ಕಳಪೆ ಬಿತ್ತನೆ ಬೀಜ ವಿತರಣೆ ರೈತ ಸಂಕಷ್ಟಕ್ಕೆ-ಪರಿಹಾರಕ್ಕಾಗಿ ರೈತ ಆಗ್ರಹ.

by | 13/09/23 | ಕೃಷಿ

ಚಳ್ಳಕೆರೆ ಜನಧ್ವನಿ ವಾರ್ತೆ ಸೆ.13. ಮುಂಗಾರಿನಲ್ಲಿ ಬಿತ್ತನೆ ಮಾಡಿದ‌ಶೇಂಗಾ ಬೆಳೆಗಳು ನೆಲಕಚ್ಚಿ ಸಂಕಷ್ಟದಲ್ಲಿರುವ ರೈತರಿಗೆ ಕಳಪೆ ಬಿತ್ತನೆ ಬೀಜದ ಹಾವಳಿಯಿಂರ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೌದು ಇದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ರೈತ ರೇವಣ್ಣ ತನ್ನ ಮೂರು ಎಕರೆ ಪ್ರದೇಶದಲ್ಲಿ ಸೋಮಗುದ್ದು ಗ್ರಾಮದ ಶ್ರೀಗೌರವಕಾಶಿ ಉದ್ಪಾಕರ ಸಂಘದಲ್ಲಿ ಬೀಜ ಒಳೆಯ ಇಳುವರಿ ನೀಡುತ್ತದೆ ಎಂದು ನಂಬಿಸಿ ವಿತರಣೆ ಮಾಡಿದ್ದಾರೆ

. ಮುಸಕಿನ ಜೋಳ ಬಿತ್ತನೆ ಮಾಡಿ ನಾಲ್ಕು ತಿಂಗಳಿಗೆ ಬೆಳೆ ಕಟಾವಿಗೆ ಬರುತ್ತದೆ ಆದರೆ ಬಿತ್ತನೆ ಮಾಡಿ ಮೂರು ತಿಂಗಳಾದರು ಮುಸುಕಿನ ಜೋಳ ಎತ್ತರಕ್ಕೆ ಬೆಳೆಯದೆ ಮುಸುಕಿನ ಜೋಳದ ತೆನೆ ಚಿಕ್ಕದಾಗಿ ಸರಿಯಾಗಿ ಕಾಳು ಕಟ್ಟದೆ ಅವದಿಗೂ ಮುನ್ನವೇ ಜೋಳ ಒಣಗಲು ಮುಂದಾಗಿದ್ದು ಬೀಜ ಗೊಬ್ಬರ ಸೇರಿ55ಸಾವಿರ ರೂ ಖರ್ಚು ಮಾಡಿ ಈಗಿರುವ ಮಾರುಕಟ್ಟೆಯಲ್ಲಿ ಮುಸುಕಿನ ಜೋಳ ಸರಿಯಾಗಿ ಇಳುವರಿ ಬಂದಿದ್ದರೆ ಸುಮಾರು ಒಂದು ಲಕ್ಷಕ್ಕೂ ರೂ ಹೆಚ್ಚು ಹಣ ಕೈ ಸೇರುವ ನಿರೀಕ್ಷೆ ಹೊಂದಿದ್ದೆ ಆದರೆ ಅಂಗಡಿವರು ವಿತರಣೆ ಮಾಡಿದ ಬಿತ್ತನೆ ಬೀಜ ಕಳಪೆಯಿಂದ ಬೀಜ ಗೊಬ್ಬ. ಕೂಲಿ
ಕೃಷಿ ಚಟುವಟಿಕೆಗೆ ಸುಮಾರು 55 ಸಾವಿರ ರೂ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ.

ಈಗ ನಷ್ಟದಿಂದ ಸಾಲದ ಸುಳಿಗೆ ಸಿಲುಕುವಂತಾಗಿದ್ದು ಕಳಪೆ ಬೀಜದ ಬಗ್ಗೆ ವಿತರಕರ ಗಮನ ಸೆಳೆದಾಗ ಮೂರು ಬಾರಿ ಬಂದು ಬೆಳೆ ವೀಕ್ಷಣೆ ಮಾಡಿ ಹೋದರೂ ಯಾವುದೇ ಪರಿಹಾರ ನೀಡಿಲ್ಲ ಹಲವು ಬಾರಿ ದೂರವಾಣಿ ಮೂಲಕ ಗಮನಸೆಳೆದರೂ ನಮ್ಮ ಮನವಿ ಅವರ ಕಿವಿಗೆ ಬೀಳದಂತಾಗಿದೆ ಇದರಿಂದ ಸಂಪೂರ್ಣ ಬೆಳೆನಷ್ಟ ಅನುಭವಿಸುವಂತಾಗಿದೆ ಕಳಪೆ ಗುಣಮಟ್ಟದ ಮುಸುಕಿನ ಜೋಳದ ಬೀಜವನ್ನು ಬಿತ್ತಿದ್ದ ರೈತನ ಬದುಕು ಈಗ ಬೀದಿಗೆ ಬರುವಂತಾಗಿದೆ.


ಸಕಾಲದಲ್ಲಿ ಮುಂಗಾರು ಮಳೆಯಾಗದ್ದರಿಂದ ನೀರಾವರಿ ಜಮೀನುಳ್ಳ ರೈತ ಮುಸುಕಿನ ಜೋಳ ಬೆಳೆದಿದ್ದರು ಕಳಪೆ ಬಿತ್ತನೆ ಬೀಜ ಮಾರಾಟದಿಂದ ರೈತರು ಕಂಗಾಲಾಗಿದ್ದಾರೆ. ಇದರಿಂದ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಈಗ ರೈತರಲ್ಲಿ ಕಾಡಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಕಾಗಳು ಕಳಪೆ ಬಿತ್ತನೆ ಬೀಜ ಖರೀದಿಸಿ ನಷ್ಟ ಅನುಭವಿಸಿದ ರೈತನಿಗೆ ಪರಿಹಾರಕೊಡಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *