುದಕ್ಕೆ ಸ್ಥಳದಲ್ಲೇ ಮೃತ ಪಟ್ಟಿವೆ ಎನ್ನಲಾಗಿದೆ.
ಆಸ್ಪತ್ರೆ ಆವರಣದ ಶವಗಾರಕ್ಕೆ ಗೇಟು ಇಲ್ಲದೆ ಇರುವುದು ಶವಗಾರಕ್ಕೂ ಭದ್ರತೆಯಿಲ್ಲದಂಗಾಗಿದ್ದು. ಶವಗಾರದ ಮುಂಭಾಗದಲ್ಲಿ ಪ್ಲಾಸ್ಟಿಕ್ ನಂತ ತ್ಯಾಜ್ಯದ ರಾಸಿ ಬಿದ್ದಿದ್ದು ಮೃತ ಪಟ್ಟ ಎಮ್ಮೆಗಳೂ ಸಹ ತ್ಯಾಜ್ಯದ ಮೇಲೆ ಮೃತಪಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶವ ಪರೀಕ್ಷೆಗಾಗಿ ಎರಡು ಎಮ್ಮೆಗಳನ್ನು ಕೊಂಡಯ್ಯಲಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆ ಶವಗಾರ ಬಳಿ ತ್ಯಾಜ್ಯ ಸ್ವಚ್ಚತೆ ಹಾಗೂ ಶವಗಾರದ ಗೇಟ್ ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.

ವಿದ್ಯುತ್ ಅವಘಡದಿಂದ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲು.


ಶ್ರೀರಾಂಪುರ(ಹೊಸದುರ್ಗ) ಜು.19 ಹಸು ಮೇಯಿಸಲು ಹೋದ ವ್ಯಕ್ತಿ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು ಇದು ಹೊಸದುರ್ಗ ತಾ, ಮೆಂಗಸಂದ್ರ ಗ್ರಾಮದ ಕಾಲಭೈರವೇಶ್ವರ ಪೂಜಾರಿ ಶಿವಲಿಂಗಪ್ಪ ತಮ್ಮ ಹಸು ಮೆಯಿಸಲು ಹೋದ ಸಂದರ್ಭದಲ್ಲಿ,ಬಾಚವರ ಮಹೇಶ್ವರಪ್ಪ ಇವರ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ಮೈನ್ಸ್ ವೈರ್ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದ್ದು ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಚಿತ್ರಬರಹಗಾರನ ಮೇಲೆ ಮಾರಣಾಂತಿಕ ಹಲ್ಲೆ ಜಗಲೂರು ಠಾಣೆಯಲ್ಲಿ ಪ್ರಕರಣದಾಖಲು.

. ಮಾರಣಾಂತಿಕ ಹಲ್ಲೆ ಮಾಡಿದ ಸಿದ್ದನಗೌಡ
ಜಗಲೂರು ಜು.18 ಚಿತ್ರಬರಹಗಾರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಜಗಲೂರು ಠಾಣೆಯಲ್ಲಿ ಪ್ರಕಣ ದಾಖಲು. ಹೌದು ಇದು ಜಗಲೂರು ನಗರದ ಹರೀಶ್‌.ಟಿ ಚಿತ್ರ ಬರಹಗಾರ ಬುಧವಾರ ಬೆಳಗ್ಗೆ 9:45ರಲ್ಲಿ ಜಗಳೂರು ಟೌನ್‌ನಿನ ಹಳೇ ಬಸ್‌ ನಿಲ್ದಾಣದಿಂದ,
ಜಮ್ಮಾಪುರ ಗ್ರಾಮಕ್ಕೆ ನೇರಗಾ ಕೆಲಸ ಬೋಡ್ ಬರೆಯಲು ಬೈಕ್‌ನಲ್ಲಿ ಹೋಗುವಾಗ ಅದೇ
ಸಮಯಕ್ಕೆ ಮರೇನಹಳ್ಳಿ ರಸ್ತೆಯಲ್ಲಿರುವ ಶಿವಪ್ರಕಾಶ ಡಾಕ್ಟರ್ ಮನೆ ಮುಂದೆ ಒಂದು ಟೀ ಅಂಗಡಿ ಬಳಿ ಗೌರಿಪುರ ಗ್ರಾಮದ ವೈ.ಪಿ.ಸಿದ್ದನಗೌಡ ಮದುವೆಯಾಗಿದ್ದು, ಸಿದ್ದನಗೌಡರ ದೊಡ್ಡಪ್ಪನ ಮಗಳನ್ನೇ ನಾನು ಮದುವೆಯಾಗಿದ್ದು, ನನ್ನ ಹೆಂಡತಿಯ
ಅಣ್ಣಂದಿರಿಗೆ ಮತ್ತು ಸಿದ್ಧನಗೌಡರಿಗೆ ಗಲಾಟೆಯಾಗಿತ್ತು. ಅದರಲ್ಲಿ ನನ್ನ ಕೈವಾಡ ಇದೆ ಎಂದು ಅನುಮಾನಿಸಿ
ಏಕಾಏಕಿ ನನ್ನನ್ನು ತಡೆದು ನಾನು ಯಾರೆಂದೂ ಹಿಂದಿರುಗಿ ನೋಡಿದಾಗ ನನಗೆ ಅವ್ಯಚ್ಯ ಶಬ್ದಗಳಿಂದ ನಿಂದಿಸಿ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಮೇಲೆ ಬೀಸಿರುತ್ತಾನೆ.
ಆದರೆ, ನನಗೂ ಮತ್ತು ಸಿದ್ದನಗೌಡನೆ “ಸಹೋದರರ ಗಲಾಟೆಗೆ ಸಂಬಂಧವಿರುವುದಿಲ್ಲ. ಹಾಗೂ ನಾನು
ಇಲ್ಲಿಕೆಲಸವನ್ನು ಬಿಟ್ಟು ನನ್ನ ಹೆಂಡತಿಯ ಊರಾದ ಗೌರೀಪುರಕ್ಕೆ ಹೋಗದೇ
ವರ್ಷಗಳಾಗಿರುತ್ತವೆ. ಆಗ ಅಲ್ಲಿಯೇ ಇದ್ದ ಜನರುಗಳು ಸಿದ್ದನಗೌಡನಿಂದ ಬಿಡಿಸಿ ಪಾರು ಮಾಡಿರುತ್ತಾರೆ.
ಅಲ್ಲಿಗೂ ನನ್ನ ಭುಜಕ್ಕೆ ಏಟು ಬಿದ್ದು ನೋವಾಗಿರುತ್ತದೆ. ನಾನು ಸ್ವಲ್ಪದರಲ್ಲೇ ಪಾರಾಗಿರುತ್ತೇನೆ.
ಹೆಚ್ಚುಕಮ್ಮಿಯಾಗಿದ್ದರೂ ನನ್ನ ಜೀವ ಹೋಗುತ್ತಿತ್ತು. ಈತನು ನನ್ನನ್ನು ಉದ್ದೇಶಪೂರ್ವಕವಾಗಿ ಕೊಲೆಗೆ
ಸಂಚು ರೂಪಿಸಿ, ನನ್ನನ್ನು ಕೊಲೆ ಮಾಡಲು ಯತ್ನಿಸಿರುತ್ತಾನೆ. ಆದ್ದರಿಂದ ನನಗೆ ಜೀವ ಭಯವಿರುತ್ತದೆ.
ವೈ.ಪಿ.ಸಿದ್ದನಗೌಡನಿಂದ ನನಗೆ ಪ್ರಾಣ ಬೆದರಿಕೆ ನಿನ್ನನ್ನು
ಜೀವಸಹಿತವಾಗಿ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ನನ್ನ ಕುಟುಂಬಕ್ಕೆ ಈತನಿಂದ ಜೀವ
ಭಯವಿದೆ. ನಂತರ ನನ್ನನ್ನು ಅಲ್ಲಿದ್ದ ಜನರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಿದ್ದನಗೌಡ
ನೀನು ಜನರಿಂದ ಬಚಾವ್ ಆಗಿದ್ದೀಯಾ, ಇಲ್ಲದಿದ್ದರೇ ನಿನ್ನ ಜೀವ ಇವತ್ತು ಹೋಗುತ್ತಿತ್ತು. ಸರಿಯಾಗಿ
ತಿಳಿದುಕೋ ಎಂದು ಹೇಳಿರುತ್ತಾನೆ.
ಆದ್ದರಿಂದ ನನ್ನನ್ನು ಕೊಲೆ ಮಾಡಲು ಯತ್ನಿಸಿದ ಸಿದ್ದನಗೌಡ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವ ಜತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ರಕ್ಷಣೆ ನೀಡಬೇಕೆಂದು ಜಗಲೂರು ಠಾಣೆಯಲ್ಲಿ ದೂರು ನೀಡಲಾಗಿದೆ. ಜಗಲೂರು ಪೋಲಿಸರು ದೂರು ಸ್ವೀಕರಿಸಿ ವಿವಿಧ ಸೆಕ್ಷನ್ ಅಡಿಯಲ್ಲಿ ಬುಧವಾರ ರಾತ್ರಿ 9-30 ರ ಸಮಯದಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ ಎನ್ನಲಾಗಿದೆ.

ನಿವೃತ್ತ ಕೆಎಸ್ ಆರ್ ಪೇದೆಯ ಬ್ಯಾಗ್ ನಲ್ಲಿದ್ದ 25 ಸಾವಿರ ರೂ ಎಗರಿಸಿದ ಕಳ್ಳರು.

ಚಳ್ಳಕೆರೆ ಜನಧ್ವನಿ ವಾರ್ತೆ ಜು.12 ಬ್ಯಾಂಕಿನಿಂದ ವೇತನ ಬಿಡಿಸಿಕೊಂಡು ಬ್ಯಾಂಗ್ ನಲ್ಲಿಟ್ಟಿದ ಹಣವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ನಗರದ ಕೆರೆನರಾ ಬ್ಯಾಂಕಿನಲ್ಲಿ ಕೊರ್ಲಕುಂಟೆ ಗ್ರಾಮದ ನಿವೃತ್ತ ಕೆಆರ್ ಆರ್ ಪೇದೆ ಎ.ಕೆ.ಚನ್ನಪ್ಪ ಕೆನರಾ ಬ್ಯಾಂಕಿನಲ್ಲಿ 35 ಸಾವಿರ ರೂ ವೇತನ ಬಿಡಿಸಿಕೊಂಡು 10 ಸಾವಿರ ರೂ ಚೆಡ್ಡಿ ಜೇಬಿನಲ್ಲಿಟ್ಟುಕೊಂಡು 25 ಸಾವಿರ ರೂ ಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡು ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಸಾರಿಗೆ ಬಸ್ ನಿಲ್ದಾಣಕ್ಕೆ ಕೊರ್ಲಕುಂಟೆ ಗ್ರಾಮಕ್ಕೆ ಹೋಗಲು ಬಂದಿದ್ದಾರೆ.
ಬಸ್ ವಿಳಂಭವಾಗಿರುವುದಿರಿಂದ ಸಮೀಪದಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಎಗ್ ರೈಸ್ ತಿನ್ನಲು ಹೋದಾಗಿದ್ದಾರೆ ತಿಂದು ಕೈ ತೊಳೆಯುವಷ್ಟರಲ್ಲಿ ಹಣವಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಆರೋಗ್ಯ ಸರಿಯಿಲ್ಲದೆ ಮಹಿಳೆಯೊಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಕಳಿಸ ಬೇಕಾದ ಹಣವನ್ನು ಕಳ್ಳರು ಕಳುವು ಮಾಡಿದ್ದು ನಗರದಲ್ಲಿಪರಿಚಯಸ್ಥರ ಬಳಿ ಹೋಗಿ ಹಣ ಕಳವಾಗಿದೆ ಮುಂದಿನ ತಿಂಗಳು ಸಂಬಳ ಬಂದಾಗಿ ಬಿಡಿಸಿಕೊಡುತ್ತೇನೆ ಯಾರ ಬಳಿಯಾದರೂ ಬಡ್ಡಿಗೆ ಕೊಡಿಸು ನಾನು ಕೊಡುತ್ತೇನೆ ಹಣ ಕಳೆದುಕೊಂಡಿರುವ ವಿಷಯ ಮನೆಯಲ್ಲಿ ಗೊತ್ತಾದರೆ ನೊಂದು ಕೊಳ್ಳುತ್ತಾರೆ ಎಂದು ಅಂಗಲಾಚಿದ್ದಾರೆ ಆದರೂ ಹಣ ಸಾಲ ದೊರೆಯದೆ ಇರುವುದರಿಂದ ನೊಂದುಕೊಂಡು ಹೋಗಿದ್ದಾರೆ.

ನಗರದ ಚಿತ್ರದುರ್ಗ ರಸ್ತೆಯ ಕೆನರಾ ಬ್ಯಾಂಕ್, ಎಸ್ ಬಿ ಐ ಸೇರಿದಂತೆ ಉಡಪಿ ಗಾರ್ಡನ್ ಹೋಟೆಲ್ ನಿಂದ ಕರ್ನಾಟಕ ಬ್ಯಾಂಕ್ ಎಟಿಎಂ ನಿಂದ ಪ್ರವಾಸಿ ಮಂದಿರದವರೆಗೂ ವಿವಿಧ ಬ್ಯಾಂಕ್ ಗಳಿದ್ದು ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳಿರುವುದರಿಂದ ಬ್ಯಾಂಕ್ ಎಟಿಎಂ ಅಥವಾ ಬ್ಯಾಂಕ್ ನಲ್ಲಿ ಯಾರು ಹಣ ಬಿಡಿಸುತ್ತಾರೆ ಎಂದು ಪೆಟ್ಟಿ ಅಂಗಡಿಯ ಹೋಟೆಲ್ ನಲ್ಲಿ ಟೀ ಅಥವಾ ಸೀಗೇಟ್ ಸೇದು ನೆಪದಲ್ಲಿ ಕುಳಿತು ಹಣ ಬಿಡಿಸಿಕೊಂಡು ಹೋದವರ ಹಿಂಬಾಲಿಸಿ ಹಣ ಕದಿಯುತ್ತಾರೆ ಎಂದು ಈಗಾಗಲೆ ಹಣ ಕಳೆದು ಕೊಂಡ ಸಾಕಷ್ಟು ಉದಾಹರಣೆಗಳಿವೆ. ಹಣ ಕದಿಯುವ ಖದೀಮರಿಗೆ ಬ್ಯಾಂಕ್ ಗಳ ಮುಂದಿರುವ ಪೆಟ್ಟಿಗೆ ಅಂಗಡಿಗಳು ವರದಾನವಾಗಿವೆ ಎಂಬುದು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವೇ ಕಾದು ನೋಡ ಬೇಕಿದೆ.

ಬಾಲೇನಹಳ್ಳಿ ಸಮೀಪ ವೃದ್ದೆಯ ಕೊರಳಲ್ಲಿದ್ದ ಚಿನ್ನದ ಸರ ಎಗರಿಸಿದ ಖದೀಮ.


ಚಳ್ಳಕೆರೆ ಜು.10 ತೋಟಕ್ಕೆ ಹೋಗಿ ಮನೆಗೆ ಮರಳಿ ಹೋಗುವಾಗ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಖದೀಮ. ಹೌದು ಇದು ಚಳ್ಳಕೆರೆ ತಾಲೂಕೀನ ಬಾಲೇನಹಳ್ಳಿ ಗ್ರಾಮದ ಬಸಮ್ಮ(70) ಜಮೀನಿಗೆ ಹೋಗಿ ಮನೆಗೆ ಮರಳಿ ಹೋಗುವಾಗ ಬೈಕ್ ನಲ್ಲಿ ಬಂದ ವ್ಯಕ್ತಿ ಅಡ್ಡಗಟ್ಟಿ ಕೊರಳಲ್ಲಿ 4 ತೊಲ ಸುಮಾರು ನಾಲ್ಕು ಲಕ್ಷ ರೂ ಬೆಲೆ ಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದು ಪೋಲಿಸ್ ಠಾಣೆ ಮಾಹಿತಿ ನೀಡಿದ ಮೇರೆಗೆ ಪಿ ಐ ದೇಸಾಯಿ. ಪಿಎಸ್ ಐ ಶಿವರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು ಇದು ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.

ಪಿಐ ದೇಸಾಯಿ ಮಾತನಾಡಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಮೈಮೇಲೆ ಹಾಕಿ ಕೊಂಡು ಒಂಟಿಯಾಗಿ ಓಡಾಡ ಬಾರದು ಅಪರಿತರು ವಿಳಾಸ ಅಥವಾ ಕುಡಿಯುವ ನೀರು ಕೆಳುವ ನೆಪದಲ್ಲಿ ಮೈಮೇಲಿನ ಒಡವಗಳನ್ನು ಕಿತ್ತು ಪರಾರಿಯಗುತ್ತಾರೆ ನಿಮ್ಮ ಗ್ರಾಮ ಅಥವಾ ಬಸ್ ನಿಲ್ದಾಣ ನಿಮ್ಮ ಸುತ್ತ ಮುತ್ತ ಅಪರಿಚಿತರು ಓಡಾಡುವುದನ್ನು ಕಂಡರೆ ತಕ್ಷಣ 112 ಅಥವಾ ಸಮೀಪದ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಮನೆಯಲ್ಲಿ ಬೆಲೆ ಬಾಳುವ ಒಡವೆ ಹಣವನ್ನು ಇಟ್ಟು ಬೇರೆ ಊರಿಗೆ ಹೋಗಬಾರದ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಶಿಕ್ಷಕಿ ಮನೆಯಲ್ಲಿದ್ದ ಬಂಗಾರ ಹಣ ದೋಚಿದ ಕಳ್ಳರು

ಹಿರಿಯೂರು ಜು.10 ಕಳ್ಳರ ಕೈ ಚಳಕ ಪೋಲಿಸರ ಹಾಗೂ ಸಾರ್ವಜನಿಕರಿ ನಿದ್ದೆಗೆಡಿಸುವಂತೆ ಮಾಡಿದೆ. ಹೌದು ಇದು ತಿಥಿ ಕಾರ್ಯಕ್ಕೆ ಕುಟುಂಬ ಸಮೇತ ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿದ ಘಟನೆ ಹಿರಿಯೂರು ನಗರದ ಅವದಾನಿ ಬಡಾವಣೆಯಲ್ಲಿ ನಡೆದಿದೆ. ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಶಿಕಲಾ ಅವರು ಸಂಬಂಧಿಕರೊಬ್ಬರ ಮನೆಯಲ್ಲಿನ ತಿಥಿ ಕಾರ್ಯಕ್ಕೆ ಕುಟುಂಬ ಸಮೇತ ತೆರಳಿ ಕೊಳ್ಳೇಗಾಲಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದವೇಳೆ ಮನೆ ಬೀಗ ಮುರಿದು 24.30 ಲಕ್ಷ ಮೌಲ್ಯದ ಒಡವೆ ಹಾಗೂ 25,ಸಾವಿರ ರೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಡಿವೈಎಸ್‌ಪಿ ಚೈತ್ರಾ, ಇನ್‌ಸ್ಪೆಕ್ಟರ್‌ ರಾಘವೇಂದ್ರ ಕಾಂಡಕಿ, ಎಸ್ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

52ಲಕ್ಷರೂ ಮೌಲ್ಯ 60 ಕಡಲೆ ಕಾಳುಚೀಲ ಕದ್ದ ಕಳ್ಳರನ್ನು ಪತ್ತೆಮಾಡಿ ಜೈಲಿಗೆ ಕಳಿಸಿದ ಹಿರಿಯೂರು ಪೋಲಿಸರು.


ಹಿರಿಯೂರು ಜು.80.05.07.2024 ರಂದು ರಾತ್ರಿ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ತಾಹಾ
ಪ್ಯಾಲೇಸ್ ಪಕ್ಕದಲ್ಲಿರುವ ಲಕ್ಷ್ಮೀಚಂದ್ ರವರಿಗೆ ಸೇರಿದ ಗೋಡಾನನ್ನು ಸಾಗರ್ ಎಂಬುವವರು ಬಾಡಿಗೆ ಪಡೆದು
ಸದರಿ ಗೋಡಾನಲ್ಲಿ ಶೇಖರಿಸಿಟ್ಟಿದ್ದ ಸುಮಾರು 2,40,000 ರೂಪಾಯಿ ಬೆಲೆ ಬಾಳುವ ತಲಾ 60 ಕೆ.ಜಿ.
ತೂಕವಿರುವ 60 ಕಡಲೆ ಕಾಳು ಚೀಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ
ಸಾಗರ್ ತಂದೆ ಜಯಕುಮಾರ್ ರವರು ನೀಡಿದ ದೂರಿನ ಮೇರೆಗೆ ಹಿರಿಯೂರು ನಗರ ಪೊಲೀಸ್‌ ಠಾಣೆಯಲ್ಲಿ
ಮೊ.ನಂ.174/2024 ಕಲಂ.305,331(3),331(4) ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಪೊಲೀಸ್
ಅಧೀಕ್ಷಕರ ಮಾರ್ಗದರ್ಶನದಲ್ಲಿ ಶ್ರೀ.ರಾಘವೇಂದ್ರ ಕಾಂಡಿಕೆ, ಪಿ.ಐ. ಹಿರಿಯೂರು ನಗರ ಮತ್ತು ಸಿಬ್ಬಂದಿಯವರನ್ನು
ಒಳಗೊಂಡ ತಂಡವು ದಿನಾಂಕ:06.07.2024 ರಂದು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸುವ ಸಮಯದಲ್ಲಿ ಎಂ
ಆರೋಪಿಯಾದ ಬಸವರಾಜ್‌ರವರ ಮೇಲೆ ಅನುಮಾನ ಬಂದಿದ್ದರಿಂದ ಸದರಿ ಅರೋಪಿತನನ್ನು ಠಾಣೆಗೆ ಕರೆಯಿಸಿ
ವಿಚಾರಣೆಗೊಳಪಡಿಸಿದಾಗ ತಾನು ತುಂಬಾ ಸಾಲವನ್ನು ಮಾಡಿಕೊಂಡಿದ್ದು, ಸಾಲದ ಕಂತುಗಳನ್ನು ಕಟ್ಟುವ
ಸಲುವಾಗಿ ತನ್ನ ಸ್ನೇಹಿತನಾದ ಮಂಜುನಾಥ.ಸಿ. ಸಹಾಯದಿಂದ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದ 60 ಕಡಲೆ
ಚೀಲಗಳನ್ನು ಕದ್ದು ಹಿರಿಯೂರು ಟೌನ್ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರಸ್ವಾಮಿ ಟ್ರೇಡರ್ಸ್‌ಗೆ ಮಾರಾಟ
ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ನಂತರ ಎ2 ಆರೋಪಿಯಾದ ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರ
ಮಾಡಲಾಗಿ ಎ! ಜೊತೆ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಸದರಿ ಆರೋಪಿತರ ವಿವರ ಈ
ಕೆಳಕ೦ಡಂತೆ ಇರುತ್ತದೆ.
1) ಎ-1 ಬಸವರಾಜ್ ತಂದೆ ಕರಿಯಣ್ಣ @ ಕರಿಯಪ್ಪ, ಸುಮಾರು 28 ವರ್ಷ ಯಲ್ಲದಕೆರೆ ಗ್ರಾಮ, ಹಾಲಿ ವಾಸ
ಮಲ್ಲೇಶ್ವರ ಬಡಾವಣೆ, ಕುವೆಂಪು ನಗರ, ಹಿರಿಯೂರು ಟೌನ್
2) ಎ-2, ಮಂಜುನಾಥ.ಸಿ. ತಂದೆ ಚಂದ್ರಣ್ಣ, ಸುಮಾರು 33 ವರ್ಷ, ವೇದಾವತಿ ನಗರ, ಹಿರಿಯೂರು ಟೌನ್
ಆರೋಪಿತರ ಕಡೆಯಿಂದ ಸುಮಾರು 2,52,000 ರೂಪಾಯಿ ಮೌಲ್ಯದ 60 ಕೆ.ಜಿ. ತೂಕದ 60 ಕಡಲೆ
ಕಾಳಿನ ಚೀಲಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಸುಜುಕಿ
ಕಂಪೆನಿಯ ಗ್ರಾಂಡ್ ವಿಟೆರಾ ಕಾರು ಹಾಗೂ ಒಂದು ಮಹೇಂದ್ರ ಕಂಪೆನಿಯ ಟ್ರಾಕ್ಟರನ್ನು ವಶಪಡಿಸಿಕೊಳ್ಳಲಾಗಿದ್ದು
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಸದರಿ ಪ್ರಕರಣವು ವರದಿಯಾದ 24 ಗಂಟೆಯೊಳಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು
ಮತ್ತು ಮಾಲನ್ನು ವಶಪಡಿಸಿಕೊಂಡ ಹಿರಿಯೂರು ನಗರ ಪೊಲೀಸ್ ಠಾಣೆಯ ಪಿ.ಐ. ಶ್ರೀ.ರಾಘವೇಂದ್ರ ಕಾಂಡಿಕೆ,
ಹಾಗೂ ಸಿಬ್ಬಂದಿಯವರಾದ ದೇವೇಂದ್ರಪ್ಪ, ಸಿದ್ದಲಿಂಗೇಶ್ವರ, ಸುದರ್ಶನಗೌಡ, ನಾಗಣ್ಣ, ಸುರೇಶ್ ನಾಯ್ಕ, ಜಾಫರ್
ಸಾದಿಕ್ ಉಲ್ಲಾ ರವರುಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

ನೇಣು ಬೀಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ.

ಮೊಳಕಾಲ್ಮೂರು: ತಾಲೂಕಿನ ಮರ್ಲಹಳ್ಳಿ ಗ್ರಾಮದ ಹೊರವಲಯದ ದುರ್ಗಮ್ಮ ದೇವಸ್ಥಾನದ ಬಳಿ ಮಂಗಳವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.

ಇನ್ನು ಮೃತ ವ್ಯಕ್ತಿಯನ್ನು ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಹೇಮಂತ್ (24) ತಂದೆ ಸತ್ಯಪ್ಪ ಎಂದು ಗುರುತಿಸಲಾಗಿದ್ದು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದ್ದು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್ ಅರೆಸ್ಟ್

ಬೆಂಗಳೂರು, ಜೂನ್.11: ಆಪ್ತೆ ಪವಿತ್ರಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರನ್ನು ಕೊಲೆ (Murder) ಮಾಡಲು ಸುಪಾರಿ ನೀಡಿದ್ದರು ಎಂಬ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ (Darshan Thoogudeepa) ಅವರನ್ನು ಅರೆಸ್ಟ್ ಮಾಡಲಾಗಿದೆ. ವಿಜಯನಗರ ಎಸಿಪಿ ಚಂದನ್​ ತಂಡ ಮೈಸೂರಿನ ಫಾರ್ಮ್​​ಹೌಸ್​ನಲ್ಲಿ ನಟ ದರ್ಶನ್​ ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ಬೆಂಗಳೂರಿನ ನಟ ದರ್ಶನ್​ ಮನೆ ಬಳಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ದರ್ಶನ್​ ಮನೆ ಬಳಿ ಬ್ಯಾರಿಕೇಡ್ ಹಾಕಿ 20ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಫ್ಯಾನ್ಸ್​ಗಳಿಂದ ಏನಾದ್ರು ತೊಂದರೆ ಆಗಬಹುದು ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಸದ್ಯ ದರ್ಶನ್ ಮನೆ ಬಳಿ ಯಾರು ಕೂಡ ಇಲ್ಲ ಎಂದು ತಿಳಿದುಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ. ಈ ಹಿನ್ನೆಲೆ ನಟ ದರ್ಶನ್, ಚಿತ್ರದುರ್ಗದ ದರ್ಶನ್ ಫ್ಯಾನ್ ಸಂಘಟನೆ ಅಧ್ಯಕ್ಷನಿಗೆ ಫೋನ್ ಕಾಲ್ ಮಾಡಿ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನ ಕರೆತರುವಂತೆ ಹೇಳಿದ್ದರು.

ಬೆಂಗಳೂರಿಗೆ ರೇಣುಕಾಸ್ವಾಮಿ ಕರೆದುಕೊಂಡು ಬಂದು ವಿನಯ್ ಎನ್ನುವವರಿಗೆ ಸೇರಿದ ಶೆಡ್​ನಲ್ಲಿ ಇರಿಸಿದ್ದರು. ರೇಣುಕಾಸ್ವಾಮಿಗೆ ದರ್ಶನ್ ಸೇರಿ 4 ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಬಳಿಕ ರೇಣುಕಾಸ್ವಾಮಿಗೆ ಬಲವಾದ ಆಯುಧದಿಂದ ಶೆಡ್​ನಲ್ಲೇ ಹಲ್ಲೆ ಮಾಡಿ ಜೂನ್​ 8ರ ಶನಿವಾರ ರಾತ್ರಿ ಕೊಲೆ ಮಾಡಲಾಗಿದೆ. ನಂತರ ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಮೃತದೇಹ ಎಸೆಯಲಾಗಿದೆ. ಭಾನುವಾರ ಬೆಳಗಿನ ಜಾವ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು.

ರೇಣುಕಾಸ್ವಾಮಿ ಶವವನ್ನ ನಾಯಿಗಳು ಎಳೆಯುತ್ತಿದ್ದಾಗ ಮೃತದೇಹ ಪತ್ತೆಯಾಗಿತ್ತು. ಸದ್ಯ ಕಾಮಾಕ್ಷಿ ಪಾಳ್ಯ ಸ್ಟೇಷನ್​ಗೆ ರೇಣುಕಾಸ್ವಾಮಿ ಪೋಷಕರು ಆಗಮಿಸಿದ್ದು ಕಣ್ಣೀರಿಟ್ಟಿದ್ದಾರೆ.

You cannot copy content of this page