ಅಂತರರಾಷ್ಟ್ರೀಯ

ʻಏರೋ ಇಂಡಿಯಾ 2023ʼ ದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಸ್ವತಂತ್ರ ಹಾಗೂ ಮುಕ್ತ ಇಂಡೋ ಪೆಸಿಫಿಕ್‌ ಭಾಗಕ್ಕಾಗಿ ಅಮೆರಿಕದ ಬದ್ಧತೆ

ಬೆಂಗಳೂರು: ಫೆಬ್ರುವರಿ 12ರಿಂದ 17ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ʻಏರೋ ಇಂಡಿಯಾ-2023ʼ ಪ್ರದರ್ಶನದಲ್ಲಿ ಭಾರತದಲ್ಲಿನ ಯು.ಎಸ್‌. ಮಿಷನ್‌ನ ಚಾರ್ಜೆ ಡಿ ಅಫೇರ್ಸ್‌ ಅಂಬಾಸಡರ್‌ ಎಲಿಜಬೆತ್‌ ಜೋನ್ಸ್‌ ಅವರು ಈವರೆಗಿನ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಿ ಪಾಲ್ಗೊಳ್ಳಲಿದ್ದಾರೆ.

ʻಅಮೆರಿಕ ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು, ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ನನಗೆ ಹೆಮ್ಮೆಯೆನಿಸುತ್ತಿದೆ. ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಆಧುನೀಕರಣಗೊಳಿಸುತ್ತಿರುವ ಸಮಯದಲ್ಲಿ ನಾವು ಐಚ್ಛಿಕ ಪಾಲುದಾರರಾಗಲು ಬಯಸುತ್ತೇವೆ. ಉಭಯ ದೇಶಗಳಿಗೂ ಲಾಭದಾಯಕವಾಗುವ ಜಂಟಿ ಉತ್ಪಾದನೆ ಹಾಗೂ ಜಂಟಿ ಅಭಿವೃದ್ಧಿಯ ಪಾಲುದಾರಿಕೆಯತ್ತ ನಾವು ಹೆಚ್ಚಿನ ಗಮನ ನೀಡುತ್ತಿದ್ದೇವೆ. ಸುರಕ್ಷಿತವಾದ, ಸಮೃದ್ಧಿಯಾದ, ಅತ್ಯಂತ ಮುಕ್ತವಾದ ಹಾಗೂ ಸ್ವತಂತ್ರ ʻಇಂಡೋ -ಪೆಸಿಫಿಕ್‌ʼ ಪ್ರಾಂತ್ಯಕ್ಕಾಗಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ದೇಶವಾಗಿ ಪರಿಗಣಿಸುತ್ತೇವೆʼ ಎಂದು ಅಂಬಾಸಡರ್‌ ಜೋನ್ಸ್‌ ತಿಳಿಸಿದ್ದಾರೆ.

ಅಮೆರಿಕದ ಸೇನಾ ಪಡೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ʻಏರೋ ಇಂಡಿಯಾ-2023ʼ ರಲ್ಲಿ ಭಾಗಿಯಾಗಲಿವೆ.

ಏರೋ ಇಂಡಿಯಾದಲ್ಲಿ ಅಮೆರಿಕ ಸರ್ಕಾರದ ನಿಯೋಗದಲ್ಲಿ:

ಅಂಬಾಸಡರ್‌ ಎ. ಎಲಿಜೆಬೆತ್‌ ಜೋನ್ಸ್‌, ಭಾರತದಲ್ಲಿನ ಯು.ಎಸ್‌. ಮಿಷನ್‌ನ ಚಾರ್ಜೆ ಡಿ ಅಫೇರ್ಸ್‌;
ಜೆಡಿಡಿಯಾ ಪಿ. ರಾಯಲ್‌, ಪ್ರಿನ್ಸಿಪಲ್‌ ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಆಫ್‌ ಡಿಫೆನ್ಸ್‌ ಫಾರ್‌ ಇಂಡೋ=ಪೆಸಿಫಿಕ್‌ ಸೆಕ್ಯುರಿಟಿ ಅಫೇರ್ಸ್‌;
ರಿಯರ್‌ ಅಡ್ಮಿರಲ್‌ ಮೈಕಲ್‌ ಬೆಕರ್‌, ಸೀನಿಯರ್‌ ಡಿಫೆನ್ಸ್‌ ಅಫಿಶಿಯಲ್, ಯು.ಎಸ್‌. ರಾಯಭಾರ ಕಚೇರಿ ಹೊಸದಿಲ್ಲಿ;
ಮೀರಾ ಕೆ. ರೆಸ್ನಿಕ್‌, ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಆಫ್‌ ಸ್ಟೇಟ್‌ ಫಾರ್‌ ರೀಜನಲ್‌ ಸೆಕ್ಯುರಿಟಿ, ಬ್ಯೂರೋ ಆಫ್‌ ಪೊಲಿಟಿಕಲ್‌-ಮಿಲಿಟರಿ ಅಫೇರ್ಸ್‌;
ಜುಡಿತ್‌ ರೇವಿನ್, ಕಾನ್ಸಲ್‌ ಜನರಲ್‌, ಯು.ಎಸ್‌. ಕಾನ್ಸುಲೇಟ್‌ ಜನರಲ್‌ ಚೆನ್ನೈ;
ಜಸ್ಟಿನ್‌ ಕೆ. ಮ್ಯಾಕ್‌ಫರ್ಲಿನ್, ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಆಫ್‌ ಡಿಫೆನ್ಸ್‌ ಫಾರ್‌ ಇಂಡಸ್ಟ್ರಿಯಲ್‌ ಬೇಸ್‌ ಡೆವಲಪ್‌ಮೆಂಟ್‌ ಅಂಡ್‌ ಇಂಟರ್‌ನ್ಯಾಷನಲ್‌ ಎಂಗೇಜ್‌ಮೆಂಟ್‌;
ಮೈಕಲ್‌ ಎಫ್‌. ಮಿಲ್ಲರ್‌, ಡೆಪ್ಯುಟಿ ಡೈರೆಕ್ಟರ್‌, ಡಿಫೆನ್ಸ್ ಸೆಕ್ಯುರಿಟಿ ಕೊಆಪರೇಷನ್‌ ಏಜೆನ್ಸಿ;
ಮೇಜರ್‌ ಜನರಲ್‌ ಜುಲಿಯನ್‌ ಸಿ. ಚೀಟರ್‌, ಅಸಿಸ್ಟೆಂಟ್‌ ಡೆಪ್ಯುಟಿ ಅಂಡರ್‌ ಸೆಕ್ರೆಟರಿ ಆಫ್‌ ದಿ ಏರ್‌ಫೋರ್ಸ್‌, ಇಂಟರ್‌ನ್ಯಾಷನಲ್ ಅಫೇರ್ಸ್‌;
ಬ್ರಿಗೇಡಿಯರ್‌ ಜನರಲ್‌ ಜೊಯಲ್‌ ಡಬ್ಲ್ಯು ಸಫ್ರಾನೆಕ್‌, ಡೈರೆಕ್ಟರ್‌ ಆಫ್‌ ದಿ ಏರ್‌ಫೋರ್ಸ್‌ ಸೆಕ್ಯುರಿಟಿ ಅಸಿಸ್ಟೆಂನ್ಸ್‌ ಅಂಡ್‌ ಕೊಆಪರೇಷನ್‌ ಡೈರೆಕ್ಟೊರೇಟ್‌ ಅಂಡ್‌ ಡೈರೆಕ್ಟರ್‌ ಆಫ್‌ ಇಂಟರ್‌ನ್ಯಾಷನಲ್‌ ಅಫೇರ್ಸ್‌, ಏರ್‌ಫೋರ್ಸ್ ಮಾರ್ಷಲ್‌ ಕಮಾಂಡ್‌;
ಕಾರ್ಲಾ ಹಾರ್ನ್‌, ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ಆಫ್‌ ದಿ ನೇವಿ ಇಂಟರ್‌ನ್ಯಾಷನಲ್‌ ಪ್ರೊಗ್ರಾಮ್ಸ್‌ ಆಫೀಸ್‌;
ಜೆ. ಮಾರಿಯೊ ಮಿರಾನ್ದಾ, ಡೈರೆಕ್ಟರ್‌ ಆಫ್‌ ಟೆಕ್ನಾಲಜಿ, ಸೆಕ್ಯುರಿಟಿ, ಅಂಡ್‌ ಕೊಆಪರಟಿವ್‌ ಪ್ರೊಗ್ರಮ್ಸ್ ಅಟ್‌ ದಿ ನೇವಿ ಇಂಟರ್‌ನ್ಯಾಷನಲ್‌ ಪ್ರೊಗ್ರಾಮ್ಸ್‌ ಆಫೀಸ್‌;
ಕೇರಿ ಅರುಣ್‌, ಕೌನ್ಸಲರ್‌ ಫಾರ್‌ ಕಮರ್ಷಿಯಲ್‌ ಅಫೇರ್ರ್ಸ್‌, ಯು.ಎಸ್‌. ಕಾನ್ಸುಲೇಟ್‌ ಜನರಲ್‌ ಚೆನ್ನೈ ಮತ್ತು
ಪೀಟರ್‌ ಇವಾನ್ಸ್‌, ಡೆಪ್ಯುಟಿ ಡೈರೆಕ್ಟರ್‌ ಫಾರ್‌ ರೀಜನಲ್‌ ಸೆಕ್ಯುರಿಟಿ ಅಂಡ್‌ ಆರ್ಮ್ಸ್‌ ಟ್ರಾನ್ಸ್‌ಫರ್ಸ್‌, ಯು.ಎಸ್‌. ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌

ಅಮೆರಿಕದ ಪ್ರಮುಖ ಸೇನಾ ಕಂಪನಿಗಳಾದ, ʻಏರೋ ಮೆಟಲ್ಸ್‌ ಅಲಯನ್ಸ್‌ʼ , ʻಆಸ್ಟ್ರೋನಾಟಿಕ್ಸ್‌ ಕಾರ್ಪೋರೇಷನ್‌ ಆಫ್‌ ಅಮೆರಿಕʼ, ಬೋಯಿಂಗ್‌, ಜಿಇ ಏರೋಸ್ಪೇಸ್‌, ಜನರಲ್‌ ಅಟಾಮಿಕ್ಸ್‌ ಏರೋನಾಟಿಕಲ್‌ ಸಿಸ್ಟಮ್ಸ್‌ ಇಂಕ್‌ʼ, ಹೈ ಟೆಕ್‌ ಇಂಪೋರ್ಟ್‌ ಎಕ್ಸ್‌ಪೋರ್ಟ್‌ ಕಾರ್ಪೋರೇಷನ್‌, ಜೋನಲ್‌ ಲ್ಯಾಬೋರೆಟರೀಸ್‌, ಲಾಕ್‌ಹೀಡ್‌ ಮಾರ್ಟಿನ್‌, ಪ್ರಾಟ್‌ ಅಂಡ್‌ ವೈಟ್ನೆ ಮತ್ತು ಟಿಡಬ್ಲು ಮೆಟಲ್ಸ್‌ ಇವುಗಳ ವಿಮಾನಗಳು ಏರೋ ಇಂಡಿಯಾ 2023ರ ʻಯುಎಸ್‌ಎ ಪಾರ್ಟನರ್‌ಶಿಪ್‌ ಪೆವಿಲಿಯನ್‌ʼನ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ‌

ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್‌ ʻಫೈನಲ್‌ ಅಪ್ರೋಚ್‌ʼ ಫೆಬ್ರುವರಿ 16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.

ʻಏರೋ ಇಂಡಿಯಾದʼ ದಲ್ಲಿ ಅಮೆರಿಕದ ತೊಡಗಿಕೊಳ್ಳುವಿಕೆ ಅಮೆರಿಕ-ಭಾರತ ಸೇನಾ ಪಾಲುದಾರಿಕೆಯನ್ನು ಬಲಪಡಿಸುವುದಲ್ಲದೇ ಇಂಡೋ ಪೆಸಿಫಿಕ್‌ ಭಾಗದ ಸುರಕ್ಷತೆಗಾಗಿ ಕೈಜೋಡಿಸಿರುವ ಉಭಯ ದೇಶಗಳ ಬದ್ಧತೆಯನ್ನು ಮತ್ತಷ್ಟು ಪ್ರಚುರಪಡಿಸುತ್ತದೆ. ಈ ಪ್ರದರ್ಶನ ಅಮೆರಿಕ ಸೇನೆಯ ಯುದ್ಧ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದು, ಜಂಟಿ ಸಮರಾಭ್ಯಾಸದ ಸಾಧ್ಯತೆಗಳಿಗೆ ಉತ್ತೇಜನ ನೀಡುತ್ತದೆ. ಅಧ್ಯಕ್ಷ ಜೊ ಬೈಡನ್‌ ಅವರು ಹೇಳಿರುವಂತೆ, ʻಮುಂಬರುವ ದಶಕಗಳಲ್ಲಿ ಸ್ವತಂತ್ರ ಹಾಗೂ ಮುಕ್ತ ಇಂಡೋ ಪೆಸಿಫಿಕ್‌ ಭಾಗದ ಸಮೃದ್ಧಿಯನ್ನು ಅವಲಂಬಿಸಿ ನಮ್ಮ ಉಭಯ ದೇಶಗಳ ಭವಿಷ್ಯ, ಅಷ್ಟೇ ಅಲ್ಲ ಇಡೀ ಜಗತ್ತಿನ ಭವಿಷ್ಯ ನಿಂತಿರುತ್ತದೆʼ

ಶಿರಾ ಮಾರ್ಗವಾಗಿ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ಹೊಸ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡ ಸರ್ಕಾರ…

ಬೆಂಗಳೂರು-ಪುಣೆ ಮಧ್ಯ ಈಗಾಗಲೇ ರಾಷ್ಟ್ರೀಯ ಹೆದ್ದಾರಿ-4 ರಸ್ತೆ ಇದೆ. ಆದರೂ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಪ್ರತ್ಯೇಕವಾಗಿ ಮತ್ತೊಂದು ಹೊಸ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಭಾರತ್‌ ಮಾಲಾ ಹಂತ-2ರ ಅಡಿಯಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ನಿರ್ಧರಿಸಲಾಗಿದೆ.
ಉದ್ದೇಶಿತ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ಮಾರ್ಗವು ಮಹಾರಾಷ್ಟ್ರದ ಪುಣೆ, ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು ಕರ್ನಾಟಕದ ಅಥಣಿ ತಾಲೂಕಿನ ಬೊಮ್ಮನಾಳ್‌ನಲ್ಲಿ ಆರಂಭವಾಗಲಿದೆ. ಅಲ್ಲಿಂದ ಅಥಣಿ, ಜಮಖಂಡಿ, ಬಾಗಲಕೋಟೆ, ಮುಧೋಳ, ಬಾದಾಮಿ, ನರಗುಂದ, ರೋಣ, ಯಲಬುರ್ಗ, ಕೊಪ್ಪಳ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಜಗಳೂರು, ಚಳ್ಳಕೆರೆ, ಹಿರಿಯೂರು, ಸಿರಾ, ಮಧುಗಿರಿ, ಕೊರಟಗೆರೆ, ಡಾಬಸ್ ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ ಮೂಲಕ ಹಾದು ಹೋಗಲಿದೆ.
ಪುಣೆಯ ಕಂಜಾಳೆಯಲ್ಲಿ ಆರಂಭವಾಗಲಿರುವ ಉದ್ದೇಶಿತ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ಮಾರ್ಗವು ದೊಡ್ಡಬಳ್ಳಾಪುರ ತಾಲೂಕಿನ ಮುತುಗದಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಕೊನೆಗೊಳ್ಳಲಿದೆ.
ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಉದ್ದೇಶಿತ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕಾಗಿ ಸಮಗ್ರವಾದ ಯೋಜನಾ ವರದಿ ತಯಾರಿಸಿದೆ. ಮಹಾರಾಷ್ಟ್ರದಲ್ಲಿ ಪೂರ್ವ ಸಿದ್ದತೆಮಾಡಿಕೊಳ್ಳಲಾಗಿದೆ. ಪುಣೆ-ಬೆಂಗಳೂರು ಮಧ್ಯದಲ್ಲಿ ಗೂಗಲ್ ಮತ್ತು ಜಿಪಿಎಸ್ ಡಿಟೈಲ್ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ. ಡಿಟೈಲ್ ಸರ್ವೆ ನಂತರ ಹೆದ್ದಾರಿ ಸಾಗುವ ಮಾರ್ಗದಲ್ಲಿ ಜಿಪಿಎಸ್ ಪಿಲ್ಲರ್ ಹಾಕಲಾಗಿದೆ. ಈ ಜಿಪಿಎಸ್ ಪಿಲ್ಲರ್ ಹಾಕಿದ ನಂತರ ಪ್ರತಿಯೊಂದು ಸರ್ವೆ ನಂಬರ್ ನಲ್ಲಿರುವ ಮರ, ಗಿಡ, ಮನೆ ಇತರೆ ಎಲ್ಲ ಮಾದರಿಯ ಮಾಹಿತಿಯನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸರ್ವೆ ಇಲಾಖೆ ಏಕಕಾಲದಲ್ಲಿ ಒಟ್ಟು ಮೂರು ಮಾರ್ಗಗಳನ್ನು ಸಮಗ್ರವಾಗಿ ಜಿಪಿಎಸ್ ಸರ್ವೆ ಮಾಡಿರುತ್ತದೆ. ಆ ಮೂರು ಮಾರ್ಗಗಳಲ್ಲಿ ಒಂದು ಮಾರ್ಗ ಒಪ್ಪಿಗೆಯಾದ ನಂತರ ಜಿಪಿಎಸ್ ಪಿಲ್ಲರ್ ಹಾಕಿ ಅಂತಿಮಗೊಳಿಸಲಾಗುತ್ತದೆ. ಅಂತಿಮಗೊಳಿಸಲಾದ ಮಾರ್ವದಲ್ಲಿ ಡಿಟೈಲ್ ಸರ್ವೆ ಕಾರ್ಯವನ್ನು ಈಗಾಗಲೇ ಮಾಡಿ ಮುಗಿಸಲಾಗಿದೆ.
ಉದ್ದೇಶಿತ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ ಹೈವೇ ಬಹುಮುಖ್ಯವಾದ ವಿಷಯ ಎಂದರೆ ಯಾವುದೇ ನಗರ ಪಟ್ಟಣ, ಅರೆ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಮಾರ್ಗ ಸಂಚರಿಸುತ್ತಿಲ್ಲ. ಇದರಿಂದಾಗಿ ಉದ್ದೇಶಿತ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ ಹೈವೇ ನೇರವಾಗಿ ಸಾಗುತ್ತದೆ. ಸುಮಾರು
55 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 699 ಕಿ.ಮೀ.ಉದ್ದನೆಯ ಮಾರ್ಗ ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಆರು ಪಥಗಳಲ್ಲದೆ ಬಲ ಮತ್ತು ಎಡ ಬದಿಯ ಎರಡು ಬದಿಯಲ್ಲಿ ಎರಡೆರಡು ಸರ್ವೀಸ್ ರಸ್ತೆಗಳ ನಿರ್ಮಾಣವನ್ನೂ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ದೂರ ಅಂದರೆ 498 ಕಿ.ಮೀ ಹಾದು ಹೋಗುವ ಹೆದ್ದಾರಿ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯದಲ್ಲೇ 5,205 ಹೆಕ್ಟೇರ್‌ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.
ಉದ್ದೇಶಿತ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ಮಾರ್ಗದಲ್ಲಿ ಯಾವುದೇ ವಾಹನಗಳು ಕನಿಷ್ಠ 120 ಕಿ.ಮೀ.ವೇಗದಲ್ಲಿ ಚಲಿಸುವಂತೆ ಅಭಿವೃದ್ಧಿಪಡಿಸಲಾಗುತ್ತದೆ. ಉದ್ದೇಶಿತ ಬೆಂಗಳೂರು-ಪುಣೆ ಹಸಿರು ಎಕ್ಸ್‌ಪ್ರೆಸ್‌ ಹೈವೇ ಪ್ರಯಾಣದ ಅವಧಿ 6-7 ಗಂಟೆಗಳಿಗೆ ತಗ್ಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದು ಯೋಜನೆ ಸಂಬಂಧ ಲೋಕಸಭಾ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಬಾಣಂತಿಯರಿಗೆ ಪೌಷ್ಠಿಕ‌ಆಹಾರ ನೀಡು ಮಗು ಆರೋಗ್ಯ ಕಾಪಾಡಿ ಮಕ್ಕಳ ತಜ್ಞನ ಡಾ.ಮಂಜುನಾಥಬಾಬು

ಜನಧ್ವನಿ ವಾರ್ತೆ ಚಳ್ಳಕೆರೆ ನ.6. ಹೃದಯ ಸಂಬಂಧಿತ ಕಾಯಿಲೆಯಿಂದ ಇತ್ತೀಚೆಗೆ ಶಿಶುಗಳು ಸಾವನ್ನಪ್ಪುತ್ತಿರುವುದು ಪತ್ತೆಯಾಗಿದ್ದು, ಇದಕ್ಕೆ ಅಪೌಷ್ಠಿಕತೆ ಕಾರಣ ಎಂದು ಮಂಜುನಾಥ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಮಂಜುನಾಥ ಬಾಬು ಮಾಹಿತಿ ನೀಡಿದರು.
ನಗರದ ಮಂಜುನಾಥ ಮಕ್ಕಳ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಿಶು ಸಾವನ್ನಪ್ಪುವುದಕ್ಕೆ ಅಪೌಷ್ಠಿಕತೆಯ ಮುಖ್ಯ ಕಾರಣ, ಗರ್ಭಣಿಯಿದ್ದಾಗ ನೀಡುವ ಪೌಷ್ಠಿಕ ಆಹಾರವನ್ನು ಬಾಣಂತಿಯಾದಗ ಆಹಾರ ನೀಡಿದೆ ಉಪಹಾಸ ಇರಿಸುವುದರಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಉಂಟಾಗಿ, ಹಾಲುಕುಡಿಯುವುದು ಕಡಿಮೆ ಮಾಡುವುದು, ಉಸಿರಾಟದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ವ್ಯತ್ಯಯ ಉಂಟಾಗಿ, ಶಿಶುಗಳು ಹೃದಯ ಸಂಬಂಧಿತ ಕಾಯಿಗಳಿಂದ ಸಾವನ್ನಪ್ಪುತ್ತವೆ, ಇಲ್ಲಿಗೆ ನಾಲ್ಕು ಮಕ್ಕಳು ಸಾವನ್ನಪ್ಪಿರುವುದು ನಮ್ಮ ಆಸ್ಪತೆಯಲ್ಲಿ ವರದಿಯಾಗಿದೆ ಎಂದು ತಿಳಿಸಿದರು. ಬಾಣಂತಿಯರ ಆಹಾರ ಪದ್ದತಿ . ಬಾಣಂತಿಯರು ತಿನ್ನಬಹುದಾದ 20 ಆಹಾರಗಳ ಪಟ್ಟಿ
ಗರ್ಭ ಧರಿಸಿದ ಸಂದರ್ಭದಲ್ಲಿ ಗರ್ಭಿಣಿಯರ ದೇಹಾರೋಗ್ಯದಲ್ಲಿ ಬದಲಾವಣೆ ಕಂಡು ಬರುತ್ತದೆ. ಹಾಗಾಗಿ ನವಜಾತ ಶಿಶುವಿನ ಪೋಷಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪ್ರಸವದ ನಂತರ ಬಾಣಂತಿಯರ ಆರೋಗ್ಯವೂ ಕೂಡ.
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಹಾರಗಳ ಬಗೆಗೆ ಬಹಳಷ್ಟು ಜಾಗರೂಕರಾಗಿರಬೇಕಾಗುತ್ತದೆ. ಹೆಚ್ಚು ಖಾರ ಇರುವ ಹಾಗೂ ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ಎಂದಿಗೂ ಸೇವಿಸಬಾರದು.ಆದರೆ ಈ ವೇಳೆ ಎಷ್ಟೋ ಮಹಿಳೆಯರಿಗೆ ಇಂತಹ ಖಾರ ಅಥವಾ ಸ್ಪೈಸಿ ಮಸಾಲೆ ಇರುವ ಆಹಾರಗಳ ಮೇಲೆ ಕ್ರೇಜ್ ಇರುತ್ತದೆ.ಹಾಗಾಂತ ಹೇಳಿ ಹೆರಿಗೆ ಆದ ಕೂಡಲೇ ಇಂತಹ ಆಹಾರಗಳನ್ನು ಸೇವಿಸುವಂತಿಲ್ಲ. ಭಾರತೀಯ ಆಹಾರ ಪದ್ದತಿ ಯಲ್ಲಿ ಹೆರಿಗೆಯ ನಂತರದ ಆಹಾರದ ಬಗೆಗೂ ಪಥ್ಯಗಳಿವೆ ಎಂದರೆ ನೀವು ನಂಬಲೇಬೇಕು.ಹಾಗಾಗಿ ಹೆರಿಗೆಯ ನಂತರ ಬಾಣಂತಿಯರು ಯಾವ ಆಹಾರವನ್ನು ತೆಗೆದುಕೊಳ್ಳಬಹುದು ಹಾಗೂ ಯಾವ ಆಹಾರವನ್ನು ತೆಗೆದುಕೊಳ್ಳಬಾರದು ಎಂಬುವುದನ್ನು ಇಲ್ಲಿ ತಿಳಿದುಕೊಳ್ಳಬಹುದು. ಪ್ರಸವ ನಂತರದ ಪೋಷಣೆ ಏಕೆ ಮುಖ್ಯ.

​ಎದೆ ಹಾಲು ಉಣಿಸುವ ವೇಳೆ ಆಹಾರದ ಪದ್ದತಿ ಹೀಗಿರಬೇಕು

ಪೋಷಕಾಂಶವಿರುವ ಆಹಾರ: ಗರ್ಭಿಣಿ ಅಥವಾ ಹೆರಿಗೆ ಆದ ನಂತರ ಸಾಮಾನ್ಯವಾಗಿ ಆಯಾಸ, ಬಳಲಿಕೆ ಇರುತ್ತದೆ.ಅಲ್ಲದೇ ಮಗುವಿನ ಲಾಲನೆ‌,ಪೋಷಣೆ, ಅಸಮರ್ಪಕವಾದ ನಿದ್ದೆಯಿಂದಾಗಿ ಪುನಃ ಆಯಾಸವಾಗುವುದು ಖಂಡಿತ.ಕೆಲವೊಮ್ಮೆ ಕೆಲವು ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದಾಗಲೂ ಈ ಸಮಸ್ಯೆ ಕಾಡಬಹುದು.ಇದರಿಂದಾಗಿಯೂ ದೇಹ ಸೊರಗಬಹುದು ಅಥವಾ ಆಯಾಸ ಬಳಲಿಕೆಯಿಂದ ತಲೆನೋವು ಕಾಡಬಹುದು.ಹೀಗಾಗಿ ಹೆಚ್ಚು ಕ್ಯಾಲ್ಸಿಯಂ ಇರುವ ಸೊಪ್ಪು, ಮಾಂಸ, ದ್ವಿದಳ ಧಾನ್ಯಗಳು, ಕರ್ಜೂರ, ಅಂಜೂರವನ್ನು ಸೇವಿಸಬೇಕು. ಈ ರೀತಿಯ ಆಹಾರ ಸೇವನೆ ಬಾಣಂತಿಯರಿಗೆ ಬಹಳ ಒಳ್ಳೆಯದು.
ಎದೆಹಾಲನ್ನು ಹೆಚ್ಚಿಸುತ್ತದೆ: ಹೆಚ್ಚು ಹೆಚ್ಚು ಪೋಷಾಕಾಂಶ ಇರುವ ಆಹಾರ ಅಥವಾ ಆರೋಗ್ಯಕರವಾದ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಿದರೆ ಎದೆ ಹಾಲು ಹೆಚ್ಚುತ್ತದೆ.ಆದರೆ ಜಂಕ್‌ಫುಡ್ ಅಥವಾ ಫಾಸ್ಟ್ ಫುಡ್ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಬಾಣಂತಿಯರು ಕ್ಯಾಲ್ಸಿಯಂ ಇರುವ ಆಹಾರವನ್ನೇ ಸೇವಿಸಬೇಕು. ಮನಸ್ಥಿತಿ ಚೆನ್ನಾಗಿರಬೇಕು: ಸಾಮಾನ್ಯವಾಗಿ ಪ್ರಸವ ನಂತರದಲ್ಲಿ ಬಾಣಂತಿಯರಿಗೆ ಒಂದು ರೀತಿಯ ಡಿಪ್ರೆಷನ್ ಕಾಡುತ್ತಿರುತ್ತದೆ. ಹಾಗಾಗಿ ಪೋಷಕಾಂಶ ಇರುವ ಅಥವಾ ಆರೋಗ್ಯಯುತವಾದ ಆಹಾರ ಸೇವನೆಯಿಂದ ಈ ರೀತಿಯ ಸಮಸ್ಯೆ ಯಿಂದ ದೂರವಾಗಬಹುದು.ಅಲ್ಲದೆ ಈ‌ ಸಂದರ್ಭದಲ್ಲಿ ಹೆಚ್ಚು ಸಂತೋಷವಾಗಿರಬಹುದು ಮತ್ತು ಸದೃಡರಾಗಿರಬಹುದು. ಅಲ್ಲದೆ ಅಶಕ್ತತೆಯೂ ಕೂಡ ಕಾಡದು. ಹಾಗಾಗಿ ಈ ರೀತಿಯ ಆಹಾರ ಪದ್ದತಿಯನ್ನು ಅನುಸರಿಸಿದರೆ ಬಾಣಂತಿಯರು ಡಿಪ್ರೆಶನ್ ನಿಂದ ಪಾರಾಗಬಹುದು. ಪ್ತಸವ ನಂತರ ಸೇವಿಸಬಹುದಾದ ಇಪ್ಪತ್ತು ಭಾರತೀಯ ಆಹಾರಗಳು:ಇಲ್ಲಿ ಕೆಲವು ಆಹಾರಗಳ ವಿವರಣೆ ಇದೆ.ಬಾಣಂತಿಯರು ಇವುಗಳನ್ನು ಗಮನಿಸಬಹುದು
ನುಗ್ಗೆ ಸೊಪ್ಪು
ಮುಖ್ಯವಾಗಿ ಬಾಣಂತಿಯರಿಗೆ ಈ ನುಗ್ಗೆ ಸೊಪ್ಪನ್ನು ಹೆಚ್ಚಾಗಿ ಸೇವಿಸಲು ಕೊಡುತ್ತಾರೆ.ಯಾಕೆಂದರೆ ಇದರಲ್ಲಿ ವಿಟಮಿನ್ ಎ,ಬಿ ಮತ್ತು ಸಿ ಹಾಗೂ ಅಧಿಕ ಖನಿಜಾಂಶ,ಪೋಷಕಾಂಶದ ಪ್ರಮಾಣ ಅಧಿಕವಾಗಿ ಇರುತ್ತದೆ.ಇದರಿಂದ ದೇಹಕ್ಕೆ ಅಧ್ಭುತವಾದ ಕ್ಯಾಲ್ಸಿಯಂ ದೊರೆಯುತ್ತದೆ. ನಿಮ್ಮ ಆಹಾರ ಪದ್ದತಿಯಲ್ಲಿ ಇದನ್ನು ಹೇಗೆ ಬಳಸಬಹುದು?ಗರ್ಭಿಣಿಯಾದ ನಂತರ ಸುಮಾರು ನಾಲ್ಕು ತಿಂಗಳು ಶಾತವಾರಿ ಕಲ್ಪದೊಂದಿಗೆ ಸೇವಿಸಬಹುದು. ಅಲ್ಲದೇ ಈ ನುಗ್ಗೆ ಸೊಪ್ಪಿನಿಂದ ಸೂಪ್ ತಯಾರಿಸಿ ಸೇವಿಸಬಹುದು ಅಥವಾ ನಿಮಗೆ ಇಷ್ಟವಾಗುವ ರೀತಿಯಲ್ಲಿ ಪಲ್ಯ ಅಥವಾ ಬಟಾಟೆ ಅಥವಾ ಇನ್ನಿತರ ತರಕಾರಿಗಳೊಂದಿಗೆ ಬೆರೆಸಿ ನಿಮಗಿಷ್ಟವಾಗುವ ರೀತಿಯಲ್ಲಿ ಸೇವಿಸಬಹುದು.

ಮೊಳಕೆ ಭರಿಸಿದ ಧಾನ್ಯಗಳು: ಸಾಮಾನ್ಯವಾಗಿ ನಾವು ಬಾಲ್ಯದಿಂದಲೇ ಹೆಚ್ಚಾಗಿ ಈ ಮೊಳಕೆ ಭರಿಸಿದ ಧಾನ್ಯಗಳನ್ನು ಆಹಾರದೊಂದಿಗೆ ಬಳಸುತ್ತೇವೆ. ಒಣಗಿದ ಧಾನ್ಯಗಳಲ್ಲಿ ಹೆಚ್ಚಾಗಿ ಪೋಷಾಕಾಂಶಗಳು ಇಲ್ಲದೇ ಇರುವುದರಿಂದ ರಾಗಿ, ಗೋಧಿ, ಜೋಳ ಮುಂತಾದ ಧಾನ್ಯಗಳನ್ನು ಮೊಳಕೆ ಭರಿಸಿ ಸೇವಿಸುವುದು ಬಹಳ ಉತ್ತಮ. ಆಹಾರದಲ್ಲಿ ಇವುಗಳನ್ನು ಹೇಗೆ ಬಳಸಬಹುದು:ಈ ರಾಗಿ,ಗೋಧಿ, ಅಥವಾ ಜೋಳ ಇನ್ನಿತರ ಧಾನ್ಯಗಳನ್ನು ಮೊಳಕೆ ಭರಿಸಿದ ನಂತರ ಹಿಟ್ಟಾಗಿ ಮಾರ್ಪಾಡು ಮಾಡಿ ರೊಟ್ಟಿ ಅಥವಾ ದೋಸೆ ಮಾಡಿ ತಿನ್ನಬಹುದು ಅಥವಾ ಗಂಜಿ ಮಾಡಿಯೂ ಸೇವಿಸಿದೆ ಬಹಳ ಒಳ್ಳೆಯದು.
ಬಾದಾಮಿ
ಬಾದಾಮಿಯಲ್ಲಿ ಅತ್ಯಧಿಕವಾದ ಕ್ಯಾಲ್ಸಿಯಂ ಇರೋದ್ರಿಂದ ನಿಮ್ಮ ಆಹಾರದಲ್ಲಿ ಇದನ್ನು ಬಳಸಬಹುದು. ಅಲ್ಲದೇ ಆದಷ್ಟು ಪ್ಯೂರ್ ಆಗಿರುವ ಬಾದಾಮಿ ಸಿಕ್ಕರೆ ಬಹಳ ಒಳ್ಳೆಯದು.ಯಾಕೆಂದರೆ ಅದರಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ, ಖನಿಜಾಂಶಗಳು ದೇಹಕ್ಕೆ ಪೂರೈಕೆಯಾಗುವುದರಿಂದ ಗರ್ಭಿಣಿ ಯರು ಅಥವಾ ಬಾಣಂತಿಯರು ಈ ಬಾದಾಮಿಯನ್ನು ತಪ್ಪದೇ ತಮ್ಮ ಆಹಾರಲ್ಲಿ ಬಳಸಬಹುದು. ಬಾದಾಮಿಯನ್ನು ಹೇಗೆ ಆಹಾರವಾಗಿ ಬಳಸಬಹುದು:ಬಾದಾಮಿಯನ್ನು ಒಂದು ಗ್ಲಾಸು ಮೊದಲಿನ ರಾತ್ರಿ ನೀರಿನಲ್ಲಿ ನೆನೆಸಿಡಿ.ಹಾಗೂ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವಿಸಿ. ಇದರಿಂದಾಗಿ ಇದರಲ್ಲಿರುವ ಒಮೆಗಾ 3 ಎಂಬ ಪೋಷಕಾಂಶ ಮಗುವಿನ ಮೆದುಳಿಗೂ ಬಹಳ ಒಳ್ಳೆಯದು.

ಸೋರೆಕಾಯಿ: ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಬಾಣಂತಿಯರು ಈ ಸೋರೆಕಾಯಿಯನ್ನು ಸೇವಿಸಿದರೆ ಬಹಳ ಒಳ್ಳೆಯದು.ಇದು ಅತ್ಯಧಿಕವಾದ ಕ್ಯಾಲ್ಸಿಯಂ ನ್ನು ಒಳಗೊಂಡಿದ್ದಲ್ಲದ್ದೆ ದೇಹದಲ್ಲಿ ಜಲಸಂಚಯನಕ್ಕೂ ಸಹಕಾರಿಯಾಗುತ್ದೆ.ಅಲ್ಲದೇ ದೇಹದ ತೂಕವನ್ನು ಕಮ್ಮಿಗೊಳಿಸಲು ಸಹಾಯವಾಗುತ್ತದೆ.ಜೊತೆಗೆ ಅತ್ಯಧಿಕವಾದ ವಿಟಮಿನ್ ಎ, ಸಿ ಹಾಗೂ ಸೋಡಿಯಂ, ಖನಿಜಾಂಶ, ಕಬ್ಬಿಣಾಂಶ ಹಾಗೂ ಮ್ಯಾಗ್ನೇಶಿಯಂಗಳನ್ನು ಒಳಗೊಂಡಿದೆ ಅಲ್ಲದೆ ಶೇಕಡಾ 95% ನಷ್ಟು ನೀರಿನಾಂಶವನ್ನು ಒಳಗೊಂಡಿದೆ. ಆಹಾರ ಪದ್ದತಿ ಯಲ್ಲಿ ಹೇಗೆ ಬಳಸಬಹುದು, ಈ ಸೋರೆಕಾಯಿಯನ್ನು ಪದಾರ್ಥ ಅಥವಾ ಪಲ್ಯ ಮಾಡುವ ಮೂಲಕ ಸೇವಿಸಬಹುದು.ಒಂದು ವೇಳೆ ನೀವು‌ ಸಿಹಿಯನ್ನು ಇಷ್ಟ ಪಡುವವರಾದರೆ ಸೋರೆಕಾಯಿ‌ ಹಲ್ವ ಮಾಡಿಯೂ‌ ಸೇವಿಸಬಹುದು.ಜೊತೆಗೆ ಈ ಹಲ್ವಕ್ಕೆ ಬಾದಮಿ ಬೀಜವನ್ನು‌ಸೇರಿಸಿ ಸೇವಿಸಿ‌ . ಇದು ಪೋಷಾಕಾಂಶಕ್ಕೆ ಬಹಳ ಒಳ್ಳೆಯ ರೆಸಿಪಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಯಲ್ಲಿ ಆಯುರ್ವೇದ ಅಂಶಗಳು ಬಹಳಷ್ಟು ಹೇರಳವಾಗಿದೆ‌ ಮತ್ತು ಇದು ಎಲ್ಲಾ ರೀತಿಯ ಕಾಯಿಲೆಗಳಿಂದ‌ ಮುಕ್ತಗೊಳಿಸುವ ಸಾಮರ್ಥ್ಯ ಇದಕ್ಕಿದೆ.ಏಕೆಂದರೆ ಬೆಳ್ಳುಳ್ಳಿ ಯನ್ನು‌ಸೇವಿಸುವುದರಿಂದ ನಮ್ಮ ದೇಹದಲ್ಲಿ‌ರೋ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಇದನ್ನು ಹಲವಾರು ಪೇಸ್ಟ್ ಗಳಲ್ಲಿಯೂ ಬಳಸುತ್ತಾರೆ. ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸುವ ಕ್ರಮ:ತರಕಾರಿಗಳನ್ನು ಪದಾರ್ಥ ಮಾಡುವ ವೇಳೆ ಈ ಬೆಳ್ಳುಳ್ಳಿ ಯನ್ನು ಸೇರಿಸಬಹುದು ಅಥವಾ ಸೂಪ್‌ ಮಾಡಿಯೂ ಕುಡಿಯಬಹುದು.

ಜೀರಿಗೆ: ಜೀರಿಗೆಯನ್ನು ಹೆಚ್ಚಾಗಿ‌ ಮಸಾಲೆ ಪದಾರ್ಥ ದೊಂದಿಗೆ ಬಳಸುತ್ತಾರೆ.ಇದರ ಉಪಯೋಗಗಳು ಅಪಾರವಾಗಿದ್ದು ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಸಂಚಲನವನ್ನು ಸುಗಮಗೊಳಿಸುತ್ತದೆ. ಅಲ್ಲದೇ ಅಧಿಕವಾದ ಕ್ಯಾಲ್ಸಿಯಂ ಕಬ್ಬಿಣಾಂಶವನ್ನೂ ಒಳಗೊಂಡಿದೆ. ಆಹಾರ ಪದ್ದತಿಯಲ್ಲಿ ಜೀರಿಗೆಯನ್ನು ಬಳಸುವ ಕ್ರಮ:ಜೀರಿಗೆಯನ್ನು ಪೌಡರ್ ರೀತಿಯಲ್ಲಿ ಪುಡಿ ಮಾಡಿಕೊಂಡು ಬಳಸುವುದು ಉತ್ತಮ.ಇದನ್ನು ಹಾಲು ಅಥವಾ ಬೆಲ್ಲದೊಂದಿಗೆ‌ ಬೆರೆಸಿ ಸೇವಿಸಬಹುದು.ಇದರಿಂದಾಗಿ ಎದೆ ಹಾಲು ಹೆಚ್ಚಾಗುತ್ತದೆ.

ರಾಗಿ (Finger Millet)
ಭಾರತದಲ್ಲಿ ರಾಗಿ ಎಂದು ಕರೆಯಲ್ಪಡುವ ಫಿಂಗರ್ ಮಿಲ್ಲೆಟ್, ಸಾಮಾನ್ಯವಾಗಿ ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವನ್ನು ಹೆಚ್ಚಿಸುವುತ್ತದೆ. ವಿಶೇಷವಾಗಿ, ನೀವು ಲ್ಯಾಕ್ಟೋಸ್ ಕೊರತೆ ಇದ್ದರೆ, ರಾಗಿಯು ನಿಮಗೆ ಅಗತ್ಯವಿರುವ ಪೋಷಣೆಯನ್ನು ನೀಡುವುದಲ್ಲದೇ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ. • ರಾಗಿ ರೊಟ್ಟಿ ಆಹಾರದಲ್ಲಿ ರಾಗಿಯನ್ನು ಬಳಸುವ ಕ್ರಮ: ದೋಸೆ, ಇಡ್ಲಿ ಮತ್ತು ಚಪಾತಿಗಳಂತಹ ಆಹಾರ ಪದಾರ್ಥಗಳಲ್ಲಿ ರಾಗಿಯ ಬಳಕೆ ಮಾಡಬಹುದು. ಅಲ್ಲದೇ ನಿಮ್ಮ ದೈನಂದಿನ ಆಹಾರಕ್ರಮದ ಒಂದು ಭಾಗವಾಗಿಯೂ ಬಳಸಬಹುದು.

ಅಂಟಿನ ಉಂಡೆ : (ಗೋಂಡ್ ) ಚಳಿಗಾಲದಲ್ಲಿ ಅಂಟಿನ ಉಂಡೆಯನ್ನು ಸೇವಿಸಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಇದು ದೇಹಕ್ಕೆ ಉತ್ತಮ ಶಾಖದ ಮೂಲ. ಅಲ್ಲದೇ ಚೊಚ್ಚಲ ತಾಯಂದಿರಿಗೆ ಇದನ್ನು ಸೇವಿಸಲು ಒತ್ತಾಯಿಸುತ್ತಾರೆ, ಏಕೆಂದರೆ ಇದು ಹಾಲುಣಿಸುವಿಕೆಗೆ ಸಹಾಯ ಮಾಡುತ್ತದೆ. ಆಹಾರದಲ್ಲಿ ಅಂಟಿನ ಉಂಡೆಯನ್ನು ಬಳಸುವ ಕ್ರಮ:ಅಂಟಿನ ಉಂಡೆಯಿಂದ ಲಡ್ಡೂಗಳನ್ನು ತಯಾರಿಸಬಹುದು. ಇದು ಅತ್ಯಂತ ಜನಪ್ರಿಯ ಮತ್ತು ಸುಲಭ ಮಾರ್ಗವಾಗಿದೆ.

​ಹಸಿರು ತರಕಾರಿಗಳು ಮತ್ತು ತಾಜಾ ಹಣ್ಣುಗಳು
ಸಿಟ್ರಸ್ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ, ಮಹಿಳೆಯರಲ್ಲಿ ಸ್ತನ್ಯಪಾನಕ್ಕಾಗಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇನ್ನು ಹಸಿರು ತರಕಾರಿಗಳು ದೇಹಕ್ಕೆ ಉತ್ತಮ ಪ್ರಮಾಣದ ಕಬ್ಬಿಣ, ವಿಟಮಿನ್ ‘ಎ’ ಮತ್ತು ಫೋಲೇಟ್ ಗಳನ್ನು ನೀಡಲು ಸಹಕಾರಿಯಾಗಿವೆ. ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸಬಹುದಾದ ಕ್ರಮ : ಹೆಚ್ಚಿನ ಹಣ್ಣುಗಳನ್ನು ಹಾಗೆಯೇ (ಕಚ್ಛಾ) ತಿನ್ನಬಹುದು ಅಥವಾ ಹಣ್ಣಿನ ರಸಗಳ ಮೂಲಕ ಸೇವಿಸಬಹುದು. ಇನ್ನು ಹಸಿರು ತರಕಾರಿಗಳನ್ನು ಸಲಾಡ್‌ಗಳಲ್ಲಿ ಅಥವಾ ಊಟದ ಸಮಯದಲ್ಲಿ ಬೇಯಿಸಿ ತಿನ್ನಬಹುದು.

ತೊಗರಿ ಬೇಳೆ (ದಾಲ್ ) : ಕೊಬ್ಬಿನ ಸೇರ್ಪಡೆ ಇಲ್ಲದ ತೊಗರಿ ಬೇಳೆಯು ಪ್ರೋಟೀನ್‌ನ ಒಂದು ದೊಡ್ಡ ಮೂಲ ಮತ್ತು ನಿಮ್ಮಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುವ ಅಪರೂಪದ ಭಕ್ಷ್ಯಗಳಲ್ಲಿ ಇದೂ ಒಂದು. ಆಹಾರದಲ್ಲಿ ತೊಗರಿಬೇಳೆಯನ್ನು ಬಳಸುವ ಕ್ರಮ: ತೊಗರಿ ಬೇಳೆಯನ್ನು ಬೇಯಿಸಿದ ರೂಪದಲ್ಲಿ, ಸೂಪ್ ಅಥವಾ ಕೆಲವು ತರಕಾರಿಗಳೊಂದಿಗೆ ಬೆರೆಸಿ, ನಿಮಗಿಷ್ಟವಾದ ಖಾದ್ಯವನ್ನು ಮಾಡಿ ಸೇವಿಸಬಹುದು.

ಓಟ್ಸ್
ಕಬ್ಬಿಣಾಂಶ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಪೂರೈಕೆದಾರರಾಗಿರುವುದರಿಂದ, ಓಟ್ಸ್ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಅಲ್ಲದೇ, ಉತ್ತಮ ಪ್ರಮಾಣದ ನಾರಿನಾಂಶವನ್ನು ಹೊಂದಿರುವುದರಿಂದ ಓಟ್ಸ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಆಹಾರದಲ್ಲಿ ಓಟ್ಸ್ ನ್ನು ಬಳಸುವ ಕ್ರಮ:ಓಟ್ಸ್ ನ್ನು ಸಾಮಾನ್ಯವಾಗಿ ಹಾಲು ಅಥವಾ ನೀರಿನಿಂದ ಬೇಯಿಸಲಾಗುತ್ತದೆ. ಈ ಮಿಶ್ರಣಗಳನ್ನು ಕತ್ತರಿಸಿದ ಹಣ್ಣುಗಳು ಮತ್ತು ಬೀಜಗಳೊಂದಿಗೆ ಸೇರಿಸಿದರೆ ಇದರ ರುಚಿ ಇನ್ನೂ ಹೆಚ್ಚಾಗಿ, ಪೋಷಣೆಯನ್ನೂ ನೀಡುತ್ತದೆ.

ಕೇರಮ್ ಬೀಜಗಳು : (ಓಮ) ಭಾರತದಲ್ಲಿ ಅಜ್ವೈನ್ ಎಂದು ಕರೆಯಲ್ಪಡುವ ಈ ಬೀಜಗಳು ಚೊಚ್ಚಲ ತಾಯಂದಿರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಈ ಬೀಜಗಳು ಅನಿಲ ಮತ್ತು ಅಜೀರ್ಣ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೇಗವಾಗಿ ಕೆಲಸ ಮಾಡುತ್ತದೆ. ಆಹಾರದಲ್ಲಿ ಅಜ್ವೈನ್ ನ್ನು ಬಳಸುವ ಕ್ರಮ: ಅಜ್ವೈನ್ ಅನ್ನು ನೀರಿನಲ್ಲಿ ಕುದಿಸಿ, ಆ ದ್ರವವನ್ನು ಸೇವಿಸಬಹುದಾಗಿದೆ.

ಅರಿಶಿನ
ಗಾಯವನ್ನು ಗುಣಪಡಿಸುವ ಗುಣಗಳನ್ನು ಹೊಂದಿರುವ ಅರಶಿನದ ಸಾಮಾನ್ಯ ಆರೋಗ್ಯ ಕ್ರಮ ಎಲ್ಲರಿಗೂ ತಿಳಿದಿದೆ. ಇದು ಯಕೃತ್ತಿನ ವಿಷತ್ವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಸುಧಾರಿಸುತ್ತದೆ. ಆಹಾರದಲ್ಲಿ ಅರಶಿನವನ್ನು ಬಳಸುವ ಕ್ರಮ: ಅರ್ಧ ಚಮಚ ಅರಿಶಿನವನ್ನು ಹಾಲು ಅಥವಾ ನಿಮ್ಮ ಆಹಾರದೊಂದಿಗೆ ದಿನನಿತ್ಯ ಸೇರಿಸುವುದು ಅನಿವಾರ್ಯವಾಗಿರುತ್ತದೆ.

ಪಂಜೇರಿ (ಪಂಜಾಬಿ‌ಖಾದ್ಯ): ಬೇಯಿಸಿದ ಪೌಷ್ಠಿಕಾಂಶದ ಪೂರಕವಾದ ಪಂಜೇರಿಯನ್ನು ಪಂಜಾಬಿನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಂಜೇರಿ ಆರೋಗ್ಯಕರ ಅಂಶಗಳನ್ನು ಹೊಂದಿದ್ದು ಚೊಚ್ಚಲ ತಾಯಿಯ ಚಯಾಪಚಯವನ್ನು ಸುಧಾರಿಸಲು ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಪಂಜೇರಿಯನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸುವ ರೀತಿ : ಪಂಜೇರಿಯನ್ನು ಸಾಮಾನ್ಯವಾಗಿ ಹಲ್ವಾ ರೂಪದಲ್ಲಿ ಅಥವಾ ಲಡ್ಡೂಗಳನ್ನು ತಯಾರಿಸಿ ತಿನ್ನಬಹುದು.

ಶುಂಠಿ
ಒಣ ಶುಂಠಿ ಪುಡಿ ಅನೇಕ ಉರಿಯೂತದ ಗುಣಗಳನ್ನು ಹೊಂದಿದ್ದು, ಅನಿಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಶುಂಠಿಯನ್ನು ಬಳಸುವ ಕ್ರಮ:ಒಣ ಶುಂಠಿ ಪುಡಿಯನ್ನು ಅನೇಕ ಬಗೆಯ ಖಾದ್ಯಗಳಲ್ಲಿ ಪ್ರಮುಖ ಮಸಾಲೆಗಳಾಗಿ ಬಳಸಬಹುದು.

ಸಾಲ್ಮನ್ (ಒಂದು ಜಾತಿಯ ಮೀನು) :ಸಾಲ್ಮನ್, ಡಿಹೆಚ್ಎನ್ನು ಹೊಂದಿದ್ದು ಕೊಬ್ಬಿನಾಮ್ಲ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೇ, ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡಿ, ನಿಮ್ಮಲ್ಲಿನ ಖಿನ್ನತೆಯನ್ನು ನಿವಾರಿಸುತ್ತದೆ. ಇದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವ ಬಗೆ : ಸಾಲ್ಮನ್ ಭಕ್ಷ್ಯ ನಿಮ್ಮ ಆಹಾರದ ಒಂದು ಭಾಗವಾಗಿರಬೇಕಷ್ಟೇ ಹೊರತು ವಾರದಲ್ಲಿ ಎರಡು ದಿನಕ್ಕಿಂತ ಹೆಚ್ಚು ಬಾರಿ‌ ಸೇವಿಸುವಂತಿರಬಾರದು.

ಮೆಂತೆ ಕಾಳು
ಆಹಾರಗಳಲ್ಲಿ ಮೆಂತೆ ಸೊಪ್ಪು ಹಾಗೂ ಮೆಂತೆ‌ಬೀಜವನ್ನು ಹಲವಾರು ಕಾರಣಗಳಿಗಾಗಿ ಬಳಸುತ್ತಾರೆ ಮತ್ತು‌ ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಪ್ರಮಾಣವೂ ಇದೆ. ಅಲ್ಲದೇ ಹೆರಿಗೆ ಆದ ನಂತರ ಸುಮಾರು ಆರು ತಿಂಗಳು ಇದನ್ನು ಆಹಾರದಲ್ಲಿ ಬಳಸಿದರೆ ಎದೆ ಹಾಲಿನ ಪ್ರಮಾಣ ಹೆಚ್ಚಾಗುವುದಲ್ಲದೇ ಸುಸ್ತು ನಿಶ್ಯಕ್ತಿಯಿಂದ ಮುಕ್ತಿ ಪಡೆಯಬಹುದು. ಆಹಾರದಲ್ಲಿ ಮೆಂತೆಯನ್ನು ಬಳಸುವ ಕ್ರಮ:ಸಾರು ಅಥವಾ ಸಾಂಬಾರು ಮಾಡುವ ಸಂದರ್ಭದಲ್ಲಿ ಈ ಮೆಂತೆ ಸೊಪ್ಪು ಅಥವಾ ಧಾನ್ಯಗಳನ್ನು ಬಳಸಬಹುದು.ಅಲ್ಲದೇ ಇದನ್ನು ಹುರಿದು ಬೆಳ್ಳುಳ್ಳಿ ಹಾಗೂ ಈರುಳ್ಳಿ ಯೊಂದಿಗೆ ಸ್ನಾಕ್ ರೀತಿಯಲ್ಲಿ ಸೇವಿಸಬಹುದು. ಅಲ್ಲದೇ ಪಂಜೀರಿ( ಪಂಜಾಬ್ ಖಾದ್ಯ) ಹಾಗೂ ಲಡ್ಡು ಜೊತೆ ಸೇರಿಸಿ ಸೇವಿಸಬಹುದು.

ಎಳ್ಳು: ಸಾಮಾನ್ಯವಾಗಿ ಭಾರತದಲ್ಲಿ ದೊರೆಯುವ ಎಲ್ಲಾ ರೀತಿಯ ಧಾನ್ಯ ಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಖನಿಜಾಂಶ ಹೇರಳವಾಗಿರುತ್ಯದೆ ಇದು ಬಾಣಂತಿಯರ ಆರೋಗ್ಯಕ್ಕೆ ಬಹಳ ಉಪಕಾರಿ ಯಾಗುತ್ತದೆ. ಇದು ಕರುಳಿಗೆ ಹಾಗೂ ಜೀರ್ಣಕ್ರಿಯೆ ಗೆ ಬಹಳ ಸಹಕಾರಿಯಾಗುತ್ತದೆ.

ಮೊಟ್ಟೆ
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲ. ಡಿಎಚ್‌ಎ ಬಲವರ್ಧಿತ ಮೊಟ್ಟೆಗಳನ್ನು ಸೇವಿಸುವುದರಿಂದ ಎದೆ ಹಾಲಿನಲ್ಲಿರುವ ಕೊಬ್ಬಿನಾಮ್ಲವನ್ನು ಹೆಚ್ಚಿಸಿ, ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ನೀಡುತ್ತದೆ. ಮೊಟ್ಟೆಯನ್ನು ಆಹಾರಕ್ರಮದಲ್ಲಿ ಬಳಸಬಹುದಾದ ರೀತಿ : ಮೊಟ್ಟೆಗಳನ್ನು ಆಮ್ಲೆಟ್ ತಯಾರಿಸಿ, ಅವುಗಳನ್ನು ಕುದಿಸಿ ಅಥವಾ ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿ ಸೇವಿಸಬಹುದು.

ಮಾಂಸ : ಮಾಂಸವು ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್ ‘ಬಿ’ ’12 ‘ನಲ್ಲಿ ಹೆಚ್ಚು ಸಮೃದ್ಧ ಎಂದು ತಿಳಿದುಬಂದಿದೆ. ಇದು ಶಕ್ತಿಯ ಮಟ್ಟವನ್ನು ಉನ್ನತ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರಕ್ರಮದಲ್ಲಿ ಮಾಂಸವನ್ನು ಬಳಸುವ ಬಗೆ: ನೇರ ಮಾಂಸವು ನಿಮ್ಮ ಊಟದ ಒಂದು ಭಾಗವಾಗಿರಬಹುದು, ನೀವು ಆಯ್ಕೆ ಮಾಡಿದ ರೀತಿಯಲ್ಲಿ ಬೇಯಿಸಿ, ಭಕ್ಷ್ಯವಾಗಿ ಅಥವಾ ಮಸಾಲೆ ಮಾಡಿ ತಿನ್ನಬಹುದು. ಹೆರಿಗೆಯ ನಂತರ ಸರಿಯಾದ ರೀತಿಯ ಆಹಾರ ಸೇವನೆಗೆ ಭಾರತೀಯ ತಾಯಂದಿರಿಗೆ ಹಲವಾರು ಆಯ್ಕೆಗಳಿವೆ. ತಾಯಿಯು ಹೊಂದಿರುವ ಆಹಾರ‌ ಹೆರಿಗೆಯ ನಂತರದ, ತಾಯಿ ಮತ್ತು ಮಗುವಿಗೆ ನೀಡುವ ಆಹಾರದಲ್ಲಿ ಎಲ್ಲಾ ಪೌಷ್ಠಿಕಾಂಶಗಳು ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಲೇಬೇಕು.ಏಕೆಂದರೆ ಪ್ರಸವ ನಂತರ ತಾಯಿ ಹಾಗೂ ಮಗುವಿನ ಆರೈಕೆ ಅತ್ಯಂತ ಸೂಕ್ತವಾದುದು ಎಂದು ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ

You cannot copy content of this page