ಇಂಪ್ಯಾಕ್ಟ್

ಜನಧ್ವನಿ ಡಿಜಿಟಲ್ ಮೀಡಿಯ ವರದಿ ಎಫೆಕ್ಟ್- ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಚಿಕಿತ್ಸೆ ಹಾಗೂ ಸರಕಾರಿ ಸೌಲಭ್ಯ ಕೊಡಿಸಲು ಮುಂದಾದ ಅಧಿಕಾರಿಗಳು.


ಶನಿವಾರ ಜನಧ್ವನಿ ಡಿಜಿಟಲ್ ಮೀಡಿಯ ಬೆಳಕು ಚೆಲ್ಲಿದ ಫೋಟೊ.
ಚಳ್ಳಕೆರೆ ಮೇ 14. ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಚಿಕಿತ್ಸೆಯ ನೆರವು ಬೇಕಾಗಿದೆ ಎಂಬ ತಲೆಬರಹದಡಿಯಲ್ಲಿ 2 ಶನಿವಾರ ಜನಧ್ವನಿ ಡಿಜಿಟಲ್ ಮೀಡಿ ಬೊಮ್ಮಸಮುದ್ರಗ್ರಾಮದ ಶಿಲ್ಪ ಕೋಂಮಾರುತಿ ಇವರ ಮಗು ಹುಟ್ಟಿನಿಂದ ನಿಶ್ಚಕ್ತಿಯಿಂದ ಬಳುತ್ತಿರುವ ಮಗುವಿಗೆ ಸುಮಾರು 3 ವರ್ಷಗಳುಕಳೆದರೂ ಚಿಕಿತ್ಸೆ ಹಾಗೂ ಸಕಾರಿ ಸೌಲಭ್ಯದಿಂದ ವಂಚಿತವಾಗಿರುವ ಬಗ್ಗೆ ಬೆಳಕು ಚೆಲ್ಲಿದ ಬೆನ್ನಲ್ಲೇ ಅಂಗವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಗುವಿಗೆ ಸಮಾಜಿಕ ಭದ್ತತಾ ಪಿಂಚಿಣಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿರುವ ಅಪೌಷ್ಠಾಕತೆ ಮಕ್ಕಳ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ವಿಕಲ ಚೇತನಕಲ್ಯಾಣ ಇಲಾಖೆಯ ಕಾರ್ಯಕರ್ತೆ ಸಾಮಾಜಿಕ ಭದ್ರತಾ ಪಿಂಚಿಣಿ ಮಾಡಿಸಿರುವುದು.
ಮೂರು ವರ್ಷ ಕಳೆದರೂ ಪಿಂಚಿಣಿ ಹಾಗೂ ತೂಕ ಕಡಿಮೆ ಇರುವ ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದೆ ಬಾರದ ಅಂಗವನಾಡಿ ,ಆಶಾಕಾರ್ಯಕರ್ತೆಯರು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಸಕರಾರಿ ಸೌಲಭ್ಯ ಹಾಗೂ ಉಚಿತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

ವೃದ್ದ ವಿಕಲ ಚೇತನ ಕೈ ಸೇರಿದ ಮ್ಯೂಟೇಷನ್ ಪತ್ರ . ಪತ್ರ-ವರದಿ ಫಲಶೃತಿ.

ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ. ದ್ಚ. ವೃದ್ದ ವಿಕಲಚೇನನೊಬ್ಬ ಮ್ಯೂಟೇಷನ್ ಪತ್ರಕ್ಕಾಗಾಗಿ ಅಲೆದಾಡಿದರೂ ಸ್ಪಂಧಿಸದ ನಾಡಕಚೇರಿ ಸಿಬ್ಬಂದಿ ಎಂಬ ತಲೆಬರಹದಡಿ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಕೈಬರಹ ಮ್ಯೂಏಷನ್ ಪತ್ರ ನೀಡಿದ ನಾಡಕಚೇರಿ ಸಿಬ್ಬಂದಿ.

ಮಾ.22 ಮ್ಯೂಟೇಷನ್ ಪತ್ರಕ್ಕಾಗಿ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೌದು ಇದು ಚಳ್ಳಕೆರೆ ತಾಲೂಕಿನ ಯಲಗಟ್ಟಿ ಗ್ರಾಮದ ಸಮೀಲದ ಯಲಗಟ್ಟೆ ಗೊಲ್ಲರಹಟ್ಟಿಯ ಮಂಜಣ್ಣ ಎಂಬ ವೃದ್ದ ಕಣ್ಣು ವಿಕಲಚೇತನಾಗಿದ್ದು ಪರಶುರಾಂಪುರ ನಾಡ ಕಚೇರಿಗೆ ಹಳೆಯ ಮ್ಯೂಟೇಷನ್ ನೀಡುವಂತೆ ಅರ್ಜಿ ಸಲ್ಲಿಸಿದರೆ ಕಂಪ್ಯೂಟರ್ ಸೆಂಟರ್ ನಲ್ಲಿ ತೆಗೆಸಿ ಎಂದು ನಾಡ ಕಚೇರಿಯ ಸಿಬ್ಬಂದಿ ವೆಂಕಟೇಶ್ ಹೇಳಿತ್ತಾರೆ. ಕಂಪ್ಯೂಟರ್ ಸೆಂಟರ್ ಗೆ ಹೋದರೆ ಪರಶುಪಾಂಪುರ ನಾಡ ಕಚೇರಿಯಲ್ಲಿ ಸಿಗುತ್ತವೆ ಎನ್ನುತ್ತಾರೆ ಮಾರ್ಚ್ 1 ನೇ ತಾರಿಖಿನಿಂದ ಅಲೆದರೂ ಪರಶುರಾಂಪುರ ನಾಡ ಕಚೇರಿಯ ವೆಂಕಟೇಶ್ ಸ್ಪಂದಿಸುತ್ತಿಲ್ಲ ನನಗೆ ತುರ್ತು ಅವಶ್ಯಕತೆ ಇದ್ದು ಇಂದು ಚಳ್ಳಕೆರೆ ತಾಲೂಕು ಕಚೇರಿಯ ದಾಖಲೆ ಕೊಠಡಿತಲ್ಲಿ ಕೇಳಿದರೆ 2000 ಇಸವಿಯ ಹಳೆಯ ಮ್ಯೂಟೇಷನ್ ಪರಶುರಾಂಪುರ ನಾಡ ಕಚೇರಿಯಲ್ಲಿ ದೊರೆಯುತ್ತವೆ ಇತ್ತೀಚಿನ ಹೊಸ ಮ್ಯೂಟೇಷನ್ ಬೇಕಾದರೆ ಕಂಪ್ಯೂಟರ್ ನಲ್ಲಿ ದೊರೆಯುತ್ತವೆ ನೀವು ನಾಡ ಕಚೇರಿಯಲ್ಲೇ ಪಡೆಯ ಬೇಕು ಎನ್ನುತ್ತಾರೆ ಕಣ್ಣು ಕಾಣದ ಕುರುಡನಾಗಿದ್ದು ನಾನುತ್ತೊಬ್ಬರ ಆಸರೆಯಿಂದ ಸುಮಾರು 20 ದಿನಗಳಿಂದ ಪರಶುರಾಂಪುರ ನಾಡ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ನಾಡಕಚೇರಿ ವೆಂಕಟೇಶ್ ಉಢಾಪೆ ಉತ್ತರ ನೀಡುತ್ತಾರೆ ಎಂದು ಕಣ್ಣು ಕಾಣದ ವೃದ್ದ ಮಂಜಣ್ಣ ಶುಕ್ರವಾರ ತಾಲೂಕು ಕಚೇರಿ ಬಳಿ‌ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಗಳಲ್ಲಿ ನಾಡಕಚೇರಿ ಸಿಬ್ಬಂದಿ ದೂರವಾಣಿ ಕರೆ ಮಾಡಿ ಕೈ ಬರಹ ಮ್ಯೂಟೇಷನ್ ಪತ್ರಗಳನ್ನು ನೀಡಿ ಕಳಿಸಿದ್ದಾರೆ.

ಮಹಿಳಾ ಸದಸ್ಯೆ ಪತಿಯೊಬ್ಬ ವಸತಿ ಯೋಜನೆಯ ಬಿಲ್ ಲಂಚಕ್ಕೆ ಬೇಡಿಕೆ ಕುಟುಂಬಸ್ಥರ ಪ್ರತಿಭಟನೆ ಹಾಲಗೊಂಡನಹಳ್ಳಿ‌ಗ್ರಾಮಕ್ಕೆ ತಾಪಂ ಇಒ ಶಶಿಧರ್ ಭೇಟಿ ರಸ್ತೆ ಒತ್ತುವರಿ ಮಾಡಿಕೊಂಡ ಮೂರಡಿ ತೆರವುಗೊಳಿಸುವಂತೆ ಸೂಚನೆ.


ಚಳ್ಳಕೆರೆ ಜನಧ್ವನಿ ವಾರ್ತೆ ಡಿ.22. ಗ್ರಾಮಪಂಚಾಯಿ ವ್ಯಾಪ್ತಿಯ ಸಾರ್ವ ಜನಿಕ‌ ಆಸ್ತಿಗಳಾದ ರಸ್ತೆ.ಚರಂಡಿ ಒತ್ತುವರಿ ಮಾಡಿದರೆ ಕಾನೂನು ಕ್ರಮಕೈಕೊಳ್ಳುವುದಾಗಿ ತಾಪಂ ಇಒ ಶಶಿಧರ್ ಎಚ್ಚರಿಕೆ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ‌ ಗ್ರಾಪಂ ವ್ಯಾಪ್ತಿಯ ಹಾಲಿಗೊಂಡನಹಳ್ಳಿ‌ಗ್ರಾಮದ ಕುಟುಂಬವೊಂದು ವಸತಿಯೋಜನೆಯ ಬಿಲ್ ಮಾಡಲು ಗ್ರಾಪಂ ಮಹಿಳಾ ಸದಸ್ಯೆ ಪತಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಾಲೂಕು ಪಂಚಾಯತಿ ಇಒ ಶಶಿಧರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳಾ ಸದಸ್ಯೆಯ ಪತಿ ಹನುಂತರಾಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಅಕ್ಕ‌ಪಕ್ಕದವರು ರಸ್ತೆಗೆ ಮೂರಡಿ ಜಾಗ ಒತ್ತುವರಿ ಮಾಡಿಕೊಂಡಿರುವುದರಿಂದ ತೆರವುಗೊಳಿಸಲು ಅರ್ಜಿ ನೀಡಿದ್ದಾರೆ. ಅದನ್ನು ವಿರೋಧಿಸಿ ಮಹಿಳಾ ಸದಸ್ಯೆಯ ಪತಿ ಮೇಲೆ ವಸತಿ ಯೋಜನೆಯ ಬಿಲ್ ಪಾವತಿಗೆ 30 ಸಾವಿರ ರೂ ಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿ ಭಟನೆ ನಡೆಸಿದ್ದರು ಇಒ ಗ್ರಾಮಕ್ಕೆ ಭೇಟಿ ನೀಡಿದಾಗ ರಸ್ತೆ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿದ್ದು ರಸ್ತೆ ಒತ್ತುವರಿ ಮೂರು ಅಡಿ ಜಾಗವನ್ನು ಬೆರಗುಗೊಳಿಸುವಂತೆ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ ಇಬ್ಬರೂ ಒತ್ತುವರಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ರಸ್ತೆ ಒತ್ತುವರಿ ವಿವಾದ ಇಬ್ಬರ ನಡುವೆ ಬಹಳ ದಿನಗಳಿಂದ ಇದೆ ಎಂದು ಕರೆಯಲಾಗುತ್ತದೆ ತಿಳಿದು ಬಂದಿದೆ. ಈಗಲಾದರೂ ಗ್ರಾಮೀಣ ಭಾಗದಲ್ಲಿ ರಸ್ತೆ ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುವ ಮುನ್ನವೇ ಎಚ್ಚತ್ತು ನಿರ್ಮಿಸಕು ಗ್ರಾಪಂ ಆಡೀತ ಜನರಿಗೆ ಎಚ್ಚರಿಕೆ ನೀಡ ಬೇಕಿದೆ. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್. ಪಿಡಿಒ ವೇದವ್ಯಾಸಲು ಇತರರಿದ್ದರು.

ಲೆಕ್ಕ ಪತ್ರ ಹಾಗೂ , ಅಕ್ಕಿ ದಾಸ್ತಾನು ಸರಿಯಾಗಿ ನಿರ್ವಹಣೆ ಮಾಡದೆ, ಫಲಾನುಭವಿಗಳಿಂದ ಎಬ್ಬೆಟ್ಟು ಪಡೆದು ಮೂರು ತಿಂಗಳು ಕಳೆದರೂ ಅಕ್ಕಿ ಸರಿಯಾದ ಪ್ರಮಾಣದಲ್ಲಿ ಅಕ್ಕಿ ನೀಡದೆ,ತೂಕದಲ್ಲಿ ವ್ಯತ್ಯಾಸ ಖಡಕ್ ಎಚ್ಚರಿಕೆ ನೀಡಿದ ತಾಪಂ ಇಒ ಶಶಿಧರ್.

ಜನಧ್ವನಿ ವರದಿ ಎಫೆಕ್ಟ್


ಚಳ್ಳಕೆರೆ ನ.22 ಪಡಿತಹ ಅಕ್ಕಿಗಾಗಿ ಬೆಳಗನಿನ ಜಾವ ಕಾದು ಕುಳಿತರೂ ಅಕ್ಕಿ ಇಲ್ಲ ಕೂಲಿ ಇಲ್ಲ ಮಹಿಳೆಯರ ಅಕ್ರೋಶ ಎಂಬ ಜನಧ್ವನಿ ಡಿಜಿಟಲ್ ಮೀಡಿಯ ಚಳ್ಳಕೆರೆ ತಾಲೂಕಿನ‌ ನನ್ನಿವಾಳ‌ಗ್ರಾಮದ ನ್ಯಾಯಬೆಲೆ ಅಂಗಡಿಯ ವರದಿಯನ್ನು ಮಂಗಳವಾರ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ತಾಪಂ ಇಒ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಲೆಕ್ಕ ಪತ್ರ ಹಾಗೂ , ಅಕ್ಕಿ ದಾಸ್ತಾನು ಸರಿಯಾಗಿ ನಿರ್ವಹಣೆ ಮಾಡದೆ, ಫಲಾನುಭವಿಗಳಿಂದ ಎಬ್ಬೆಟ್ಟ ಪಡೆದು ಮೂರು ತಿಂಗಳು ಕಳೆದರೂ ಅಕ್ಕಿ ಸರಿಯಾದ ಪ್ರಮಾಣದಲ್ಲಿ ಅಕ್ಕಿ ನೀಡದೆ,ತೂಕದಲ್ಲಿ ವ್ಯತ್ಯಾಸ ಸೇರಿದಂತೆ ವಿವಿಧ ಲೋಪದೋಶಗಳು ಕಂಡು ಬಂದ ಹಿನ್ನೆಯಲ್ಲಿ ಸರಕಾರ ಬಡವರ ಹಸಿವು ನೀಗಿಸಲು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದು ಪಡಿತರ ವಿತರಣೆ ಮಾಡುತ್ತಿದೆ ಬಡವರ ಅನ್ನ ಭಾಗ್ಯಸರಿಯಾಗಿ ವಿತರಣೆ ಮಾಡ ಬೇಕು ಫಲಾನುಭವಿಗಳನ್ನು ಅಂಗಡಿಗೆ ಅಲೆದಾಡಿಸದೆ ನಿಗಧಿತ ಅವಧಿಯೊಳಗೆ ಆಯಾ ತಿಂಗಳ ಅಕ್ಕಿಯನ್ನು ವಿತರಣೆ ಮಾಡಬೇಕು ದಾಸ್ತಾನು ಸ್ವಚ್ಚತೆ ಮಾಡುವ ಜನತೆ ಲೆಕ್ಕ ಪತ್ರ ನಿರ್ವಹಣೆ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸೂಕ್ತ ಕಾನೂನು ಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗೆ ತಾಪಂ ಇಒ ಶಶಿಧರ್ ಎಚ್ಚರಿಕೆ ನೀಡಿದರು. ಅಹಾರ ಮತ್ತ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಪಡಿತರ ಅಂಗಡಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದರು.

ಜನಧ್ವನಿ ವರದಿ ಬೆಳಕು ಚೆಲ್ಲಿದ ತಕ್ಷಣ ಬಸ್ ನೊಂದಿಗೆ ಪ್ರತಿಭಟನಾ ಸ್ಥಳಕ್ಕೆ ದಾವಿಸಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು.

ಚಳ್ಳಕೆರೆ ನ.16. ಜನಧ್ವನಿ ವತದಿ ಬೆಳಕು ಚೆಲ್ಲಿದ ತಕ್ಷಣ ಬಸ್ ನೊಂದಿ ಪ್ರತಿಭಟನಾ ಸ್ಥಳಕ್ಕೆ ದಾವಿಸಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು. ಹೌದು ಇದು ಚಳ್ಳಕೆರೆ ತಾಲೂಕಿನ ಮಿರಸಾಭಿಹಳ್ಳಿ ಗ್ರಾಮದ ಸಮೀಪ ಕರಿಕೆರೆ ಗ್ರಾಮದ ಬಳಿ ಬಸ್ಸಿಗಾಗಿ ರಸ್ತೆಗಿಳಿದು ರಸ್ತೆ ತಡೆ ನಡೆಸಿ‌ಸಾರಿಗೆ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದ ಸುದ್ದಿಯನ್ನು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳಕು ಚರಲ್ಲಿದ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಬಸ್ಸ್ ಕಳಿಸಿ ಪ್ರತಿಭಟನೆಯನ್ನು ತೆರವುಗೊಳಿಸಿದ್ದಾರೆ. ಸಾರಿಗೆ ವ್ಯವಸ್ಥಾಪಕ ಪ್ರಭು ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮಾತನಾಡಿ ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ಸೇರಿದಂತೆ ವಿವಿಧ ಕಡೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಲವು ಬಸ್ ಗಳನ್ನು ಬೆಂಗಳೂರಿಗೆ ವ್ಯವಸ್ಥೆ ಮಾಡಿರುವುದರಿಂದ ವ್ಯಾತ್ಯಾಯವಾಗಿ ಸಾರಿಗೆ ಘಟದಲ್ಲಿ‌ ಸುಮಾರು50 ಬಸ್ ಗಳಿದ್ದು ಬಸ್ ಗಳ ಕೊರತೆ ಇದೆ ಈ ಬಗ್ಗೆ ಮೇಲಾಧಿಕಾರಿಗಳ ಗಮನ ತರಲಾಗಿದೆ ಹೆಚ್ಚುವರಿ ಬಸ್ ಗಳ ಒದಗಿಸಿದಾಗ ಈ ಸಮಸ್ಯೆ ಬರುವುದಿಲ್ಲ ಮತ್ತೊಮ್ಮ ಮೇಲಾಧಿಕಾರಿಗಳ ಗಮನ‌ತರಲಾಗುವುದು ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಹಾಗೂ ವಿದ್ಯಾರ್ಥಿಗಳ ವ್ಯಾಸಂಗದ ದೃಷ್ಟಿಯಿಂದ ನಿಗಧಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆ ಬರುವುದಿಲ್ಲ ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಹೂಳು ತುಂಬಿದ ಚರಂಡಿ ಸ್ವಚ್ವತೆಗೆ ಮುಂದಾದ ನಗರಸಭೆ ಇದು ಜನಧ್ವನಿ ವರದಿ ಎಫೆಕ್ಟ್.

ಜನಧ್ವನಿ ವರದಿ ಎಫೆಕ್ಟ್.
ಚಳ್ಳಕೆರೆ ನ.9. ಹೂಳು ತುಂಬಿದ ಚರಂಡಿಗಳು ಸಾಂಕ್ರಮಿಕ ರೋಗ ಭೀತಿಯಲ್ಲಿ ನಾಗರೀಕರು ಚಳ್ಳಕೆರೆ ನಗರಸಭೆ ವಿರುದ್ದ ಅಕ್ರೋಶ ಎಂಬ ತಲೆಬರಹದಡಿಯಲ್ಲಿ ಬುಧವಾರ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಚರಂಡಿಗಳ ಸ್ವಚ್ಚತೆಗೆ ಮುಂದಾಗಿದ್ದಾರೆ.

ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಗಬ್ಬು ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ನಗರದ ಜನತೆ ಬದುಕುವಂತಾಗಿದೆ. ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಚರಂಡಿಗಳ ಅವ್ಯವಸ್ತೆ ಬಗ್ಗೆ ಅಧಿಕಾರಿಗಳ ಕಣ್ಣುತೆರೆಸುವಂತೆ ಮಾಡಿತ್ತು

ನಗರದ ಬೆಂಗಳೂರು ರಸ್ತೆ ಬಳ್ಳಾರಿ ರಸ್ತೆ ಸೇರಿದಂತೆ ಇತರ ಕಡೆಗಳಲ್ಲಿ ರಸ್ತೆ ಅಗಲೀಕರಣದಿಂದ ಹೊಸದಾಗಿ ನಿರ್ಮಿಸಿರುವ ಚರಂಡಿಗಳಲ್ಲಿ ಸಾರ್ವಜನಿಕರ ಬಳಕೆಗೂ ಬರುವ ಮುನ್ನವೇ ಚರಂಡಿಗಳ ಕಳಪೆ ಕಾಮಗಾರಿ ನಡೆದು ಆಪ್ ಬೆಳೆ ಸೇರಿದಂತೆ ಕಸ ಕಡ್ಡಿ ಹೂಳು ತುಂಬಿಕೊಂಡು ಸೊಳ್ಳೆ ಹಾಗೂ ಕ್ರಿಮಿ ಕೀಟಗಳ ವಾಸಸ್ಥಾನವಾಗಿದ್ದರಿಂದ ಸಾರ್ವಜನಿಕರು ಅಕ್ರೋಶ ಹೊರ ಹಾಕಿದ್ದರು. ನಗರಸಭೆ ಆರೋಗ್ಯ ನಿರೀಕ್ಷಿಕೆ ಗೀತಾ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ನೆರವಿನಿಂದ ರಸ್ತೆ ಬದಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದಾರೆ ನಗರದ ನಿವಾಸಿಯಾದ ಜೆ ಎಸ್ ಆನಂದ್ ನಗರಸಭೆ ಸದಸ್ಯ ಆರ್ ರುದ್ರ ನಾಯಕ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮದಲ್ಲಿ ಸಮಸ್ಯೆಗಳ ಸುದ್ದಿಗಳು ಬಂದಾಗ ಮಾತ್ರ ಅಧಿಕಾರಿಗಳು ಸ್ವಚ್ಚತೆಗೆ ಮುಂದಾಗುತ್ತಾರೆ ಇಂತಹ ಸಾಮಾಜಿಕ ಕಳಕಳಿಯ ವರದಿಗಳನ್ನು ಇನ್ನಷ್ಟು ಬಿತ್ತರಿಸುವಂತೆ ಹಾಗೂ ಚರಂಡಿ ಸ್ವಚ್ಛ ಗೊಂಡಿರುವುದಕ್ಕೆ ಅಭಿನಂದನೆ ತಿಳಿಸಿದ್ದಾರೆ.

ಜನಧ್ವನಿ ಎಫೆಕ್ಟ್ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಹಟ್ಟಿ ಬೋರಯ್ಯ ಕಪಿಲೆ ಜನರಿಗೆ ನೀರಿನ ವ್ಯವಸ್ಥೆ ಸರಿ ಪಡಿಸಿದ್ದಾರೆ.

ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ
ಚಳ್ಳಕೆರೆ ಜನಧ್ವನಿ ಮೀಡಿಯಾ ನ. 4 ಸುಮಾ ಬಾವಿಯನ್ನು ಖಾಸಿ ವ್ಯಕ್ತಿ ಬಳಸಿಕೊಂಡು ಗ್ರಾಮಸ್ಥರಿಗೆ ನೀರಿನ ಸಮಸ್ಯಯಿಂದ ಪರದಾಡುತ್ತಿರುವ ಬಗ್ಗೆ ಅ. 26 ರಂದು ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಖಸಗಿಯವರ ಪಾಲಾಗಿದ್ದ ಸರಕಾರಿ ಕೊಳವೆ ಬಾವಿ ಬಿಡಿಸಿ ಗ್ರಾಮಪಂಚಾಯಿತಿ ವತಿಯಿಂದ ಮೋಟರ್ ಪಂಪ್ ಬಿಟ್ಟು ಜನರಿಗೆ ನೀರು ಸರಬರಾಜು ಮಾಡುವಲ್ಲಿ ಗ್ರಾಪಂ ಪಿಡಿಒ ಶ್ರೀನಿವಾಸ್ ಯಶಸ್ವಿಯಾಗಿದ್ದು ಇಲ್ಲಿನ ಜನರ ಬಹುದಿನಗಳ ಸಮಸ್ಯೆಗೆ ಮುಕ್ತಿದೊರೆತಂತಾಗಿದೆ. . ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಓಬಯ್ಯನಹಟ್ಟಿ ಗ್ರಾಮಸ್ಥರ ಅಳಲು. ಎಂಬ ತಲೆಬತಹದಡಿಯಲ್ಲಿ ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ನೀರಿನ ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದರು. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ಯಿಯ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಗಟ್ಟಿ ಬೋರಯ್ಯ ಕಪಿಲೆ ಹಾಗೂ ತಿಪ್ಪಳ್ಳಿ ಕಪಿಲೆ ವ್ಯಾಪ್ತಿಯಲ್ಲಿ ಸುಮಾರು 27 ರಿಂದ30 ಮನೆಗಳಿದ್ದು ಕಿರು ನೀರು ಸಬರಾಜು ಕುಡಿಯುವ ನೀರಿನ 4 ಟ್ಯಾಂಕ್ ಗಳಿವೆ 2 ಜಾನುವಾರು ತೊಟ್ಟಿಗಳಿವೆ ಕಳೆದ ಸುಮಾರು 8 ವರ್ಷಗಳಿಂದ ವರ್ಷಗಳಿಂದ ನೀರು ಬಿಡದೆ ಖಾಲಿ ಇವೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುಔಮತಾಗಿದೆ ಎಂದು ಇಲ್ಲಿನ ಜನರು ಜನಧ್ವನಿ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ಥಳಕ್ಕೇ ಪಿ ಡಿ ಒ ಹಾಗೂ ಸದಸ್ಯ ಭೇಟಿ ನೀಡಿ ಪರಿಶೀಲನೆ ನಡೆಸುದರು.

ಗ್ರಾಪಂ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಗ್ರಾಪಂ ಸದಸ್ಯರೊಬ್ಬರ ಸಂಬಂಧಿಕರ ಜಮೀನಿಗೆ ನೀರು ಬಿಟ್ಟುಕೊಳ್ಳಲು ಬಿಟ್ಟಿರುವುದರಿಂದ ನಮಗೆ ನೀರಿನ ತೋಂದರೆಯಾಗಿದೆ ಹಾಗೂ ಇಲ್ಲಿದ್ದ ಕೈಪಂಪಿನ ಬಿಡಿಭಾಗಗಳನ್ನು ಮಾರಿಕೊಂಡಿದ್ದಾರೆ ಎಂದು ಗ್ರಾಮಸ್ಥರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. . ಸರಕಾರಿ ಬೋರು ನನ್ನ ಜಮೀನಿನಲ್ಲಿದೆ ನಾನು ಬಿಡುವುದಿಲ್ಲ ಎಂದು ಕುಡಿಯುವ ನೀರಿನ ಬೋರ್ ವಶಪಡಿಸಿಕೊಂಡ ರೈತ ಹಠ ಮಾಡಿದಾಗ ಪಿಡಿಒ ಶ್ರೀನಿವಾಸ್ ಹಾಗೂ ಸದಸ್ಯರು ಮಾತನಾಡಿ ರೈತನ ವಶದಲ್ಲಿರುವ ಬೋರನ್ನು ಪಂಚಾಯತ್ ವತಿಯಿತಿ ವಶಕ್ಕೆ ಪಡೆದು ರೆಡಿ ಮಾಡ್ಸಿ ನೀರು ಬಿಡ್ತಿವಿ ಎಂದು ಭರವಸೆ ನೀಡಿದ್ದರು . ಅದರಂತೆ ಶನಿವಾರ ಗ್ರಾಪಂ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ಇಲ್ಲಿನ‌ ಸ್ಥಳೀಯರಿಗೆ ನೀರು ಬಿಟ್ಟಿದ್ದಾರೆ ಇಲ್ಲಿನ ಜನರು ಗ್ರಾಪಂ ಆಡೀತ ಹಾಗೂ ಜನಧ್ವನಿ ಮೀಡಿಯಾಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಜನಧ್ವನಿ ಮೀಡಿಯಾ ವರದಿ ಎಫೆಕ್ಟ್ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಚರಂಡಿ ಸ್ವಚ್ಚತೆಗೊಳಿಸಿದ ನಗರಸಭೆ.

ಜನಧ್ವನಿ ಮೀಡಿಯಾ ವರದಿ ಫಲಶೃತಿ

ಚಳ್ಳಕೆರೆ ಜನಧ್ವನಿ ವಾರ್ತೆ ಅ 30 ಹೂಳು ತುಂಬಿದ ಚರಂಡಿ ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಚಳ್ಳಕರೆ ಹೈಟೆಕ್ ಸಾರಿಗೆ ಬಸ್ ನಿಲ್ದಾಣ. ಎಂಬ ತಲೆಬರಹದಡಿ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳೆಕು ಚೆಲ್ಲಿದ ಬೆನ್ನಲ್ಲೇ ನಗರಭೆ ಅಧಿಕಾರಿಗಳು ಸ್ವಚ್ಚತೆಗೆ ಮುಂದಾಗಿದ್ದಾರೆ. ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆ ಹರಿದರೂ ಕೇಳೋರಿಲ್ಲ..ಸಾಂಕ್ರಮಿಕ ರೋಗ ಭೀತಿಯಲ್ಲಿ ಸಾರ್ವಜನಿಕರು.


ಹೌದು ಇದು ಚಳ್ಳಕೆರೆ ನಗರದ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ಹೈಟೆಕ್ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವ ಮುಖ್ಯದ್ವಾರದಲ್ಲಿರುವ ಚರಂಡಿ ಮಲ‌ ಮೂತ್ರ.ತ್ಯಾಜ್ಯದಿಂದ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಮಲೀನ ನೀರನ್ನು ತುಳಿದು ಕೊಂಡು ಮೂಗು ಮುಚ್ಚಿಕೊಂಡು ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡಿ ಬಸ್ ನಲ್ಲಿ ಪ್ರಯಾಣ ಮಾಡ ಬೇಕಾಗಿದೆ. ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಸಾರಿಗೆ ಬಸ್ ನಿಲ್ದಾಣದ ಚರಂಡಿ ಅವ್ಯವಸ್ಥೆ ಬಗ್ಗೆ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ವಚ್ಚತೆ ಮಾಡುತ್ತಿರುವ ಬಗ್ಗೆ ಜನಧ್ವನಿ ಮೀಡಿಯಾ ಗೆ ಸ್ವಚ್ಚತೆ ಮಾಡುತ್ತಿರುವ ಪೋಟೋ ಗಳನ್ನುನ್ನು ಕಳಿಸಿ ಜನಧ್ವನಿ ಮೀಡಿಯಾ ಹಾಗೂ ನಗರಸಭೆ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಜನಧ್ವನಿ ವರದಿ ಎಫೆಕ್ಟ್ ಕೊನೆಗೂ ಓಬಯ್ಯನಹಟ್ಟಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಭಾಗ್ಯ ಒದಗಿಸುವುದಾಗಿ ಭರವಸೆ.

ಜನಧ್ವನಿ ಮೀಡಿಯಾ ವರದಿ ಎಫೆಕ್ಟ್
ಚಳ್ಳಕೆರೆ ಜನಧ್ವನಿ ವಾರ್ತೆ ಅ.26. ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಓಬಯ್ಯನಹಟ್ಟಿ ಗ್ರಾಮಸ್ಥರ ಅಳಲು. ಎಂಬ ತಲೆಬತಹದಡಿಯಲ್ಲಿ ಬುಧವಾರ ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಗುರುವಾರ ಬೆಳಗ್ಗೆ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ನೀರಿನ ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ಯಿಯ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಗಟ್ಟಿ ಬೋರಯ್ಯ ಕಪಿಲೆ ಹಾಗೂ ತಿಪ್ಪಳ್ಳಿ ಕಪಿಲೆ ವ್ಯಾಪ್ತಿಯಲ್ಲಿ ಸುಮಾರು 27 ರಿಂದ30 ಮನೆಗಳಿದ್ದು ಕಿರು ನೀರು ಸಬರಾಜು ಕುಡಿಯುವ ನೀರಿನ 4 ಟ್ಯಾಂಕ್ ಗಳಿವೆ 2 ಜಾನುವಾರು ತೊಟ್ಟಿಗಳಿವೆ ಕಳೆದ ಸುಮಾರು 8 ವರ್ಷಗಳಿಂದ ವರ್ಷಗಳಿಂದ ನೀರು ಬಿಡದೆ ಖಾಲಿ ಇವೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುಔಮತಾಗಿದೆ ಎಂದು ಇಲ್ಲಿನ ಜನರು ಜನಧ್ವನಿ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ಥಳಕ್ಕೇ ಪಿ ಡಿ ಒ ಹಾಗೂ ಸದಸ್ಯ ಭೇಟಿ ನೀಡಿ ಪರಿಶೀಲನೆ ನಡೆಸುದರು.

ಗ್ರಾಪಂ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಗ್ರಾಪಂ ಸದಸ್ಯರೊಬ್ಬರ ಸಂಬಂಧಿಕರ ಜಮೀನಿಗೆ ನೀರು ಬಿಟ್ಟುಕೊಳ್ಳಲು ಬಿಟ್ಟಿರುವುದರಿಂದ ನಮಗೆ ನೀರಿನ ತೋಂದರೆಯಾಗಿದೆ ಹಾಗೂ ಇಲ್ಲಿದ್ದ ಕೈಪಂಪಿನ ಬಿಡಿಭಾಗಗಳನ್ನು ಮಾರಿಕೊಂಡಿದ್ದಾರೆ ಎಂದು ಗ್ರಾಮಸ್ಥರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸರಕಾರಿ ಬೋರು ನನ್ನ ಜಮೀನಿನಲ್ಲಿದೆ ನಾನು ಬಿಡುವುದಿಲ್ಲ ಎಂದು ಕುಡಿಯುವ ನೀರಿನ ಬೋರ್ ವಶಪಡಿಸಿಕೊಂಡ ರೈತ ಹಠ ಮಾಡಿದಾಗ ಪಿಡಿಒ ಶ್ರೀನಿವಾಸ್ ಹಾಗೂ ಸದಸ್ಯರು ಮಾತನಾಡಿ ರೈತನ ವಶದಲ್ಲಿರುವ ಬೋರನ್ನು ಪಂಚಾಯತ್ ವತಿಯಿಂದ ಶುಕ್ರವಾರ ರೆಡಿ ಮಾಡ್ಸಿ ನೀರು ಬಿಡ್ತಿವಿ ಎಂದು
ಪಿ ಡಿ ಒ ಶ್ರೀನಿವಾಸ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಸಂದರ್ಭದಲ್ಲಿ ಗ್ರಾಮಸ್ಥರಾದ ಪೆದ್ದಯ್ಯಾ
ಮ್ಯಾಕಲಮಲ್ಲಯ್ಯ ಬೋಡಿ ಹುಚ್ಚಯ್ಯ ನಾಗಬೂಷಣ
ಪಾಲಯ್ಯ ವಿಜಯ. ಮಹದೇವಣ್ಣ ಮರಡಿ ಬೋರಯ್ಯ ಬೈಯಣ್ಣ. ಗ್ರಾಪಂ ಸದಸ್ಯರಾದ ಒಬಣ್ಣ ಬಂಡೆ. ಸೋಮಣ್ಣ.‌ ಗೀತಮ್ಮ. ಬಡಯ್ಯ ಲಕ್ಷ್ಮಿ. ಮಹದೇವಣ್ಣ ಇತರರಿದ್ದರು.
[

ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಕೃಷಿ ಅಧಿಕಾರಿ ಭೇಟಿ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ನರೇಗಾ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ.


ಚಳ್ಳಕೆರೆ ಜನಧ್ವನಿ ವಾರ್ತೆ ಅ.26. ರೈತರಿಗೆ ವರದಾನವಾಗ ಬೇಕಿದ್ದ ಕೃಷಿ ಹೊಂಡ ಮಿರ್ಮಾಣ ಮಧ್ಯವರ್ತಿಗಳ ಪಾಲಿಗೆ ವರದಾನ ಎಂಬ ತಲೆಬಯದಡಿಯಲ್ಲಿ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ನಾಯಕನಹಟ್ಟಿ ಕೃಷಿ ಅಧಿಕಾರಿ ಹೇಮಂತನಾಯ್ಕ ಭೇಟಿ ನೀಡಿ ಪರಿಶೀಲನೆ.


ಹೌದು ಇದು ನಾಯಕನಹಟ್ಟಿ ಹೋಬಳಿಯ ಗಿದ್ದಪುರ ಗ್ರಾಮದಲ್ಲಿ ರೈತರ ಹೆಸರಿನಲ್ಲಿ ಸರಕಾರಿ ಭೂಮಿಯಲ್ಲಿ ನಿರ್ಮಿಸಿದ್ದಾರೆ ಎಂದು ರೈತರು ಆರೋಸಿದ್ದರು.


ಆನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಕೃಷಿ ಅಧಿಕಾರಿ ಭೇಟಿ ರಿಯಾಲಿಟ್ ಚೆಕ್ ಮಾಡಿದಾಗ ರೈತರ ಹೆಸರಿನ ನಾಮಫಲದಲ್ಲಿ ರೈತರ ಜಮೀನಿನ ಪಕ್ಕದಲ್ಲಿ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಅನುಷ್ಠಾನ ಏಜೆನ್ಸಿಯಡಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.

You cannot copy content of this page