ಚಿತ್ರದುರ್ಗ ಫೆ.15 :
ಇಲಿ ಜ್ವರಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. ಇದು ಹಬ್ಬದಂತೆ ತಡೆಯಲು ಸುತ್ತಮುತ್ತಲಿನ ಪರಿಸರದ ನೈರ್ಮಲ್ಯ ಅತಿ ಅಗತ್ಯವಾಗಿದೆ ಎಂದು ಹಿರಿಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಆಂಜನೇಯ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಐಯ್ಯನಹಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆಯ ಎನ್.ಹೆಚ್.ಎಂ ಯೋಜನೆ ಅಡಿಯಲ್ಲಿ ಇಲಿ ಜ್ವರ ಕುರಿತು ಸಮರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.
ಇಲಿಜ್ವರ ಹರಡುವುದನ್ನು ಹಾಗೂ ನಿಯಂತ್ರಣದಲ್ಲಿ ಇಡಲು ಈ ಜ್ವರದಿಂದ ಬಳಲುತ್ತಿರುವ ಪ್ರಾಣಿಗಳ ಸಂಪರ್ಕಕ್ಕೆ ಮಾನವರು ಬರದಂತೆ ತಡೆಯುವುದು ಮುಖ್ಯವಾಗಿದೆ. ಸಾಕು ಪ್ರಾಣಿ ಅಥವಾ ಇಲಿ ಹಾಗೂ ಇಲಿಯ ಜಾತಿಗೆ ಸೇರಿದ ಪ್ರಾಣಿಗಳ ಸ್ಥಳಗಳನ್ನು ಸ್ವಚ್ಛಗೊಳಿಸುವಾಗ, ಕೈ ಮತ್ತು ಬಾಯಿಯ ನಡುವಿನ ಸಂಪರ್ಕವನ್ನು ತಪ್ಪಿಸಬೇಕು. ಸ್ವಚ್ಛತೆಯ ತರುವಾಯ ಕೈ ಮತ್ತು ಮುಖವನ್ನು ತಪ್ಪದೆ ಸೋಪಿನಿಂದ ತೊಳೆಯಬೇಕು. ಇಲಿ, ಅಳಿಲು ಸೇರಿದಂತೆ ಇತರೆ ಇಲಿಜಾತಿಗೆ ಸೇರಿದ ಪ್ರಾಣಿಗಳಿಂದ ದೇಹದ ಮೇಲೆ ಗೀರು ಉಂಟಾದರೆ ನಂಜುನಿರೋಧಕ ಲೇಪಿಸಿ ಸ್ವಚ್ಛಗೊಳಿಸಬೇಕು. ಗೀರಿನಿಂದ ಉಂಟಾಗುವ ಕೀಮೋಪೆÇ್ರಫಿಲ್ಯಾಕ್ಸಿಸ್ನ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಜ್ವರ ಹಬ್ಬುವುದನ್ನು ತಡೆಯಲು ಮನುಷ್ಯರೊಂದಿಗೆ ಸಾಕು ಪ್ರಾಣಿಗಳ ಸಂಪರ್ಕವನ್ನು ಕಡಿಮೆ ಮಾಡಬೇಕು. ಪ್ರಾಣಿ ನಿರ್ವಾಹಕರು, ಪ್ರಯೋಗಾಲಯದ ಕೆಲಸಗಾರರು ಮತ್ತು ನೈರ್ಮಲ್ಯ ಮತ್ತು ಒಳಚರಂಡಿ ಕೆಲಸಗಾರರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸತ್ತ ಅಥವಾ ಜೀವಂತವಾಗಿರುವ ಇಲಿಜಾತಿಯ ಪ್ರಾಣಿಗಳನ್ನು ಮುಟ್ಟಬಾರದು. ಸಾಕು ಬೆಕ್ಕು ಅಥವಾ ನಾಯಿ ಇಲಿಗಳನ್ನು ಸೇವಿಸಲು ಅನುಮತಿಸಬಾರದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತದೆ. ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಾಡುತ್ತದೆ. ಮೈಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಈ ಜ್ವರದ ಲಕ್ಷಣವಾಗಿದೆ. ಈ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಚಿಕಿತ್ಸೆ ಪಡೆಯಬೇಕು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಎಮ್.ವೀಣಾ ಇಲಿ ಜ್ವರ ನಿಯಂತ್ರಣ ಕರಪತ್ರ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಆರೋಗ್ಯ ಅಮೃತ ಯೋಜನೆಯ ಬಗ್ಗೆ ತರಬೇತಿ ನೀಡಲಾಯಿತು. ಪಿ.ಡಿಓ ಶೃತಿ, ರೂಪ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ದಾಸಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಗ್ರಾಮ ಪಂಚಾಯತ್ ಸದಸ್ಯ ಆಶಾ, ಅಂಗನವಾಡಿ ಕಾರ್ಯಕರ್ತರು, ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಭಾಗವಹಿಸಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments