ಇತ್ತೀಚೆಗೆ ನಡೆದ ಅಭಿನಂದನ ಸಮಾರಂಭದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಿರಿಯ ಹಾಗೂ ಮಾಜಿ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಾರೆ ಎಂಬ ಅಸಮದಾನ ಹೊರಹಾಕಿದ್ದಾರೆ.

by | 01/03/23 | ಅಭಿಪ್ರಾಯ, ಜನಧ್ವನಿ, ಸುದ್ದಿ


ಚಳ್ಳಕೆರೆಜನಧ್ವನಿ ವಾರ್ತೆ ಮಾ.1 ಕಾಂಗ್ರೆಸ್ ಪಕ್ಷ ಶಿಸ್ತು ಹಾಗೂ ತತ್ವಸಿದ್ದಾಂಗಳಿಗೆ ಹೆಸರು ಪಡೆದಿರುವ ಪಕ್ಷ ಎಂದರೆ ಕಾಂಗ್ರೆಸ್ ಆದರೆ ಕಾರ್ಯಕ್ರಮ ಸಭೆ ಸಮಾರಂಭಾ ಅಂತ ಬಂದಾಗ ಎಲ್ಲವನ್ನು ಕಡೆಗಣಿಸುತ್ತಾರೆ ಎಂಬ ಅಪರಸ್ವರ ಕೇಳಿ ಬರುತ್ತಿದೆ.
ಹೌದು ಇತ್ತೀಚೆಗೆ ಶಾಸಕರ ಭವನದ ಮುಂಭಾಗದಲ್ಲಿ ಮಾದಿಗ ಸಮುದಾಯದವತಿಯಿಂದ ಶಾಸಕ ಟಿ.ರಘುಮೂರ್ತಿಯವರಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದ ಕಾರ್ಯಕ್ರಮದ ಕಾರ್ಯಕ್ರಮಕ್ಕೆ ಮಾದಿಗ ಸಮುದಾಯದ ಹಿರಿಯ ಹಾಗೂ ಮಾಜಿ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಲ್ಲಿ ಅಸಮದಾನದ ಮಾತುಗಳು ಕೇಳಿ ಬರುತ್ತಿವೆ.


ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಮಾದಿಗ ಸಮುದಾಯಕ್ಕೆ ನೀಡಿದ ಶಾಸಕ ರಘುಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಲು ಈಚೆಗೆ ಶಾಸಕರ ಭವನದ ಮುಂಭಾಗದಲ್ಲಿ ಆಯೋಜಿಸಿದ್ದ ಸಮಾರಂಭದ ವೇದಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸದೇ ನಿನ್ನೆ ಮೊನ್ನೆ ಬಂದವರನ್ನು ವೇದಿಕೆ ಮೇಲೆ ಕೂರಿಸಿದ್ದನ್ನ ಕಂಡು ಹಿರಿಯ ಮುಖಂಡರು ಸಮಾರಂಭದ ಸ್ಥಳದಿಂದ ಎದ್ದು ಹೊರನಡೆದ ಪ್ರಸಂಗ ತೆರೆಮರೆಯಲ್ಲಿ ಅಸಮಾಧಾನದ ಹೊಗೆಯಾಡಲು.ಕಾರಣವಾಗಿರುವುದು ಇಂಟರೆಸ್ಟಿAಗ್ ಆಗಿದೆ.
ಈ ಬೆಳವಣಿಗೆ ಪಕ್ಷದ ಆಂತರಿಕ.ವಲಯದಲ್ಲಿ ಸಕತ್ ಸುದ್ದಿಯಾಗಿದ್ದರೂ ಡ್ಯಾಮೇಜ್ ಕಂಟ್ರೋಲ್‌ಗೆ ಸ್ವತಃ ಬ್ಲಾಕ್ ಅಧ್ಯಕ್ಷರೇ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಹಿರಿಯ ಮುಖಂಡ ಗಿರಿಯಪ್ಪ, ಭೂತಲಿಂಗಪ್ಪ, ಮಾರಣ್ಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಮೂರ್ತಿ ಇದ್ದರಾದರೂ ಇನ್ನೂ ಕೆಲವರು ವೇದಿಕೆ ಮೇಲೆ ಕೂತಿದ್ದರು. ಆದರೆ ವೇದಿಕೆ ಮುಂಭಾಗದಲ್ಲಿ ಇದ್ದ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೀರಾಸಾಬಿಹಳ್ಳಿ ರಂಗಸ್ವಾಮಿ ನಾವೂ ಕೂಡ ಮಾಜಿ ಶಾಸಕ ಜಯಣ್ಣ ಸುಧಾಕರ್ ಕಾಲದಿಂದಲೂ ಕಟ್ಟಾ ಕಾಂಗ್ರೆಸಿಗ. ಆದರೆ ಬೇಕಂತಲೇ ನನ್ನ ವೇದಿಕೆ ಮೇಲೆ ಕೂರಿಸಲು ಮರೆತಿದ್ದಾರೆ ಎಂದರೆ ಏನರ್ಥ? ಎಂಬAತೆ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಹಾಗೆ ನೋಡಿದರೆ ಪ್ರಕಾಶ ಮೂರ್ತಿ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಆಗಿರಬಹುದು. ಅವರು ಟಿಕೆಟ್ ಗಿಟ್ಟಿಸಿಕೊಳ್ಳುವವರೆಗೂ ಯಾವ ಪಕ್ಷದಲ್ಲಿ ಇದ್ದರು. ಕಾಂಗ್ರೆಸ್ ವಿರುದ್ದವೇ ಇದ್ದರು. ಇವರ ಕೊಡುಗೆ ಕಾಂಗ್ರೆಸ್ ಗೆ ಎಷ್ಟಿದೆ ಎಂಬ ಅಸಮಾಧಾನದ ಮಾತುಗಳು ಆ ಸಮುದಾಯದ ಮುಖಂಡರಿAದಲೇ ಕೇಳಿ ಬರುತ್ತಿವೆ. ಒಂದು ಹಂತದಲ್ಲಿ ಪ್ರಕಾಶಮೂರ್ತಿ ಹೇಳಿದಂತೆಯೇ ಈ ಸಮಾರಂಭ ನಡೆದಿದೆ. ಅವರ ಹತ್ತಿರ ಹಣ ಇದೆ ಎಂಬ ಕಾರಣಕ್ಕೆ ಇದಕ್ಕೆಲ್ಲಾ ಅವಕಾಶ ಕೊಡುವುದಾದರೆ ಮೂಲ ಕಾರ್ಯಕರ್ತರ ಪಾಡೇನು? ಮತ್ತೋಮ್ಮೆ ಜಿಲ್ಲಾ ಪಂಚಾಯಿತಿ ಟಿಕೆಟ್ ಗಿಟ್ಟಿಸಲು ಪ್ರಕಾಶ್ ಮೂರ್ತಿ ವೀರಭದ್ರಯ್ಯ ಅವರನ್ಶು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಫಲರಾಗಿದ್ದಾರೆ. ಆದರೆ, ಪದೇ ಪದೇ ಇವರದೇ ಪಕ್ಷದಲ್ಲಿ ಸ್ಥಾನ ಮಾನ ಇದ್ದರೆ ಮತ ಹಾಕುವವರು ಯಾರು? ನಗರ ಪ್ರದೇಶದ ಮುಖಂಡರಿಗೆ ಮಣೆ ಹಾಕಿದರೆ ಗ್ರಾಮೀಣ ಭಾಗದ ಜನರ ಪಾಡೇನು ಎಂದು ಹೆಸರು ಹೇಳಲು ಇಚ್ಚಿಸದ ಮುಖಂಡರೊಬ್ಬರು ಹೇಳಿದ್ದಾರೆ.


ಮಾಜಿ ತಾಪಂ ಅಧ್ಯಕ್ಷ ರಂಗಸ್ವಾಮಿ ಜನಧ್ವನಿಯೊಂದಿಗೆ ಮಾತನಾಡಿ ನಾನು ಸಹ ವೇಧಿಕೆ ಮುಂದೆ ಕುಳಿತ್ತಿದ್ದೆ ನನ್ನ ಜತೆ ಇದ್ದವರನ್ನು ವೇಧಿಕೆ ಮೇಲೆ ಕರೆದರು ಮಾಜಿ ಗ್ರಾಪಂ ಅಧ್ಯಕ್ಷರೊಬ್ಬರು ವೇಧಿಕೆ ಅತಿಥಿಗಳನ್ನು ಕರೆಯುವವರ ಬಳಿ ಹೋಗಿ ಕಾಂಗ್ರೆಸ್ ಮುಖಂಡ ಮಾಜಿ ತಾಪಂ ಅಧ್ಯಕ್ಷರಿದ್ದಾರೆ ಕರೆಯಿರಿ ಎಂದು ಕಿವಿಯಲ್ಲಿ ಹೇಳಿದರೂ ಸಹ ಕರೆಯಲಿಲ್ಲ ಬೇರೆಯವರನ್ನು ವೇಧಿಕೆಗೆ ಆಹ್ವಾನಿಸಿದರೂ ಆದ್ದರಿಂದ ಬೇಸರವಾಗಿ ಕಾರ್ಯಕ್ರಮದಿಂದ ಎದ್ದು ಹೊರ ಹೋಗಿದ್ದೇವೆ ಎಂದು ತಿಳಿಸಿದರು.

ಕಾಂಗ್ರಸ್ ಮುಖಂಡ ಸಿ.ಜಿ.ಜಯಕುಮಾರ್ ಮಾತನಾಡಿ ದಲಿತ ಮುಖಂಡ, ಹೋರಾಟಗಾರ ಹಾಗೂ ನಗರಸಭೆ ಸದಸ್ಯ ವೀರಭದ್ರಯ್ಯ ನನ್ನ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿರುವುದು ನನಗೆದ ಸಂತೋಷವಾಗಿದೆ ಆದರೆ ದಲಿತ ಸಮುದಾಯವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡುವ ಮುನ್ನ ನಗರ ಹಾಗೂ ಗ್ರಾಮೀಣ ಭಾಗದ ಕಾಂಗ್ರೆಸ್ ಮುಖಮಡರನ್ನು ಕರೆದು ಪೂರ್ವಬಾವಿ ಸಭೆ ಮಾಡಿ ಎಲ್ಲರನ್ನು ವಿಶ್ವಾಸ ಪಡೆದು ಮಾಡ ಬೇಕು ಈಗ ಚುನಾವನೆ ಸಂರ್ಭವಾಗಿರುವುದು ಪ್ರತಿಯೊಬ್ಬ ಕಾರ್ಯಕರ್ತರ ಅವಶ್ಯಕತೆಯಿಂದ ಯಾರನ್ನು ಕಡೆಗಣಿಸ ಬಾರದು ಶಾಸಕರ ಭವನದ ಮುಂದೆ ನಡೆದ ಅಭಿನಂದನಾ ಸಮಾರಂಭ ನಗರದಕ್ಕೆ ಮಾತ್ರ ಸೀಮಿತವಾದಂತಿತ್ತು ಮತ್ತೆ ಇಂತಹ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವಂತೆ ಆಯೋಜಕರಿಗೆ ಕಿವಿಮಾತು ಹೇಳಿದ್ದಾರೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ವೀರಭದ್ರಪ್ಪ ಮಾತನಾಡಿ ವೇಧಿಕೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಕಾರ್ಯಕ್ರಮಕ್ಕೆ ಅರ್ಥವಿರುವುದಿಲ್ಲ ಎಂಬ ಉದ್ದೇಶದಿಂದ ಕೆಲವರಿಗೆ ಮಾತ್ರ ಸೀಮಿತ ಮಾಡಲಾಗಿತ್ತು ಆದರೂ ಸಹ ಕೆಲವರು ಕರೆಯದೇ ವೇಧಿಕೆ ಮೇಲೆ ಬಂದಿದ್ದಾರೆ ಮತ್ತೆ ಕಾರ್ಯಕ್ರಮದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಹಾಗೂ ಅಸಮದಾನಗೊಂಡ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷದ ಹಿರಿಯ ,ಕಿರಿಯ ಎಲ್ಲಾ ಕಾರ್ಯಕಕರ್ತರನ್ನು ವಿಶ್ವಾಸ ಹಾಗೂ ಸಲಹೆ ಸೂಚನೆಗಳನ್ನು ಪಡೆದು ಪಕ್ಷದ ಸಂಘಟನೆ ಮುಂದಾಗುತ್ತೇನೆ ಈಗಾಗಲೆ ಅಸಮಾನದಗೊಂಡ ಮುಂಡರನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page