ಚಳ್ಳಕೆರೆ ಅ.19.ಆಯುಷ್, ಆಯುರ್ವೇದ ಔಷಧ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಆರ್ಯುವೇದ ಔಷಧಿಯನ್ನು ಬಳಕೆ ಮಾಡಿ ಆರೋಗ್ಯವಂತರಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಕೊರೊಬಾ ವಾರಿಯರ್ಸ್ ಗಳಿಗೆ ಆಯುಷ್ ಇಲಾಖೆಯಿಂದ ರೋಗ ನಿರೋದ ಶಕ್ತಿ ಹೆಚ್ಚಿಸಲು ಹಾಗೂ ರೋಗ ತಡೆಗಟ್ಟಲು ಆರ್ಯುವೇದ ಔಷಧಿ ಕಿಟ್ ವಿತರಿದ್ದರು. ಕೊರೋನ ಮಾರಕ ಖಾಯಿಲೆ ಸಂದರ್ಭದಲ್ಲಿ ಜನರು ಕಷಾಯ ಸೇರಿದಂತೆ ಆರ್ಯುವೇದ ಔಷಧಿಗಳ ಮೊರೆ ಹೋಗಿದ್ದನ್ನು ಜಾಣ ಬಹುದು. ಮಾರಕ ರೋಗದಿಂದ ಅನೇಕ ಜನರು ತಮ್ಮ ಮನೆಯಲ್ಲಿನ ಮನೆಮದ್ದನ್ನು ಉಪಯೋಗಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಕೋವಿಡ್ ಬಾರದಂತೆ ನೋಡಿಕೊಂಡಿದ್ದಾರೆ. ಯಾರು ತಮ್ಮ ಆರೋಗ್ಯದ ಬಗ್ಗೆ ವೈಯಕ್ತಿಕಕಾಳಜಿ ಇಟ್ಟುಕೊಳ್ಳುವರೋ ಅಂತಹವರಿಗೆ ರೋಗಗಳು ಬರುವುದಿಲ್ಲ . ಪೂರ್ವಜರ ಜಾಲದಲ್ಲಿ ಜ್ವರ. ತಲೆ ನೋವು ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾದಗ ಅಂದು ಆಸ್ಪತ್ರೆಗಳಿರಲಿಲ್ಲ ಬೇವಿನ ಕಷಾಯ ಗಿಡಮೂಲಿಕೆ ಔಷಧಿಗಳನ್ನು ಸೇವಿಸಿ ಗಟ್ಟಿ ಮುಟ್ಟಾದ ಸದೃಢ ಆರೋಗ್ಯವಂತರಾಗುತ್ತಿದ್ದರು ಅದೇರೀತಿ ನಿಮ್ಮ ಮನೆ ಬಾಗಿಲಿಗೆ ಆಯುಷ್ ಇಲಾಖೆ ಆರೋಗ್ಯ ತಪಾಸಣೆ ಮಾಡಲು ಬಂದಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವಂತರಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ . ಶಿವಮ್ಮ .ಉಪಾಧ್ಯಕ್ಷೆ ಬೀಬೀಜಾನ್, ಸದಸ್ಯರಾದ ದೊರೆ ಬೈಯಣ್ಣ, ಸಣ್ಣ ಬೋರಮ್ಮ, ಓಬಯ್ಯ, ಸಮಿಉಲ್ಲಾ, ಪಿಡಿಒ ಪಾಲಯ್ಯ, ತಾಲ್ಲೂಕು ಆಯುಷ್ ಅಧಿಕಾರಿ ಭಾಸ್ಕರ್, ಮುಖಂಡರಾದ ರಾಜಣ್ಣ, ಚಿನ್ನಸ್ವಾಮಿ, ಅಜ್ಜಯ್ಯ, ಆಯುಷ್ ಇಲಾಖೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments