ಚಳ್ಳಕೆರೆ ಫೆ 21..ಗ್ರಾಮ ಪಂಚಾಯಿತಿ ಮೂಲ ಪಿಡಿಒಗೆ ಸದಸ್ಯರು ವಿರೋಧ ಮಾಡುವುದರಿಂದ ಪ್ರಭಾರ ಪಿಡಿಒ ಕರ್ತವ್ಯ ಬಿಡದೆ ಇರುವುದು ಇಬ್ಬರು ಪಿಡಿಒಗಳು ಸಿಬ್ಬಂದಿ ಹಾಜರಾತಿಗೆ ಸಹಿ ಹಾಕಲಾಗುತ್ತಿದೆ. ಎಂಬ ವರದಿ ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೆ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಇದು ಆಂದ್ರಗಡಿಭಾಗದ ಸಿದ್ದೇಶ್ವರನದುರ್ಗ ಗ್ರಾಪಂ ಕಚೇರಿಯಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬೇಕು ಬೇಡಗಳ ನಡುವೆ ಇಬ್ಬರು ಮೂಲ ಪಿಡಿಒ ಮಾಲೇತೇಶ್ ಹಾಗೂ ಪ್ರಭಾರ ಪಿಡಿಒ ಹನುಂಮತರಾಜು ಇಬ್ಬರೂ ಸಹ ಸುಮಾರು ಒಂದು ವಾರದಿಂದ ಗ್ರಾಮಪಂಚಾಯತ್ ಕಚೇರಿಗೆ ಗೈರಾಗಿರುವುದು ಯಾರಿಗೇಳಲಿ ನಮ್ಮ ಪ್ರಾಬ್ಲಮ್ ಎಂಬಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೂಲ ಪಿಡಿಒ ಮಾಲತೇಶ್ ಚಾರ್ಜು ತೆಗೆದುಕೊಳ್ಳದೆ ಇರುವುದರಿಂದ ಪ್ರಭಾರ ಪಿಡಿಒ ಹನುಮಮಂತರಾಜ್ ತಾಪಂ ಕಚೇರಿಯ ಟಪಾಲ್ ವಿಭಾಗಕ್ಕೆ ಸಿದ್ದೇಶ್ವರನದುರ್ಗದ ಹೆಚ್ಚುವರಿ ಪ್ರಭಾರದ ಕರ್ತವ್ಯದ ಚಾರ್ಜು ನೀಡಿದ್ದಾರೆ ಎನ್ನಲಾಗಿದೆ. ಗ್ರಾಮಪಂಚಾಯಿತಿ ಕಚೇರಿಯಲ್ಲಿ ಈಗ ಇಬ್ನರು ಗೈರಾಗಿರುವುದು ಕುಡಿಯುವ ನೀರು.ಸ್ವಚ್ಚತೆ ಸೇರಿದಂತೆ ಸಮಮಸ್ಯೆಯಾರಿಗೆ ಹೇಳ ಬೇಕು ಎಂಬುದು ಗ್ರಾಮಸ್ಥರ ಅಳಲಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಕಾರಿಗಳು ಪಿಡಿಒ ನೇಮಕಮಾಡುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments