ಚಳ್ಳಕೆರೆ ಡಿ.29 ಅಕ್ರಮವಾಗಿ ಆಟೋಗಳಿಗೆ ಗ್ಯಾಸ್ ತುಂಬುತ್ತಿದ್ದ ವ್ಯಕ್ತಿಯನ್ನು ಚಳ್ಳಕೆರೆ ಪೋಲಿಸರು ವಶಕ್ಕೆ . ನಗರದ ರಾಘವೇಂದ್ರ ಕಲ್ಯಾಣ ಮಂಟಪದ ಬಳಿ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಗ್ಯಾಸ್ ತುಂಬುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ಧರೆಪ್ಪ ಹಾಗೂ ಆಹಾರ ನಾಗರೀಕ ಸರಬರಾಜು ಇಲಾಖೆ ಶಿರಸ್ತೆದಾರ್ ವೀರಣ್ಣ ದಾಳಿ ನಡೆಸಿ ಶಾಯಿದ್ ಅಫ್ರೀದ್,(, 23) ಗ್ಯಾಸ್ ರಿಪೇರಿ ಕೆಲಸ ಮಾಡಿಕಕೊಂಡು ಅಕ್ರಮವಾಗಿ ಆಟೋರಿಕ್ಷಾ ಮತ್ತು
ಕಾರುಗಳಿಗೆ ಗ್ಯಾಸ್ ರೀಫಿಲಿಂಗ್ ಮಾಡುತ್ತಿರುವಾಗ ವಶಕ್ಕೆ ಪಡೆದು ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಮತ್ತು
ಪ್ರಾಣಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂತ ತಿಳಿದಿದ್ದರೂ ಸಹ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಗಳಿಂದ ಗಾಸ್ ರೀಫಿಲಿಂಗ್ ಸಾಧನಗಳನ್ನು ಬಳಸಿ
ಆಟೋರಿಕಾ ಮತ್ತು ಕಾರು ವಾಹನಗಳಿಗೆ ಹೆಚ್ಚಿನ ಬೆಲೆಗೆ ಲಾಭ ಗಳಿಸುವ ಉದ್ದೇಶದಿಂದ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗ್ಯಾಸ್
ರೀಫಿಲಿಂಗ್ ಮಾಡುತ್ತಿರುವುದು ಕಂಡು ಬಂದಿರುತ್ತದೆ, ಶಾಯಿದ್ ಅಮೀದ್ ವಿರುದ್ದ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments